Sdpi Dk Mangalore City District

Sdpi Dk Mangalore City District SOCIAL DEMOCRATIC PARTY OF INDIA DAKSHINA KANNADA MANGALORE CITY DISTRICT

19/08/2026

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಕ್ಕೊತ್ತಾಯ ಸಭೆ | CHALO BENGALURU

ನಿಯಮ ಮತ್ತು ಅವಧಿ ಮೀರಿ ಕಾರ್ಯಾಚರಣೆ ಮಾಡುತ್ತಿರುವ ಅಕ್ರಮ ಬ್ರಹ್ಮರ ಕೊಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ🦵🦵🦵🦵🦵...
18/08/2026

ನಿಯಮ ಮತ್ತು ಅವಧಿ ಮೀರಿ ಕಾರ್ಯಾಚರಣೆ ಮಾಡುತ್ತಿರುವ ಅಕ್ರಮ ಬ್ರಹ್ಮರ ಕೊಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ
🦵🦵🦵🦵🦵🦵🦵🦵
🛑DC ಕಚೇರಿ ಚಲೋ*🛑

SDPI-Mangaluru City District

Enjoy the videos and music you love, upload original content, and share it all with friends, family, and the world on YouTube.

17/08/2026

ದರೋಡೆ ಶೆಡ್ ಮುಚ್ಚಿರಿ...!
ಸಾರ್ವಜನಿಕರಿಗೆ ಕಿರಿ ಕಿರಿ ನಿಲ್ಲಿಸಿ...!

*ಬೃಹತ್ ಪಾದಯಾತ್ರೆಯೊಂದಿಗೆ ಡಿಸಿ ಕಚೇರಿ ಚಲೋ*

ಬಿಸಿ ರೋಡ್ ಟೋಲ್ ನಿಂದ ಮಂಗಳೂರು ಡಿಸಿ ಕಚೇರಿಗೆ

18 ಆಗಸ್ಟ್ 2026 (ನಾಳೆ) ಬೆಳಿಗ್ಗೆ 9.30ಕ್ಕೆ

ಭಾಗವಹಿಸಿ... ಯಶಸ್ವಿಗೊಳಿಸಿ...

ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆಯುವುದಲ್ಲ; ಪ್ರತಿಯೊಬ್ಬ ಭಾರತೀಯನಿಗೂ ಭಯವಿಲ್ಲದೆ, ಗೌರವದಿಂದ, ಸಮಾನ ಹಕ್ಕುಗಳೊ...
14/08/2026

ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆಯುವುದಲ್ಲ; ಪ್ರತಿಯೊಬ್ಬ ಭಾರತೀಯನಿಗೂ ಭಯವಿಲ್ಲದೆ, ಗೌರವದಿಂದ, ಸಮಾನ ಹಕ್ಕುಗಳೊಂದಿಗೆ ಬದುಕುವ ಅವಕಾಶ ದೊರೆಯುವುದೇ ನಿಜವಾದ ಸ್ವಾತಂತ್ರ್ಯ

ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡು 79 ವರ್ಷಗಳು ಕಳೆದಿವೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಅಸಂಖ್ಯಾತ ಹೋರಾಟಗಾರರ ಬಲಿದಾನದ ಫಲವಾಗಿ ನಾವು ಇಂದು ಸ್ವತಂತ್ರ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ಅವರ ತ್ಯಾಗ, ಹೋರಾಟ ಮತ್ತು ದೇಶಪ್ರೇಮವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಆದರೆ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ನಾವು ಮತ್ತಷ್ಟು ಆಳವಾಗಿ ಅರ್ಥಮಾಡಿಕೊಳ್ಳಬೇಕಿದೆ.

ಒಬ್ಬ ಬಡ ಕುಟುಂಬದಲ್ಲಿ ಹುಟ್ಟಿದ ಮಗುವಿಗೂ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಮಗುವಿಗೂ ಸಮಾನ ಅವಕಾಶ ದೊರೆಯಬೇಕು.ಯಾವುದೇ ವ್ಯಕ್ತಿ ತನ್ನ ಧರ್ಮ, ಜಾತಿ, ಭಾಷೆ, ಲಿಂಗ ಅಥವಾ ಸಾಮಾಜಿಕ ಹಿನ್ನೆಲೆಯ ಕಾರಣಕ್ಕೆ ತಾರತಮ್ಯಕ್ಕೆ ಒಳಗಾಗಬಾರದು. ಒಬ್ಬ ಸಾಮಾನ್ಯ ನಾಗರಿಕನು ಅಧಿಕಾರದ ಮುಂದೆ ತನ್ನ ಹಕ್ಕುಗಳನ್ನು ಕೇಳಲು ಭಯಪಡುವ ಪರಿಸ್ಥಿತಿ ಇರಬಾರದು.
ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ, ರೈತರಿಗೆ ನ್ಯಾಯಯುತ ಬೆಲೆ, ಕಾರ್ಮಿಕರಿಗೆ ಗೌರವಯುತ ಬದುಕು, ಮಹಿಳೆಯರಿಗೆ ಸುರಕ್ಷತೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ಭದ್ರತೆ ದೊರೆಯಬೇಕು.

ಆದ್ದರಿಂದ ನಮ್ಮ ಸ್ವಾತಂತ್ರ್ಯದ ಹೋರಾಟವು ಕೇವಲ ವಿದೇಶಿ ಆಳ್ವಿಕೆಯಿಂದ ಮುಕ್ತಿಗಾಗಿ ನಡೆದ ಹೋರಾಟವಾಗಿರಲಿಲ್ಲ. ಅದು ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ ಮತ್ತು ಅಸಮಾನತೆಯ ವಿರುದ್ಧ ನಡೆದ ಹೋರಾಟವೂ ಆಗಿತ್ತು.ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವದ ಭರವಸೆಯನ್ನು ನೀಡಿದೆ. ಈ ಸಂವಿಧಾನಿಕ ಮೌಲ್ಯಗಳನ್ನು ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು.

ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಗೌರವ ಮತ್ತು ನ್ಯಾಯ ದೊರೆಯುವ ಭಾರತವೇ ನಮ್ಮ ಕನಸಿನ ಭಾರತ.

ದೇಶದ ಸ್ವಾತಂತ್ರ್ಯವನ್ನು ಕೇವಲ ಧ್ವಜಾರೋಹಣ ಮತ್ತು ಘೋಷಣೆಗಳಿಗೆ ಸೀಮಿತಗೊಳಿಸದೆ, ಅದರ ನಿಜವಾದ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ.

ಸ್ವಾತಂತ್ರ್ಯವನ್ನು ಸಂಭ್ರಮಿಸೋಣ.
ಸಂವಿಧಾನವನ್ನು ರಕ್ಷಿಸೋಣ.
ಸಾಮಾಜಿಕ ನ್ಯಾಯವನ್ನು ಸ್ಥಾಪಿಸೋಣ.
ದ್ವೇಷವನ್ನು ತಿರಸ್ಕರಿಸಿ, ಸಹೋದರತ್ವವನ್ನು ಬೆಳೆಸೋಣ.

ಜೈ ಹಿಂದ್

ಅಶ್ರಫ್ ಅಡ್ಡೂರು
ಜಿಲ್ಲಾಧ್ಯಕ್ಷರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು ನಗರ ಜಿಲ್ಲೆ

https://youtube.com/live/V9yuSlqUEwI?feature=shareYouTube Title:🔴 LIVE | ಪತ್ರಿಕಾಗೋಷ್ಠಿ | SDPI ಮಂಗಳೂರು | 14 ಆಗಸ್ಟ್ 2026 |...
14/08/2026

https://youtube.com/live/V9yuSlqUEwI?feature=share
YouTube Title:
🔴 LIVE | ಪತ್ರಿಕಾಗೋಷ್ಠಿ | SDPI ಮಂಗಳೂರು | 14 ಆಗಸ್ಟ್ 2026 |

Description:
🔴 ಪತ್ರಿಕಾಗೋಷ್ಠಿ – ನೇರ ಪ್ರಸಾರ

SDPI – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವತಿಯಿಂದ ಆಯೋಜಿಸಿರುವ ಪತ್ರಿಕಾಗೋಷ್ಠಿ.

📅 ದಿನಾಂಕ: 14 ಆಗಸ್ಟ್ 2026, ಶುಕ್ರವಾರ
⏰ ಸಮಯ: ಬೆಳಿಗ್ಗೆ 11 ಗಂಟೆಗೆ

Enjoy the videos and music you love, upload original content, and share it all with friends, family, and the world on YouTube.

05/08/2026

ರಾಜ್ಯ ಸರ್ಕಾರದ "ವಾರಂಟಿ ಮುಗಿಸಿದ ಗ್ಯಾರಂಟಿ ಸ್ಕೀಮ್ ಗಳು" SDPI PRESS MEET

ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆ: ಸಾರ್ವಜನಿಕರು ಎಚ್ಚರಿಕೆ ವಹಿಸಿ, ಕಾರ್ಯಕರ್ತರು ತುರ್ತು ಸೇವೆಗೆ ಸನ್ನದ್ಧರಾಗಿರಿ – SDPI ಜಿಲ್ಲಾಧ್ಯಕ್ಷ...
01/08/2026

ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆ: ಸಾರ್ವಜನಿಕರು ಎಚ್ಚರಿಕೆ ವಹಿಸಿ, ಕಾರ್ಯಕರ್ತರು ತುರ್ತು ಸೇವೆಗೆ ಸನ್ನದ್ಧರಾಗಿರಿ – SDPI ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರು

ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಏರಿಕೆಯಾಗುತ್ತಿದೆ. ನದಿ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿರುವ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಶ್ರಫ್ ಅಡ್ಡೂರು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನದಿ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ಯಾವುದೇ ನಿರ್ಲಕ್ಷ್ಯ ತೋರದೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳು ನೀಡುವ ಎಲ್ಲಾ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಪಾಯದ ಸಾಧ್ಯತೆ ಕಂಡುಬಂದಲ್ಲಿ ಜೀವ ರಕ್ಷಣೆಗೆ ಆದ್ಯತೆ ನೀಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಕೃತಿ ವಿಕೋಪದಂತಹ ಸಂಕಷ್ಟದ ಸಂದರ್ಭದಲ್ಲಿ ಪರಸ್ಪರ ಸಹಕಾರ ಮತ್ತು ಮಾನವೀಯ ಸೇವೆ ಅತ್ಯಂತ ಮುಖ್ಯವಾಗಿದೆ. ಪ್ರವಾಹ ಅಥವಾ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವಾಗುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಎಸ್‌ಡಿಪಿಐಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಮ್ಮ ಪ್ರದೇಶಗಳಲ್ಲಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿ, ಅಗತ್ಯವಿದ್ದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಮತ್ತು ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಲು ಸಂಪೂರ್ಣ ಸನ್ನದ್ಧರಾಗಿರುವಂತೆ ಅಶ್ರಫ್ ಅಡ್ಡೂರು ಕರೆ ನೀಡಿದ್ದಾರೆ.

ಖ್ಯಾತ ಇಸ್ಲಾಮಿಕ್ ವಿದ್ವಾಂಸ,  ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿದ್ದ   ಶಿಕ್ಷಣ ತಜ್ಞ, ಸಮಾಜ ಸುಧಾರಕ ಹಾಗೂ...
23/07/2026

ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಸ್ಥಾನದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿಕ್ಷಣ ತಜ್ಞ, ಸಮಾಜ ಸುಧಾರಕ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದ ಪ್ರೊ. ಅಲಿಕುಟ್ಟಿ ಉಸ್ತಾದ್ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ.

ಅವರು ತಮ್ಮ ಬದುಕಿನುದ್ದಕ್ಕೂ ಇಸ್ಲಾಮಿನ ಶಾಂತಿಯ ಸಂದೇಶವನ್ನು ಸಾರುವುದರ ಜೊತೆಗೆ ಶಿಕ್ಷಣ, ಧಾರ್ಮಿಕ ಜಾಗೃತಿ ಹಾಗೂ ಸಮಾಜದ ನೈತಿಕ ಮೌಲ್ಯಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಇಸ್ಲಾಮಿಕ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

ಅಲ್ಲಾಹನು ಅವರಿಗೆ ತನ್ನ ಅಪಾರ ಕರುಣೆಯನ್ನು ನೀಡಿ, ಜನ್ನತುಲ್ ಫಿರ್ದೌಸ್‌ನಲ್ಲಿ ಉನ್ನತ ಸ್ಥಾನವನ್ನು ಅನುಗ್ರಹಿಸಲಿ. ಅವರ ಕುಟುಂಬದವರು, ಶಿಷ್ಯವೃಂದ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ತಾಳ್ಮೆ ಮತ್ತು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್.

– ಅಶ್ರಫ್ ಅಡ್ಡೂರು
ಜಿಲ್ಲಾಧ್ಯಕ್ಷರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)
ಮಂಗಳೂರು ನಗರ ಜಿಲ್ಲೆ

ಹಿರಿಯ ದಲಿತ ಹೋರಾಟಗಾರ ಎಂ. ದೇವದಾಸ್ ಬಜ್ಪೆ ಅವರ ನಿಧನಕ್ಕೆ ಸಂತಾಪಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಹಿರಿಯ ಹೋರಾಟಗಾರ ಹಾಗೂ ಸಂಸ...
22/07/2026

ಹಿರಿಯ ದಲಿತ ಹೋರಾಟಗಾರ ಎಂ. ದೇವದಾಸ್ ಬಜ್ಪೆ ಅವರ ನಿಧನಕ್ಕೆ ಸಂತಾಪ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಹಿರಿಯ ಹೋರಾಟಗಾರ ಹಾಗೂ ಸಂಸ್ಥಾಪಕರಲ್ಲಿ ಪ್ರಮುಖರಾದ ಎಂ. ದೇವದಾಸ್ ಬಜ್ಪೆ ಅವರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ.

ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಅವರು ಸಲ್ಲಿಸಿದ ಸೇವೆ ಮತ್ತು ಹೋರಾಟ ಸದಾ ಸ್ಮರಣೀಯವಾಗಿದೆ. ಅವರ ಅಗಲಿಕೆ ಸಾಮಾಜಿಕ ನ್ಯಾಯದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ.

ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಮತ್ತು ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಅಡ್ಡೂರು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

🛑 LIVE : ಮಂಗಳೂರು | SIR ಬಗ್ಗೆ ಗೊಂದಲ, ಅನುಮಾನಗಳು | SDPI ಸುದ್ದಿಗೋಷ್ಠಿ
14/07/2026

🛑 LIVE : ಮಂಗಳೂರು | SIR ಬಗ್ಗೆ ಗೊಂದಲ, ಅನುಮಾನಗಳು | SDPI ಸುದ್ದಿಗೋಷ್ಠಿ

...

Address

Mangalore

Alerts

Be the first to know and let us send you an email when Sdpi Dk Mangalore City District posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sdpi Dk Mangalore City District:

Shortcuts

Share