27/05/2026
ಪವಿತ್ರ ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ
ಸಮಸ್ತ ಮುಸ್ಲಿಂ ಬಾಂಧವರಿಗೆ ಹಾಗೂ ಮಂಗಳೂರಿನ ಎಲ್ಲಾ ನಾಗರಿಕರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಹೃದಯಪೂರ್ವಕ ಈದ್ ಮುಬಾರಕ್ ಶುಭಾಶಯಗಳು.
ಬಕ್ರೀದ್ ತ್ಯಾಗ, ಬಲಿದಾನ ಮತ್ತು ಸಹೋದರತೆಯ ಪ್ರತೀಕವಾಗಿದೆ. ಈ ಪವಿತ್ರ ಹಬ್ಬವು ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ.
ಆದರೆ ಈ ಸಂಭ್ರಮದ ನಡುವೆಯೂ, ನಮ್ಮ ಮುಸ್ಲಿಂ ಸಮುದಾಯದ ಅನೇಕ ಅಮಾಯಕ ಪ್ರಭುತ್ವದ ಅಕ್ರಮಕ್ಕೆ ಒಳಗಾಗಿ ತಪ್ಪಿಲ್ಲದೆ ಜೈಲುಗಳಲ್ಲಿ ಬಂಧಿತರಾಗಿರುವುದು ನಮ್ಮನ್ನು ತೀವ್ರವಾಗಿ ಕಳವಳಗೊಳಿಸಿದೆ. ಈ ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವುದು ಮತ್ತು ಸತ್ಯ-ನ್ಯಾಯಕ್ಕಾಗಿ ಹೋರಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಅಲ್ಲಾಹನ ಅಪಾರ ಕೃಪೆಯಿಂದ ಎಲ್ಲರ ಜೀವನವೂ ಸಂತೋಷ, ಸಮೃದ್ಧಿ ಮತ್ತು ಶಾಂತಿಯಿಂದ ತುಂಬಲಿ. ತ್ಯಾಗದ ಮನೋಭಾವದೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಡೋಣ.
ಈದ್ ಮುಬಾರಕ್
ಅಶ್ರಫ್ ಅಡ್ಡೂರು
ಕಾರ್ಯಾಧ್ಯಕ್ಷರು
ಮಂಗಳೂರು ನಗರ ಜಿಲ್ಲೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ