Prajavani DK-Udupi

Prajavani DK-Udupi ಪ್ರಜಾವಾಣಿ ಮಂಗಳೂರು ಬ್ಯುರೋ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರಮುಖ ಮಾಹಿತಿ. A .net Initiative

ಹಿರಿಯರ ಮಾರ್ಗದರ್ಶನವಿಲ್ಲದೇ ಸೊರಗುತ್ತಿರುವ ಸಮಾಜ: ಪೆÇ್ರ.ಪಿ.ಎಲ್.ಧರ್ಮಮಂಗಳೂರು, ಮೇ.16 :-  ಹಿರಿಯರ ಮಾರ್ಗದರ್ಶನವಿಲ್ಲದೇ ಸಮಾಜ ಇಂದು ಸೊರಗು...
16/05/2026

ಹಿರಿಯರ ಮಾರ್ಗದರ್ಶನವಿಲ್ಲದೇ ಸೊರಗುತ್ತಿರುವ ಸಮಾಜ: ಪೆÇ್ರ.ಪಿ.ಎಲ್.ಧರ್ಮ
ಮಂಗಳೂರು, ಮೇ.16 :- ಹಿರಿಯರ ಮಾರ್ಗದರ್ಶನವಿಲ್ಲದೇ ಸಮಾಜ ಇಂದು ಸೊರಗುತ್ತಿದೆ. ವಿದ್ಯಾ ಸಂಸ್ಥೆಯನ್ನು ಕೇವಲ ಸಂಸ್ಥೆಯಂತೆ ಕಾಣದೇ ,ಅದೊಂದು ವಿಸ್ತೃತ ಕುಟುಂಬ ಎಂದು ಪರಿಗಣಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಪಿ.ಎಲ್.ಧರ್ಮ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ವಿದ್ಯಾ ಸಂಸ್ಥೆಗಳಲ್ಲಿ ಮೌಲ್ಯ, ಸಂಸ್ಕಾರ, ಪರಂಪರೆಯ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಹಿರಿಯ ತಲೆಮಾರಿನ ಶಿಸ್ತು, ಬದುಕಿನ ಆದರ್ಶಗಳು ಮುಂದಿನ ತಲೆಮಾರಿಗೆ ಹಸ್ತಾಂತರಗೊಳಿಸಬೇಕಿದೆ. ಹಿರಿಯ ವಿದ್ಯಾರ್ಥಿಗಳ ಉಪಸ್ಥಿತಿ ಇಂದಿನ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರೇಪಣೆಯಾಗಬೇಕಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ನಿವೃತ್ತ ಸೇನಾಧಿಕಾರಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವಾಸ್ತವ ಜಗತ್ತಿನ ಪೈಪೆÇೀಟಿಗೆ ಸಿದ್ಧರಾಗುವ ನಿಟ್ಟಿನಲ್ಲಿ ತರಬೇತಿ ಹಾಗೂ ಕೌಶಲ್ಯದ ಶಿಕ್ಷಣ ನೀಡ ಬೇಕಿದೆ. ಈ ತರಬೇತಿ ಹಾಗೂ ಕೌಶಲ್ಯದ ಶಿಕ್ಷಣವನ್ನು ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಜನ್ಯ ಮಾಹಿತಿಯ ಮೂಲಕ ಮುಂದಿನ ತಲೆಮಾರಿಗೆ ತಲುಪಿಸಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಆಲೋಚನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪೆÇ್ರ.ಗಣಪತಿ ಗೌಡ.ಎಸ್. ಮಾತನಾಡಿ ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ವ್ಯಕ್ತಿಗಳ ಕುರಿತು ಮಾಹಿತಿ ಪಡೆದುಕೊಳ್ಳುವುದು ಮುಖ್ಯ. ತಂತ್ರಜ್ಞಾನದ ಪರಿಣಾಮವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ. ವಿದ್ಯಾಸಂಸ್ಥೆಗಳಿಂದ ಕಲಿತ ಜ್ಞಾನ ಪರಂಪರೆಯನ್ನು ಇಡೀ ಸಮಾಜಕ್ಕೆ ಪಸರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವ್ರತ್ತರಾಗಬೇಕಿದೆ. ಹಿರಿಯ ವಿದ್ಯಾರ್ಥಿಗಳು ಕೇವಲ ಸಂಸ್ಥೆಯ ಪ್ರತಿ ನಿಧಿಗಳಲ್ಲ, ಬದಲಾಗಿ ಜೀವಂತ ಒಡನಾಡಿಗಳು. ಇವರಿಂದಲೇ ಸಂಸ್ಥೆ ಏಳಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮದಾಸ ಗೌಡ.ಎಸ್, ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವದ ಆಯೋಜನೆಯ ಉದ್ದೇಶ ತಿಳಿಸಿದ್ದು, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸ್ಪಷ್ಟ ಗುರಿ ಹಾಗೂ ಏಕಾಗ್ರತೆಯಿಂದ ಯಾವುದೇ ಸಾಧನೆಯ ಶಿಖರ ಏರಲು ಸಾಧ್ಯವಿದೆ. ಅದಕ್ಕೆ ಆತ್ಮವಿಶ್ವಾಸದ ಪ್ರಯತ್ನವೊಂದನ್ನು ಬಿಟ್ಟು ಬೇರೆ ಯಾವುದೇ ಕವಲುದಾರಿಗಳಿಲ್ಲ. ಹಾಗಾಗಿ ಸ್ವಯಂ ಶಿಸ್ತು ಹಾಗೂ ಬಧ್ಧತೆಯಿಂದ ಯಶಸ್ವಿಯಾಗುವಂತೆ ಕರೆ ನೀಡಿದರು.
ಇದೇ ಸಂದರ್ಭ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ಹಳೆ ವಿದ್ಯಾರ್ಥಿ ನ್ಯಾಯವಾದಿ ಲೋಹಿದಾಸ್. ಆರ್. ಅವರು ಕಾಲೇಜಿನ ‘ಒಂದು ಹೊತ್ತು ಕೈ ತುತ್ತು’ ಯೋಜನೆಗೆ 50 ಸಾವಿರ ದೇಣಿಗೆಯನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಭಾಶ್ಚಂದ್ರ ಕಣ್ವ ತೀರ್ಥ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹಳೆ ವಿದ್ಯಾರ್ಥಿ ಸಂಘ ಸಾಗಿ ಬಂದ ದಾರಿ ಹಾಗೂ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಡಿ.ಶ್ರೀನಿವಾಸ ನಾಯ್ಕ್, ಕೋಶಾಧಿಕಾರಿ ಯು. ಮೋಹನ್ ರಾವ್, ಜೊತೆ ಕಾರ್ಯದರ್ಶಿ ಡಾ. ವನಜಾ ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಯು.ಮೋಹನ್ ರಾವ್ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ವಿಶ್ವನಾಥ್ ಕೋಟೆಕಾರ್ ಮತ್ತು ಶುಭ ಕೆ. ಎಚ್ ನಿರೂಪಿಸಿದರು.

16/05/2026

ಕೆ.ಪಿ.ಟಿ- ಪ್ರಥಮ ಸೆಮಿಸ್ಟರ್ ಡಿಪೆÇ್ಲಮಾ ಕೋರ್ಸ್ ಸೀಟು ಹಂಚಿಕೆ
ಮಂಗಳೂರು, ಮೇ.16 :- ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಇಲ್ಲಿ 2026 ನೇ ಸಾಲಿನಲ್ಲಿ ಪ್ರಥಮ ಸೆಮಿಸ್ಟರ್ ಇಂಜಿನಿಯರಿಂಗ್ ಡಿಪೆÇ್ಲಮಾ ಪೂರ್ಣಾವಧಿಯ ಕೋರ್ಸ್‍ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನೀಡಿರುವ ಆದ್ಯತೆ ಮತ್ತು ಮೆರಿಟ್ ಹಾಗೂ ರೋಷ್ಟರ್‍ಗನುಗುಣವಾಗಿ ಆಫ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಸೂಕ್ತ ಮೂಲ ದಾಖಲೆಗಳೊಂದಿಗೆ ಪ್ರವೇಶ ಪಡೆಯಬಹುದು.
ವೇಳಾಪಟ್ಟಿ ವಿವರ:-
ಡ್ರಾಫ್ಟ್ ಮೆರಿಟ್ ಪಟ್ಟಿ ಮೇ 25 ರಂದು ಸಂಜೆ 5 ಗಂಟೆಗೆ ಹಾಗೂ ಅಂತಿಮ ಮೆರಿಟ್ ಪಟ್ಟಿ ಮೇ 26 ರಂದು ಸಂಜೆ 5 ಗಂಟೆಗೆ ಪ್ರಕಟಣೆ, ವಿಶೇಷ ಮೀಸಲಾತಿ ಕೌನ್ಸೆಲಿಂಗ್, ಸಂಜೆ ಪಾಳಿ ಪ್ರವೇಶದ ಕೌನ್ಸೆಲಿಂಗ್ ಮೇ 27 ರಂದು ಬೆಳಿಗ್ಗೆ 8 ರಿಂದ ನಡೆಯಲಿದೆ. ಪ್ರಥಮ ಸುತ್ತಿನ ಕೌನ್ಸೆಲಿಂಗ್ ಮೇ 29 ರಿಂದ ಜೂನ್ 6 ರವರೆಗೆ, ದ್ವಿತೀಯ ಸುತ್ತಿನ ಕೌನ್ಸೆಲಿಂಗ್ ಜೂನ್ 2 ರಿಂದ 3 ರವರೆಗೆ ಮತ್ತು ಅಂತಿಮ ಸುತ್ತಿನ ಕೌನ್ಸೆಲಿಂಗ್ ಜೂನ್ 4 ರಿಂದ 5 ರವರೆಗೆ ನಡೆಯಲಿದೆ. ಎಲ್ಲಾ ಸುತ್ತಿನ ಕೌನ್ಸಿಲಿಂಗ್ ಮುಗಿದ ನಂತರ ಭರ್ತಿಯಾಗದ ಉಳಿಕೆ ಸೀಟುಗಳನ್ನು ಪ್ರಾಂಶುಪಾಲರ ಹಂತದಲ್ಲಿಯೇ ಆಫ್‍ಲೈನ್ ಮೂಲಕ ಮೆರಿಟ್ ಮತ್ತು ರೋಷ್ಟರ್‍ಗನುಗುಣವಾಗಿ ಮೇಲೆ ತಿಳಿಸಿದ ಹಂತಗಳನ್ನು ಪುನರಾವರ್ತಿಸಿ ಸೀಟು ಹಂಚಿಕೆ ಮಾಡಲು ಜೂನ್ 6 ಪ್ರಾರಂಭ ದಿನ ಮತ್ತು ಜೂನ್ 13 ಅಂತಿಮ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‍ಸೈಟ್
hಣಣಠಿs://gಠಿಣ.ಞಚಿಡಿಟಿಚಿಣಚಿಞಚಿ.gov.iಟಿ/ಞಠಿಣmಚಿಟಿgಚಿಟoಡಿe/ಠಿubಟiಛಿ/eಟಿ ಅಥವಾ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರು ಕಛೇರಿಯ ದೂರವಾಣಿ ಸಂಖ್ಯೆ: 0824-2211636/ 3516910 ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

16/05/2026

ಅರಣ್ಯ ಸಚಿವರ ಪ್ರವಾಸ
ಮಂಗಳೂರು, ಮೇ.16 :- ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮೇ 16 ರಿಂದ 17 ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮೇ 16 ರಂದು ಸಂಜೆ ರಾತ್ರಿ 8:20- ಮಂಗಳೂರು ವಿಮಾನ ನಿಲ್ದಾಣ ಆಗಮನ, ನಗರದಲ್ಲಿ ವಾಸ್ತವ್ಯ.
ಮೇ 17ರಂದು ಬೆಳಿಗ್ಗೆ 9- ಮೂಳೂರು ಗ್ರಾಮದ ಶ್ರೀ ಜಂಗಮ ಸಂಸ್ಥಾನ ಮಠ ಗುರುಪುರಕ್ಕೆ ಭೇಟಿ, 11- ನಗರದ ಕದ್ರಿ ಉದ್ಯಾನವನದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿರುವ ಕರ್ನಾಟಕ ಗೇರು ಮೇಳ ಹಾಗೂ ಕಾರ್ಯಾಗಾರ ಕಾರ್ಯಕ್ರಮ, ಮಧ್ಯಾಹ್ನ 3 ರಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳೂರು ಜಿಲ್ಲೆಯ ಅರಣ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಾಮರ್ಶನಾ ಸಭೆ, ರಾತ್ರಿ 9:20 ಕ್ಕೆ ಸಚಿವರು ಕಲಬುರ್ಗಿ ತೆರಳಲಿದ್ದಾರೆ.

ಗರ್ಭಿಣಿಯರ ಸ್ಕ್ಯಾನಿಂಗ್ ಮಾಡುವಾಗ ತಾಯಿ ಕಾರ್ಡ್ ಕಡ್ಡಾಯವಾಗಿ ಪಡೆಯಲು  ಡಿ.ಎಚ್.ಒ ಸೂಚನೆಮಂಗಳೂರು, ಮೇ.16 :- ಸ್ಕ್ಯಾನಿಂಗ್ ಕೇಂದ್ರಗಳಲ್ಲಿ  ಗ...
16/05/2026

ಗರ್ಭಿಣಿಯರ ಸ್ಕ್ಯಾನಿಂಗ್ ಮಾಡುವಾಗ ತಾಯಿ ಕಾರ್ಡ್ ಕಡ್ಡಾಯವಾಗಿ ಪಡೆಯಲು ಡಿ.ಎಚ್.ಒ ಸೂಚನೆ
ಮಂಗಳೂರು, ಮೇ.16 :- ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರ ಸ್ಕ್ಯಾನಿಂಗ್ ಮಾಡುವಾಗ ತಾಯಿ ಕಾರ್ಡ್ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ ಸೂಚಿಸಿದ್ದಾರೆ.
ಅವರು ಶುಕ್ರವಾರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ಜನನ ಪೂರ್ವ ಲಿಂಗ ನಿರ್ಣಯ (ನಿಬರ್ಂಧ ಮತ್ತು ದುರ್ಬಳಕೆ) ತಡೆ ಕಾಯಿದೆ 1994 ಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.
18-19 ವರ್ಷದೊಳಗಿನ ಬಾಲ ಗರ್ಭಿಣಿಯರು ಕಂಡುಬಂದಲ್ಲಿ, ಅವರ ಗರ್ಭಧಾರಣೆಯ ದಿನಾಂಕವನ್ನು ಮತ್ತು ವಯಸ್ಸಿನ ದೃಢೀಕರಣವನ್ನು ಖಚಿತಪಡಿಸಿಕೊಳ್ಳಬೇಕು. ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಕಾನೂನು ಬಾಹಿರವಾಗಿದ್ದು, ಇಂತಹ ಪ್ರಕರಣಗಳಲ್ಲಿ ಮೊದಲು ಪರೀಕ್ಷಿಸಿದವರು ಅಥವಾ ಸಂಸ್ಥೆಯ ಮುಖ್ಯಸ್ಥರು ತಕ್ಷಣವೇ ಪೋಲಿಸರಿಗೆ ಮಾಹಿತಿ ನೀಡುವಂತೆ ಡಿ.ಎಚ್.ಒ ಸೂಚಿಸಿದರು.
ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಖಾಸಗಿ 681 ಹಾಗೂ ಸರ್ಕಾರಿ 39 ಸ್ಕ್ಯಾನಿಂಗ್ ಸೆಂಟರ್‍ಗಳ ತಪಾಸಣೆ ನಡೆಸಲಾಗಿರುತ್ತದೆ. ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಖಾಸಗಿ 75 ಹಾಗೂ ಸರ್ಕಾರಿ 9 ಸ್ಕ್ಯಾನಿಂಗ್ ಸೆಂಟರ್‍ಗಳ ತಪಾಸಣೆ ನಡೆಸಲಾಗಿರುತ್ತದೆ. ಏಪ್ರಿಲ್ 2026 ರಿಂದ ಖಾಸಗಿ 53 ಹಾಗೂ ಸರ್ಕಾರಿ 6 ಸ್ಕ್ಯಾನಿಂಗ್ ಸೆಂಟರ್‍ಗಳ ತಪಾಸಣೆ ನಡೆಸಲಾಗಿರುತ್ತದೆ. ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಖಾಸಗಿ 5 ಹಾಗೂ ಸರ್ಕಾರಿ 1 ಸ್ಕ್ಯಾನಿಂಗ್ ಸೆಂಟರ್‍ಗಳ ತಪಾಸಣೆ ನಡೆಸಲಾಗಿರುತ್ತದೆ ಎಂದು ಜಿಲ್ಲಾ ಎನ್ ಫೋರ್ಸ್‍ಮೆಂಟ್ ಅಧಿಕಾರಿ ಡಾ.ದೀಪಾ ಪ್ರಭು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ (ಪಿ.ಎನ್.ಡಿ.ಟಿ)ಡಾ.ಅಮೃತಾ ಭಂಡಾರಿ, ಜಿಲ್ಲಾ ತಪಾಸಣಾ & ಮೇಲ್ವಿಚಾರಣಾ ಸಮಿತಿ ಸದಸ್ಯೆ ಡಾ.ಸುಂದರಿ, ಡಾ.ಅನಿತ್‍ರಾಜ್, ಆರ್.ಸಿ.ಎಚ್ ಅಧಿಕಾರಿ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಮತ್ತಿತರರು ಉಪಸ್ಥಿತರಿದ್ದರು.

16/05/2026
16/05/2026

NEET Paper Leak: ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಇದೇ ಮೇ 3ರಂದು ನಡೆದಿದ್ದ NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ರ....

Address

Prajavani, 2nd Floor, Yenepoya Chambers, Balmatta Road, Balmatta
Mangalore
575002

Alerts

Be the first to know and let us send you an email when Prajavani DK-Udupi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Prajavani DK-Udupi:

Share