10/08/2023
ವಿಶ್ವ ಆದಿವಾಸಿ ಸ್ವಾಭಿಮಾನಿ ದಿನಾಚರಣೆಯ ಅಂಗವಾಗಿ, ಹುಬ್ಬಳ್ಳಿ - ದಾರವಾಡ ಜಿಲ್ಲಾ SDPI ವತಿಯಿಂದ ಹಮ್ಮಿಕೊಳ್ಳಲಾಗಿದ್ದ '"ಆದಿವಾಸಿಗಳ ಬದುಕು ಮತ್ತು ಸವಾಲುಗಳು ವಿಚಾರ ಸಂಕಿರಣ" ದಲ್ಲಿ ಸ್ಥಳೀಯ ಆದಿವಾಸಿ ಸಮುದಾಯಗಳಾದ ಸುಡಗಾಡ ಸಿದ್ದರು, ಬುಡಗ ಜಂಗಮ, ಹರಣಿ ಶಿಕಾರಿ, ದುರ್ಗಮುರ್ಗಿ ಸೇರಿದಂತೆ ಆದಿವಾಸಿ ಮುಖಂಡರನ್ನು ಸನ್ಮಾನಿಸಲಾಯಿತು.
ವಿಚಾರ ಸಂಕಿರಣ ದಲ್ಲಿ ಕೈಗೊಂಡ ನಿರ್ಣಯಗಳು
1. ಆದಿವಾಸಿಗಳ ವಿರುದ್ದದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ
ಆದಿವಾಸಿಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಕಾನೂನು ಇರುವುದು ಎಷ್ಟು ನಿಜವೋ, ಆ ಕಾನೂನುಗಳಿಂದ ಆ ಸಮುದಾಯಕ್ಕೆ ನ್ಯಾಯ ಪ್ರಧಾನವಾಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ . ದೇಶದಲ್ಲಿ ಪ್ರತಿ ವರ್ಷ ಸುಮಾರು 10 ಸಾವಿರದಷ್ಟು ಪ್ರಕರಣಗಳು ಆದಿವಾಸಿಗಳ ವಿರುದ್ಧ ನಡೆಸಲಾಗುವ ದೌರ್ಜನ್ಯದ ವಿಚಾರದಲ್ಲಿ ದಾಖಲಾಗುತ್ತವೆ. ಆದರೆ ಆ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಕೇವಲ 7% ಪ್ರಕರಣಗಳಲ್ಲಿ ಮಾತ್ರ. ಹೀಗಿರುವಾಗ ಆದಿವಾಸಿಗಳ ವಿರುದ್ಧ ದೌರ್ಜನ್ಯ ಎಸಗಲು ಮುಂದಾಗುವವರಿಗೆ ಕಾನೂನಿನ ಭಯ ಇರಲು ಸಾಧ್ಯವೆ? ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಬೇಕು. ಈ ಪ್ರಕರಣ ಮತ್ತು ಶಿಕ್ಷೆ ಅನುಪಾತಕ್ಕೆ ಪೋಲಿಸ್, ನ್ಯಾಯ ವ್ಯವಸ್ಥೆ ಮತ್ತು ಅಧಿಕಾರಿ ವರ್ಗಗಳು ಎಡವುತ್ತಿರುವುದಕ್ಕೆ ಹೊಣೆಗಾರಿಕೆಯನ್ನು ನಿಗದಿ ಮಾಡುವ ವ್ಯವಸ್ಥೆ ಜಾರಿಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
2. ಧಾರವಾಡದ ಅಣ್ಣಿಗೇರಿಯಲ್ಲಿ ಅರ್ಧ ಶತಮಾನದಿಂದ ನಿರಾಶ್ರಿತರಂತೆ ವಾಸಿಸುತ್ತಿರುವ ಅಲ್ಲಿನ 110 ಆದಿವಾಸಿ ಕುಟುಂಬಗಳಿಗೆ ತಕ್ಷಣ ಹಕ್ಕುಪತ್ರ ಮತ್ತು ಮನೆಗಳನ್ನು ಮಂಜೂರು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು.
3. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಕೆಎಸ್ಟಿಆರ್ಐ) ಹರಣ ಶಿಕಾರಿ ಬುಡಕಟ್ಟು ಜನಾಂಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕೆಂದು ಎಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
4. ಆದಿವಾಸಿಗಳ ನಿಖರ, ವೈಜ್ಞಾನಿಕ ಜನಗಣತಿ ನಡೆಸಬೇಕು. ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ನಿಗಧಿ ಮಾಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.