Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ

  • Home
  • India
  • Mudhol
  • Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ

Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ@ಮುಧೋಳ

 #ಆರಂಭಿಕ_ಜಯ✊
26/08/2026

#ಆರಂಭಿಕ_ಜಯ✊

26/08/2026
ಮುಧೋಳ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲಭೂತ ಸೌಲಭ್ಯಗಳ ಅಭಾವ ಹಾಗೂ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯದಿರುವುದನ್...
25/08/2026

ಮುಧೋಳ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲಭೂತ ಸೌಲಭ್ಯಗಳ ಅಭಾವ ಹಾಗೂ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯದಿರುವುದನ್ನು ಖಂಡಿಸಿ ಭೀಮ್ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಮುಧೋಳ ನಗರದ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲನಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಸರಕಾರಿ ಆಸ್ಪತ್ರೆಗೆ ತೆರಳಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ಸಾರ್ವಜನಿಕರ ಆರೋಗ್ಯದೊಂದಿಗೆ ನಿರ್ಲಕ್ಷ್ಯ ಮಾಡದೆ, ತಕ್ಷಣವೇ ಅಗತ್ಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿ, ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಿ ಗುಣಮಟ್ಟದ ಸರ್ಕಾರಿ ಆರೋಗ್ಯ ಸೇವೆ ಒದಗಿಸಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಮುಧೋಳ ತಾಲೂಕ ತಹಶೀಲ್ದಾರರು ಮನವಿಯನ್ನು ಸ್ವೀಕರಿಸಿ ಶೀಘ್ರದಲ್ಲಿಯೇ ಸರ್ಕಾರಿ ಆಸ್ಪತ್ರೆಯ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಭರವಸೆಯನ್ನು ನೀಡಿದರು. ಸಂದರ್ಭದಲ್ಲಿ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ರಾಜ್ಯ ಘಟಕ, ಜಿಲ್ಲಾ ಘಟಕ, ತಾಲೂಕು ಮತ್ತು ನಗರ ಘಟಕದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು, ತಾಯಂದಿರು ಮತ್ತು ಸಮುದಾಯದ ಹಿರಿಯ ಮುಖಂಡರು, ಯುವ ಮುಖಂಡರು ಉಪಸ್ಥಿತರಿದ್ದು ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು

ಜನರ ಆರೋಗ್ಯ – ನಮ್ಮ ಹಕ್ಕು.
ಸರ್ಕಾರಿ ಆಸ್ಪತ್ರೆ ಸುಧಾರಿಸಬೇಕು ಎಂಬುದು ನಮ್ಮ ಆಗ್ರಹ!

#ಮುಧೋಳ #ಸರ್ಕಾರಿಆಸ್ಪತ್ರೆ #ಆರೋಗ್ಯಸೇವೆ #ಭೀಮ್ಆರ್ಮಿ #ಪ್ರತಿಭಟನೆ #ಜನರಆರೋಗ್ಯ

25/01/2026

ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಮುಧೋಳ ನಗರದಲ್ಲಿ ಅತಿ ವಿಜೃಂಭಣೆಯಿಂದ ಜರುಗಿದ ಭೀಮಾ ಕೋರೆಗಾಂವ ವಿಜಯೋತ್ಸವದ 2026 ಸ್ವಾಭಿಮಾನಿಗಳ ನಡಿಗೆ.

ಸರ್ವರಿಗೂ ಹಾರ್ದಿಕ ಸ್ವಾಗತ ತಾವೂ ಬನ್ನಿ ತಮ್ಮವರನ್ನು ಕರೆತನ್ನಿ... #ಜೈ_ಭೀಮ #ಜೈ_ಭೀಮಾಕೋರೆಗಾಂವ.
18/01/2026

ಸರ್ವರಿಗೂ ಹಾರ್ದಿಕ ಸ್ವಾಗತ
ತಾವೂ ಬನ್ನಿ ತಮ್ಮವರನ್ನು ಕರೆತನ್ನಿ...
#ಜೈ_ಭೀಮ
#ಜೈ_ಭೀಮಾಕೋರೆಗಾಂವ.

ಮುಧೋಳ ನಗರದಲ್ಲಿ ಅತಿ ವಿಜೃಂಭಣೆಯಿಂದ ಜರಗುವ ಇತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ವಾಭಿಮಾನಿಗಳ ನಡಿಗೆ ಕಾರ್ಯಕ್ರಮಕ್ಕೆ ಭಾರತರತ್ನ , ಸಂವಿ...
18/01/2026

ಮುಧೋಳ ನಗರದಲ್ಲಿ ಅತಿ ವಿಜೃಂಭಣೆಯಿಂದ ಜರಗುವ ಇತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ವಾಭಿಮಾನಿಗಳ ನಡಿಗೆ ಕಾರ್ಯಕ್ರಮಕ್ಕೆ ಭಾರತರತ್ನ , ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಂಶದ ಕುಡಿ ಅವರ ಮರಿ ಮೊಮ್ಮಗರಾದ #ಆಯುಷ್ಮಾನ_ಶ್ರೀ_ರಾಜರತ್ನ_ಅಂಬೇಡ್ಕರ್ ಅವರು, 2026 ಜನವರಿ 24ರಂದು ಪ್ರಥಮ ಬಾರಿಗೆ ಮುಧೋಳ ನಗರಕ್ಕೆ ಆಗಮಿಸುತ್ತಿದ್ದು. ಸಮಸ್ತ ಬಾಬಾ ಸಾಹೇಬ್ ಅಂಬೇಡ್ಕರರ ಅನುಯಾಯಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ.
ತಾವು ಬನ್ನಿ ತಮ್ಮವರನ್ನು ಕರೆತನ್ನಿ..
#ಜೈ_ಭೀಮ್
#ಜೈ _ಭೀಮಾ_ಕೋರೆಗಾಂವ

Bhima koregaon VIJAYOTSAVA 2026
14/01/2026

Bhima koregaon VIJAYOTSAVA 2026

208ನೇ ಭೀಮಾ ಕೋರೆಗಾಂವ ವಿಜಯೋತ್ಸವದ ಅಂಗವಾಗಿ ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಮುಧೋಳ ನಗರದಲ್ಲಿ #ಜನವರ...
14/01/2026

208ನೇ ಭೀಮಾ ಕೋರೆಗಾಂವ ವಿಜಯೋತ್ಸವದ ಅಂಗವಾಗಿ ಭೀಮ ಆರ್ಮಿ ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಮುಧೋಳ ನಗರದಲ್ಲಿ #ಜನವರಿ 21ಮತ್ತು 22 ರಂದು ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಈ ಮೂಲಕ ತಿಳಿಸಲಾಗಿದೆ.

Address

Mudhol
587313

Website

Alerts

Be the first to know and let us send you an email when Bhim Army Mudhol - ಭೀಮ್ ಆರ್ಮಿ- ಮೂಲನಿವಾಸಿ ಏಕತಾ ಪರಿಷತ್ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Shortcuts

Share

Category