05/06/2021
*ಕೋವಿಡ್ ಸಂಕಷ್ಟದಲ್ಲಿ SFI ಮತ್ತು DYFI ವತಿಯಿಂದ ರಕ್ತದಾನ*
🩸🩸🩸🩸🩸🩸🩸
ಕಳೆದ ಒಂದು ತಿಂಗಳಿಂದಲೂ ಕೋವಿಡ್ ತನ್ನ ಆರ್ಭಟವನ್ನುವ ಮುಂದುವರೆಸಿದೆ, ಇಂತಹ ಸಂಧರ್ಭದಲ್ಲಿ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಈಗಾಗಲೆ ಸಾವು ನೋವುಗಳಿಂದ ಬೆಡ್ ಗಳು ಸಿಗದೆ, ಆಕ್ಸಿಜನ್ ಸಿಗದೆ ಬಹಳ ಸಂಕಷ್ಟಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕ್ರಾಂತಿಕಾರಿ ಸಂಘಟನೆಗಳಾದ ಎಸ್.ಎಫ್.ಐ ಮತ್ತು ಡಿ.ಐ.ಎಫ್.ಐ ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಸಾಮೂಹಿಕವಾಗಿ ಸಂಘಟನೆಗಳ ಕಾರ್ಯಕರ್ತರು , ನಾಗರೀಕರು ಎಲ್ಲರು ಒಳಗೊಂಡಂತೆ ರಕ್ತದಾನವನ್ನು ಮಾಡಿದ್ದಾರೆ. ಕರೊನಾ ಕಡಿಮೆಯಾದಂತೆ ಬೇರೆ ಕಾರಣಗಳಿಗೆ ಮತ್ತು ತುರ್ತು ಸಂಧರ್ಭಗಳಲ್ಲಿ ರಕ್ತ ಬೇಕಾಗತ್ತದೆ ಹಾಗಾಗಿ ನಾವು ಎಚ್ಚರದಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ. ಈಗಾಗಲೆ ಖಾಸಗೀ ಆಸ್ಪತ್ರೆಗಳ ಹಾವಳಿಯಿಂದ ಜನರಿಗೆ ಯಾವುದು ಸರಿಯಾದ ಕ್ರಮದಲ್ಲಿ ಮತ್ತು ದರದಲ್ಲಿ ಔಷದಿಗಳು ಸಿಗುತ್ತಿಲ್ಲಾ, ಸರ್ಕಾರಗಳು ಕೂಡ ಕೈಕಟ್ಟಿ ಕುಳಿತಾಗಿದೆ ಹಾಗಾಗಿ ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಬರುವ ಬಡ ಜನರಿಗಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನ ರಕ್ತದಾನವನ್ನುವ ಮಾಡಿ ಜೀವ ಉಳಿಸುವ ಕೆಲಸ ಮಾಡಲಿ ಎಂಬುದೆ ನಮ್ಮ ಆಶಯ. ಶಿಭಿರದಲ್ಲಿ ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಡಿ.ಐ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ ರೈತ ಉಖಂಡರಾದ ವಾಸಣ್ಣ, ರಕ್ಷಿತ, ನಂದನ್, ಸ್ವರೂಪ್, ದಿವಾಕರ ಆಜಾದ್ ಇನ್ನಿತರು ಉಪಸ್ಥಿತರಿದ್ದರು.
🩸🚩❤️🩸🚩❤️🙏