AIDSO MYSORE

AIDSO MYSORE Contact information, map and directions, contact form, opening hours, services, ratings, photos, videos and announcements from AIDSO MYSORE, Social service, Mysore.

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ, ಅಗ್ನಿಯುಗದ ಹರಿಕಾರ ಖುದಿರಾಮ್ ಬೋಸ್ ರವರ 118ನೇ ಹುತಾತ್ಮ ದಿನಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘ...
11/08/2026

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ, ಅಗ್ನಿಯುಗದ ಹರಿಕಾರ ಖುದಿರಾಮ್ ಬೋಸ್ ರವರ 118ನೇ ಹುತಾತ್ಮ ದಿನ

ಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಮೈಸೂರಿನ ಕುಕ್ಕರಹಳ್ಳಿ ಕೆರೆ, ಪೆವಿಲಿಯನ್ ಮೈದಾನ , ಓವೆಲ್ ಮೈದಾನ , ಮನುವನ ಪಾರ್ಕ್ ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ, ಅಗ್ನಿಯುಗದ ಹರಿಕಾರ ಖುದಿರಾಮ್ ಬೋಸ್ ಅವರ 118 ನೇ ಹುತಾತ್ಮ ದಿನವನ್ನು ಸ್ಮರಿಸಲಾಯಿತು.



ರಾಜೀನಾಮೆ ಘೋಷಿಸಿದ ಶಿಕ್ಷಣ ಮಂತ್ರಿ ಧರ್ಮೆಂದ್ರ ಪ್ರಧಾನ್!!ವಿದ್ಯಾರ್ಥಿಗಳ ಐತಿಹಾಸಿಕ ಹೋರಾಟಕ್ಕೆ ಮಣಿದ ಸರ್ಕಾರ!ಕಳೆದ ಒಂದುವರೆ ತಿಂಗಳಿಂದ ಇಡೀ ...
25/07/2026

ರಾಜೀನಾಮೆ ಘೋಷಿಸಿದ ಶಿಕ್ಷಣ ಮಂತ್ರಿ ಧರ್ಮೆಂದ್ರ ಪ್ರಧಾನ್!!
ವಿದ್ಯಾರ್ಥಿಗಳ ಐತಿಹಾಸಿಕ ಹೋರಾಟಕ್ಕೆ ಮಣಿದ ಸರ್ಕಾರ!

ಕಳೆದ ಒಂದುವರೆ ತಿಂಗಳಿಂದ ಇಡೀ ದೇಶದ ವಿದ್ಯಾರ್ಥಿಗಳು ನಡೆಸುತ್ತಿದ್ದ ಅವಿರತ ಹೋರಾಟಕ್ಕೆ ಇಂದು ಅಭೂತಪೂರ್ವ ಜಯ ದೊರೆತಿದೆ.

ಎನ್. ಟಿ. ಎ ರದ್ದಾಗುವವರೆಗೂ,
ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರಿಗೆ ಶಿಕ್ಷೆಯಾಗುವವರೆಗೂ, ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಲು
ಒಗ್ಗಟ್ಟು-ಹೋರಾಟ ಮುಂದುವರಿಯಲಿದೆ!


21/07/2026

'ಸಂಸದ್ ಚಲೋ' ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್‌ನ ಪ್ರತಿಭಟಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಖಂಡಿಸಿ ಇಂದು ರಾಮಸ್ವಾಮಿ ವೃತದಲ್ಲಿ ಪ್ರತಿಭಟನೆ ಮಾಡಲಾಯಿತು.



'ಸಂಸದ್ ಚಲೋ' ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್‌ನ ಪ್ರತಿಭಟಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಖಂಡಿಸಿ ಇಂದು ರಾಮಸ...
21/07/2026

'ಸಂಸದ್ ಚಲೋ' ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್‌ನ ಪ್ರತಿಭಟಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಖಂಡಿಸಿ ಇಂದು ರಾಮಸ್ವಾಮಿ ವೃತದಲ್ಲಿ ಪ್ರತಿಭಟನೆ ಮಾಡಲಾಯಿತು.

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಕ್ರೂರ ಲಾಠಿ ಚಾರ್ಚ್ ಮತ್ತು ಟಿಯರ್ ಗ್ಯಾಸ್ ಪ್ರಯೋಗ ಖಂಡಿಸಿ ಹೋರಾಟಗಾಗರೊಂದಿಗೆ ಪ್ರಜಾತಾಂತ್ರಿಕ ಸಂವಾದ ಆರಂ...
20/07/2026

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲಿನ ಕ್ರೂರ ಲಾಠಿ ಚಾರ್ಚ್ ಮತ್ತು ಟಿಯರ್ ಗ್ಯಾಸ್ ಪ್ರಯೋಗ ಖಂಡಿಸಿ ಹೋರಾಟಗಾಗರೊಂದಿಗೆ ಪ್ರಜಾತಾಂತ್ರಿಕ ಸಂವಾದ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ.

ನೀಟ್ ಅವಾಂತರ ಖಂಡಿಸಿ ನಡೆಯುತ್ತಿರುವ ಜುಲೈ 20ರಪಾರ್ಲಿಮೆಂಟ್ ಚಲೋಹೋರಾಟದೊಂದಿಗೆ ನಾವಿದ್ದೇವೆ!ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸನಿರತ ಹೋರಾಟಗ...
19/07/2026

ನೀಟ್ ಅವಾಂತರ ಖಂಡಿಸಿ ನಡೆಯುತ್ತಿರುವ ಜುಲೈ 20ರ
ಪಾರ್ಲಿಮೆಂಟ್ ಚಲೋ
ಹೋರಾಟದೊಂದಿಗೆ ನಾವಿದ್ದೇವೆ!

ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸನಿರತ ಹೋರಾಟಗಾರರೊಂದಿಗೆ ಕೇಂದ್ರ ಸರ್ಕಾರವು ಕೂಡಲೇ ಪ್ರಜಾತಾಂತ್ರಿಕ ಸಂವಾದ ಆರಂಭಿಸಬೇಕು.

ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ NTA ಅನ್ನು ರದ್ದುಗೊಳಿಸಿ.

ಸೋನಂ ವಾಂಗ್ಚುಕ್ ಹಾಗೂ ಇತರ ಉಪವಾಸನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನು ಖಂಡಿಸಿ,ಕೂಡಲೇ ಪ...
18/07/2026

ಸೋನಂ ವಾಂಗ್ಚುಕ್ ಹಾಗೂ ಇತರ ಉಪವಾಸನಿರತ ಹೋರಾಟಗಾರರನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನು ಖಂಡಿಸಿ,ಕೂಡಲೇ ಪ್ರಜಾತಾಂತ್ರಿಕ ಸಂವಾದ ಆರಂಭಿಸಬೇಕೆಂದು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಇಂದು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.

ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸ ನಿರತ ಹೋರಾಟಗಾರರೊಂದಿಗೆ ನಾವಿದ್ದೇವೆ!!NTA ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯನ್ನು ರದ್ದುಗೊಳಿಸಿ!!ಧರ್ಮೇಂ...
17/07/2026

ಸೋನಂ ವಾಂಗ್ಚುಕ್ ಹಾಗೂ ಇತರೆ ಉಪವಾಸ ನಿರತ ಹೋರಾಟಗಾರರೊಂದಿಗೆ ನಾವಿದ್ದೇವೆ!!

NTA ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯನ್ನು ರದ್ದುಗೊಳಿಸಿ!!

ಧರ್ಮೇಂದ್ರ ಪ್ರಧಾನ ರವರ ರಾಜೀನಾಮೆಯನ್ನು ಖಾತ್ರಿಪಡಿಸಿ!!

ಹೋರಾಟಗಾರರೊಂದಿಗೆ ಪ್ರಜಾತಾಂತ್ರಿಕ ಸಂವಾದ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಆಗ್ರಹಿಸಿ ನಾಳೆ ಬೆಳಗ್ಗೆ ರಾಮಸ್ವಾಮಿ ವೃತ್ತದ ಬಳಿ ಪ್ರತಿಭಟನೆ ಇರುತ್ತದೆ!!

ಶಿಕ್ಷಣ ಪ್ರೇಮಿಗಳೆಲ್ಲರೂ ತಪ್ಪದೆ ಬನ್ನಿ!!👆🏻👆🏻

ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಎಡ ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯ ಮಟ್ಟದ ಸಮಾವೇಶಎನ್. ಟಿ. ಎ ಮತ್ತು ನೀಟ್ ಅನ್ನು ರದ್ದುಗೊಳಿಸಿ, ಕೆ. ಪಿ. ...
09/07/2026

ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಎಡ ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯ ಮಟ್ಟದ ಸಮಾವೇಶ

ಎನ್. ಟಿ. ಎ ಮತ್ತು ನೀಟ್ ಅನ್ನು ರದ್ದುಗೊಳಿಸಿ, ಕೆ. ಪಿ. ಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಿರಿ, ಶಿಕ್ಷಣ ಕ್ಷೇತ್ರದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಿ ಎಂದು ಆಗ್ರಹಿಸಿ, ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಎಡ ವಿದ್ಯಾರ್ಥಿ ಸಂಘಟನೆಗಳಾದ ಎಐಎಸ್ಎಫ್,
ಎಸ್ಎಫ್ಐ, ಎಐಡಿಎಸ್ಓ ಹಾಗೂ ಎಐಎಸ್ಎ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶವನ್ನು ಸಂಘಟಿಸಲಾಗಿತ್ತು.

ಸಮಾವೇಶದ ಅತಿಥಿಗಳಾಗಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ (ಹಿರಿಯ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು), ನಾಡೋಜ ಜಿ ರಾಮಕೃಷ್ಣ (ಸಂಸ್ಕೃತಿ ಚಿಂತಕರು), ಪ್ರೊ ನಿರಂಜನಾರಾಧ್ಯ (ಪ್ರಮುಖ ಶಿಕ್ಷಣ ತಜ್ಞರು), ಶ್ರೀಪಾದ್ ಭಟ್ (ಶಿಕ್ಷಣ ತಜ್ಞರು), ಪ್ರೊ. ಆರ್ ಸುನಂದಮ್ಮ (ವಿಶ್ರಾಂತ ಕುಲಸಚಿವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ,ವಿಜಯಪುರ.) ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಎಡ ವಿದ್ಯಾರ್ಥಿ ಸಂಘಟನೆಗಳ ನಾಯಕರು ಉಪಸ್ಥಿತರಿದ್ದು, ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಾರ್ವಜನಿಕ  ಶಿಕ್ಷಣ ಉಳಿವಿಗಾಗಿ ರಾಜ್ಯಮಟ್ಟದ ಸಮಾವೇಶ
06/07/2026

ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ರಾಜ್ಯಮಟ್ಟದ ಸಮಾವೇಶ

Address

Mysore
570024

Telephone

+919164220387

Website

Alerts

Be the first to know and let us send you an email when AIDSO MYSORE posts news and promotions. Your email address will not be used for any other purpose, and you can unsubscribe at any time.

Shortcuts

Share

Category