28/10/2022
ನಮಸ್ಕಾರ ಗೆಳೆಯೆರೆ,
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ತಾಯಿಯೇ ದೇವರು, ಕರುಣಾಮಯಿ, ತ್ಯಾಗಮಯಿ ಹೀಗೆ ಹಲವಾರು ನಾಣ್ಣುಡಿಗಳು ನಮ್ಮ ಮಾತೃಭಾಷೆ ಕನ್ನಡದಲ್ಲಿ ನಿರೀಕ್ಷೆಗೂ ಮೀರಿ ಅನೇಕಾನೇಕ ಸಂಗ್ರಹಗಳಿವೆ ಹಾಗೂ ಗ್ರಂಥಗಳಲ್ಲಿ ಉಲ್ಲೇಖವಿದೆ. ಈ ನಮ್ಮ ಭವ್ಯಭಾರತದಲ್ಲಿ , ತಾಯಿ ಬಾರತಾಂಬೆಯ ಮಡಿಲ್ಲಲ್ಲಿ ನಾನು ಹೆಣ್ಣಾಗಿ ಹುಟ್ಟಿದ್ದು ನನ್ನ ಪೂರ್ವ ಜನ್ಮದ ಪುಣ್ಯವೆಂದು ಭಾವಿಸುತ್ತೇನೆ.
ಜನಸೇವೆ ಜನಾರ್ಧನ ಸೇವೆ, ಒಬ್ಬರಲ್ಲಿ ಸಂತೋಷವನ್ನ, ಉಲ್ಲಾಸವನ್ನ ಸೃಷ್ಟಿಸುವುದೆಂದರೆ ನಾವು ನಿಸ್ವಾರ್ಥ ಸೇವೆಯನ್ನ ಸಲ್ಲಿಸಿದಾಗ ಮಾತ್ರ ಅದು ಸಾದ್ಯ..ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ವಿಷಯ. ನಾನು ಒಬ್ಬ ಉತ್ತಮ ತಾಯಿಯಾಗಿ, ಪರೋಪಕಾರ ಮತ್ತು ಸಾಮಾಜಿಕ ಕಳಕಳಿ, ಹಾಗೂ ಹಣ್ಣಿನ ಸಬಲೀಕರಣಕ್ಕಾಗಿ ಧ್ವನಿಯಾಗಿರುವ ನಾನು ಈ ಉಲ್ಲೇಖವನ್ನು ವೈಯಕ್ತಿಕ ಅನುಭವದಿಂದ ನಿಜವೆಂದು ಕಂಡುಕೊಂಡಿದ್ದೇನೆ.
ಇದು ಚಿಕ್ಕಂದಿನಿಂದಲೂ ನನ್ನ ತಂದೆ ನನ್ನಲ್ಲಿ ತುಂಬಿದ ವಿಷಯ. ಆದ್ದರಿಂದ ನಾನು ವಿಶ್ವದ ಅತ್ಯಂತ ಹೆಮ್ಮೆಯ ರಾಷ್ಟ್ರದವಾದ ಭಾರತಾಂಬೆಯ ನಾಗರಿಕನಾಗಲು ಅದೃಷ್ಟಶಾಲಿಯಾಗಿದ್ದೇನೆ. ಇತರರನ್ನು ಗೌರವದಿಂದ, ಪ್ರೀತಿಯಿಂದ ನಡೆಸಿಕೊಳ್ಳುವುದು ಮತ್ತು ಪರಾನುಭೂತಿಯನ್ನು ಅಭ್ಯಾಸ ಮಾಡುವುದನ್ನು ನಂಬುವ ದೇಶ. ನನ್ನ ಸ್ನೇಹಿತರು ಮತ್ತು ಕುಟುಂಬದವರು ನನ್ನನ್ನು ಸೌಹಾರ್ದಯುತ, ಕಾಳಜಿಯುಳ್ಳ ಮತ್ತು ಸಂತೋಷದ ಆತ್ಮ ಎಂದು ವಿವರಿಸುತ್ತಾರೆ.
ಆದ್ದರಿಂದ ಕೃತಜ್ಞತೆಯಿಂದ ತುಂಬು ಹೃದಯದಿಂದ ನಾನು ಈಗ ಒಂದೇ ಭಾರತದಲ್ಲಿ ಭಾರತೀಯನಾಗಿರುವುದರ ನಿಜವಾದ ಸಂತೋಷವನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಉತ್ಸುಕನಾಗಿದ್ದೇನೆ. #ಭಾರತ್ ಜೋಡೋ
ನನ್ನ ಮುಂದಿನ ದಿನಗಳಲ್ಲಿ ಜನಸೇವೆ ಕಾರ್ಯಕ್ರಮಗಳ ವಿವರಗಳನ್ನು ಈ ನನ್ನ ಫೇಸ್ಬುಕ್ ಪೇಜ್ ಹಾಗೂ ಇನ್ನಿತರೆ, ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆ ಹಾಗು ಮಾದ್ಯಮಗಳಲ್ಲಿ ಪ್ರಕಟವಾಗಲಿವೆ. ಹಾಗೂ ಸ್ಥಳೀಯವಾಗಿ ಯುವಕರು ಹಾಗೂ ಯವತಿಯರು, ವಿಧ್ಯಾರ್ಥಿಗಳು ನಮ್ಮ ಜೊತೆ ಕೈಜೋಡಿಸಿ ನಿಸ್ವಾರ್ಥ ಸೇವೆ ಅವಕಾಶ ಸದುಪಯೋಗ ಪಡೆದು ಎಲ್ಲರಲ್ಲಿ ಸಂತೋಷ ಮೂಡಿಸುವ ಈ ಯಾಗದಲ್ಲಿ ನನ್ನ ಈ ಚೊಚ್ಚಲ ಹೆಜ್ಜೆಗೆ ನೀವೂ ನಮ್ಮ ಜೊತೆ ಸೇರಿ ನಮ್ಮ ಜೀವನ ಸಾರ್ಥಕತೆ ಕಂಡುಕೊಳ್ಳೊಣ.
ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ನನ್ನೆಲ್ಲ ಸಹೋದ್ಯೋಗಿಗಳು, ವಿಧ್ಯಾರ್ಥಿಗಳು, ಸಾರ್ವಜನಿಕರು, ರೈತಾಪಿ ವರ್ಗದವರು, ಹೆಣ್ಣುಮಕ್ಕಳು, ಅವಕಾಶವಂಚಿತರು, ಎಲ್ಲ ವರ್ಗಗಳು, ಬಡವರು ಎಲ್ಲ ಸೇರಿ ನಮ್ಮೀ ಶಿವಮೊಗ್ಗವನ್ನು ಸಂಪತ್ತು ಭರಿತ, ಸುಭೀಕ್ಷ, ನಾಡನ್ನು ಕಟ್ಟೊಣ.
ಒಗ್ಗಟ್ಟಿನಲ್ಲಿ ಬಲವಿದೆ
ನಿರ್ಮಲ ಪಾಟೀಲ್
------------------------------------
Creating joy in oneself manifests best while serving others" is a quote that is very close to my heart. Having been an ardent mother, philanthropist and a voice for social empowerment, I find this quote to be true from personal experience. It was also something my father instilled in me since I was a kid. I am therefore lucky to be a citizen of one of the most welcoming countries in the world. A country that believes in treating others with respect and practicing empathy.
My friends and family would describe me as affable, caring and a happy soul. I attribute my happiness to finding and cultivating gratitude.
Therefore with a heart full of gratitude I'm now passionate about preserving and propagating the true joy of being an Indian in one Bharat.
-