Gorsena shivamogga taluk

Gorsena shivamogga taluk ಶಿವಮೊಗ್ಗ ತಾಲೂಕು ಗೋರ್ ಸೇನಾ ರಾಷ್ಟೀಯ ಸಂಘಟನೆ.

ಅವೈಜ್ಞಾನಿಕ ಒಳ ಮೀಸಲಾತಿಯ ಮೂಲಕ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿರುವ ಸರ್ಕಾರಕ್ಕೆ ದಿಕ್ಕಾರ, ದಿಕ್ಕಾರಕಾಂಗ್ರೆಸ್ ಪಕ್ಷದ ಒಳ ಮೀಸಲಾತಿ ವರ್ಗೀಕ...
11/09/2025

ಅವೈಜ್ಞಾನಿಕ ಒಳ ಮೀಸಲಾತಿಯ ಮೂಲಕ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿರುವ ಸರ್ಕಾರಕ್ಕೆ ದಿಕ್ಕಾರ, ದಿಕ್ಕಾರ

ಕಾಂಗ್ರೆಸ್ ಪಕ್ಷದ ಒಳ ಮೀಸಲಾತಿ ವರ್ಗೀಕರಣದ ನಿರ್ಣಯವನ್ನು ಉಗ್ರವಾಗಿ ಖಂಡಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಸೇರಿದಂತೆ ಆಲಕ್ಷಿತ ತಳ ಸಮುದಾಯಗಳು ಸೇರಿದಂತೆ ಹಲವು ಸಮಾಜದ ಮುಖಂಡರು ಭಾಗಿಯಾಗಿದ್ದರು

ನಿರೀಕ್ಷೆಯಂತೆ ಬಿಜೆಪಿ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಮುಖಂಡರನ್ನು ಬಿಟ್ಟರೆ ಬೇರೆ ಯಾವುದೇ ಪಕ್ಷದ ಮುಖಂಡರು ಭಾಗವಹಿಸದಿರುವುದು ಎದ್ದು ಕಾಣುತ್ತಿತ್ತು ಒಟ್ಟಾರೆ ಇದು ಬಿಜೆಪಿ ಕಾರ್ಯಕ್ರಮವಾಗಿತ್ತೇ ಹೊರತು ಪಕ್ಷಾತೀತ ಕಾರ್ಯಕ್ರಮವಾಗಿರಲಿಲ್ಲ

ಒಳ ಮೀಸಲಾತಿಯಿಂದ ನಾಲ್ಕು ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಎಲ್ಲಾ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಎಲ್ಲಾ ಮುಖಂಡರು ಭಾಗವಹಿಸಬಹುದಿತ್ತು ಆದರೆ ಯಾವ ಪಕ್ಷದ ನಾಯಕರು ಬರಲಿಲ್ಲವಾದ್ದರಿಂದ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ದರು

ರಾಜ್ಯದ ಮೂಲೆ-ಮೂಲೆಗಳಿಂದ ಬಂಜಾರ,/ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಜನಾಂಗದವರು ಸರಿ ಸುಮಾರು 6 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿದ್ದರು

ಬಿಜೆಪಿ ಪಕ್ಷವನ್ನು ಹೊರತುಪಡಿಸಿದರೆ ಸಮುದಾಯದ ಬಗ್ಗೆ ಕಾಳಜಿ, ಕಳಕಳಿ ಮತ್ತು ಬದ್ಧತೆ ಇರುವ ನಾಲ್ಕು ಸಮುದಾಯದ ಸ್ವಾಮೀಜಿಗಳು ಹಾಗೂ ಸಮಾಜಮುಖಿ ಮುಖಂಡರು ಭಾಗವಹಿಸಿದ್ದರು

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅವೈಜ್ಞಾನಿಕ, ಅಸಂವಿಧಾನಿಕ ವರದಿ ಮತ್ತು ಸರ್ಕಾರದ ನಿರ್ಣಯವನ್ನು ಖಂಡಿಸಿ ಆಕ್ರೋಶಭರಿತರಾಗಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು

ನಮ್ಮ ಮವವಿಯನ್ನು ಸ್ವೀಕರಿಸಲು ಸ್ವತಃ ಮಾನ್ಯ ಮುಖ್ಯಮಂತ್ರಿಗಳೇ ಬರಬೇಕು ಇಲ್ಲವಾದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಗಡುವು ನೀಡಿದ್ದರು

ಏತನ್ಮಧ್ಯೆ ಸರ್ಕಾರದ ಪ್ರತಿನಿಧಿಯಾಗಿ ಸರ್ಕಾರದ ಕಾರ್ಯದರ್ಶಿಯೊಬ್ಬರು ಅಹವಾಲನ್ನು ಸ್ವೀಕರಿಸಲಿಕ್ಕೆ ಬಂದಿದ್ದರು, ಮನವಿ ಪತ್ರವನ್ನು ಸರ್ಕಾರದ ಕಾರ್ಯದರ್ಶಿಯವರಿಗೆ ಕೊಡದೆ ಬೇಸತ್ತು ವಿಧಾನಸೌಧಕ್ಕೆ ಮುತ್ತಿಗೆಯನ್ನು ಹಾಕುವ ನಿರ್ಣಯವನ್ನು ಕೈಗೊಂಡು ಪ್ರತಿಭಟನಾಕಾರರು ವಿಧಾನಸೌಧದತ್ತ ತೆರಳುವಷ್ಟರಲ್ಲಿ ಮಾರ್ಗಮಧ್ಯೆ ಬ್ಯಾರಿಕೆಟ್ ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಲಾಯಿತು ಮತ್ತು ನಂತರ ಪ್ರತಿಭಟನಾಕಾರರನ್ನು ಬಂಧಿಸಲಾಯಿತು

ಕೊನೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಮನವಿ ಪತ್ರವನ್ನು ಸ್ವೀಕರಿಸಲು ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿ, ಮನವಿ ಪತ್ರವನ್ನು ಸ್ವೀಕರಿಸಿದರು ನಂತರ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು

ಡಿಸಿಪಿ ಗಿರೀಶ್ ರವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನ್ನು ಮಾಡಲಾಗಿತ್ತು

ಪಾರ್ಟಿ, ಪಕ್ಷ ಒಂದೆಡೆ ಏನೇ ಇರಲಿ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ಬದಿಗಿಟ್ಟು ಯಾವುದೇ ಪಕ್ಷವನ್ನು ನೋಡದೆ ನಮ್ಮ ಬಂಜಾರ ತಾಂಡಗಳಿಂದ ಸ್ವಯಂ ಪ್ರೇರಿತರಾಗಿ ಜನಸಮುದಾಯ ಶೇಕಡ 70 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು

ತಮ್ಮ ವೈಯುಕ್ತಿಕ ಬೇಳೆಯನ್ನು ಬೇಯಿಸಿಕೊಳ್ಳಲಿಕ್ಕೆ ಮೂಕ ವೇದನೆಯಿಂದ ಬಳಲುತ್ತಿರುವ ನಮ್ಮ ಬಂಜಾರ ಸಮುದಾಯದವರನ್ನು ಮೇಲಿಂದ ಮೇಲೆ ಇಂತಹ ಪ್ರತಿಭಟನೆಗಳಿಗೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ

ಚುನಾವಣೆ ಬಂದಾಗ ಮನೆ-ಮನೆಗೆ ತೆರಳಿ ಯಾಡಿ, ಬಾಪು, ಭೀಯಾ, ಮಾಮಾ, ಕಾಕಾ, ಫೂಪ ಎಂದು ಕಾಡಿ- ಬೇಡಿ ಮತಗಳನ್ನು ಗಿಟ್ಟಿಸಿಕೊಂಡು ವಿಧಾನಸೌಧದಲ್ಲಿ ನಮ್ಮ ಪರವಾಗಿ ಯಾರೂ ಕೂಡ ಚಕಾರವೆತ್ತದ ಶಾಸಕರನ್ನು ಮತ್ತು ನಮ್ಮ ಹೋರಾಟಗಾರರು ಮಾರಾಟವಾಗಿದ್ದಾರೆ ಎಂದು ಅಸಂವಿಧಾನಿಕ ಪದಗಳಿಂದ ತಮ್ಮ-ತಮ್ಮಲ್ಲೇ ಬೈಯುತ್ತಾ ಹಿಡಿ ಶಾಪ ಹಾಕುತ್ತಿದ್ದರು.

ಒಂದಂತೂ ಸತ್ಯ:

ಕೇವಲ ನಾಲ್ಕು ಮಂದಿ ತಮ್ಮ ವೈಯುಕ್ತಿಕ ಲಾಭಕ್ಕಾಗಿ ಸರ್ಕಾರದ ನಿರ್ಣಯವನ್ನು ಮನಸಾರೆ ಒಪ್ಪಿ ಸಮುದಾಯದ ಪರವಾಗಿ ಯಾರನ್ನು ಹೇಳದೇ ಕೇಳದೆ ಮಾನ್ಯ ಮುಖ್ಯಮಂತ್ರಿಗಳನ್ನ ಅಭಿನಂದಿಸಿದ್ದು ನಿಜಕ್ಕೂ ಬೇಸರದ ಸಂಗತಿ

ಆತ್ಮೀಯ ಬಂಜಾರ ಬಂಧುಗಳೇ,

ಸಮುದಾಯದ ಹಿತಾಸಕ್ತಿಗಾಗಿ ಅಥವಾ ಸಮುದಾಯಕ್ಕೆ ಅನ್ಯಾಯವಾದಾಗ ಯಾವುದೇ ಪಾರ್ಟಿ ಪಕ್ಷವಿರಲಿ, ಸಂಘ-ಸಂಸ್ಥೆಗಳಿರಲಿ ಪ್ರತಿಭಟನೆಯನ್ನು ಆಯೋಜನೆ ಮಾಡಿದಾಗ ಪಕ್ಷಾತೀತವಾಗಿ ಸ್ವಯಂ ಪ್ರೇರಣೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಂತಹ ಬೃಹತ್ ಪ್ರತಿಭಟನೆಗಳಲ್ಲಿ ನಮ್ಮ ಬಲವನ್ನು ತೋರಿಸುವುದು ಅತಿ ಮುಖ್ಯವಾಗುತ್ತದೆ ಬಂಧುಗಳೇ

ಧನ್ಯವಾದಗಳೊಂದಿಗೆ

ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವಿರೋಧಿಸಿ ಶಿವಮೊಗ್ಗ  ಜಿಲ್ಲಾ  ಗೋರಸೇನಾ ರಾಷ್ಟ್ರೀಯ ಸಂಘಟನೆ ಮತ್ತು ಬಂಜಾರ ಸಮಾಜದ ವಿವಿಧ ಸಂಘಟನ...
02/09/2025

ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಗೋರಸೇನಾ ರಾಷ್ಟ್ರೀಯ ಸಂಘಟನೆ ಮತ್ತು ಬಂಜಾರ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ರಿಕಾ ವರದಿಗಳು.

ಅವೈಜ್ಞಾನಿಕ ಒಳಮೀಸಲಾತಿ ಜಾರಿಗೆ ತಂದು ಬಂಜಾರ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ...................ಧಿಕ್ಕಾರ ...........
01/09/2025

ಅವೈಜ್ಞಾನಿಕ ಒಳಮೀಸಲಾತಿ ಜಾರಿಗೆ ತಂದು ಬಂಜಾರ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ ಸರ್ಕಾರಕ್ಕೆ
ಧಿಕ್ಕಾರ...................ಧಿಕ್ಕಾರ ..................

ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ವಿರೋಧಿಸಿ ಶಿವಮೊಗ್ಗ ಜಿಲ್ಲಾ ಗೋರಸೇನಾ ರಾಷ್ಟ್ರೀಯ ಸಂಘಟನೆ ಮತ್ತು ಬಂಜಾರ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ಒಳಮೀಸಲಾತಿಯನ್ನು ಜಾರಿಮಾಡಬಾರದು ಸರಿಯಾಗಿ, ಕ್ರಮಬದ್ಧವಾಗಿ ಸಮೀಕ್ಷೆ ಮಾಡಿ ಆನಂತರ ಕ್ರಮಕೈಗೊಳ್ಳ ಬೇಕು. ನಮ್ಮ ಸಮಾಜದ ಗುಳೆ ಹೋಗಿರುವ ಸದಸ್ಯರು ಮಿಸಲಾತಿ ಸಮೀಕ್ಷೆಯಿಂದ ಹೊರಗಿದ್ದಾರೆ. ಇದನ್ನು ಪರಿಗಣಿಸಬೇಕು, ಈ ಎಲ್ಲಾ ಕಾರಣಗಳಿಂದ ಅವೈಜ್ಞಾನಿಕ ಒಳಮೀಸಲಾತಿಯನ್ನು ಜಾರಿಗೆ ತರಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.

28/07/2025

ಗೋರ ಸಿಕವಾಡಿ ಸಾಮಾಜಿಕ ಚಳುವಳ್ ಭಾರತ, ಗೋರ ಸಿಕವಾಡಿ ಕರ್ನಾಟಕ ಕಟಮಾಳೋ ಚಾರಿಟೇಬಲ್ ಟ್ರಸ್ಟ್, ರಾಯಸಿನ ಫೌಂಡೇಶನ್, ಗೋರ ಸಿಕವಾಡಿ ಕಟಮಾಳೋ ಶಿವಮೊಗ್ಗ ದಾವಣಗೆರೆ ಇವರ ಸಹಯೋಗದಲ್ಲಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಭಾಯಗಡ್ ನಲ್ಲಿ ನಡೆದ ಗೋರ ಗುಣವಂತ ವಿದ್ಯಾರ್ಥಿ ಸತ್ಕಾರ ಮಾಳಾವ್-2025 ರ ಕಾರ್ಯಕ್ರಮದಲ್ಲಿ ಗೋರ ಸೇನಾ ರಾಷ್ಟ್ರೀಯ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷರಾದ ಮಾಟಿ ಬಾಳಾ ಸಾಹೇಬ್ ದೇಗಾವತ್ ಅವರ ಅದ್ಬುತ ಮಾತು.

ಗೋರ ಸಿಕವಾಡಿ ಸಾಮಾಜಿಕ ಚಳುವಳ್ ಭಾರತ, ಗೋರ ಸಿಕವಾಡಿ ಕರ್ನಾಟಕ ಕಟಮಾಳೋ ಚಾರಿಟೇಬಲ್ ಟ್ರಸ್ಟ್, ರಾಯಸಿನ ಫೌಂಡೇಶನ್, ಗೋರ ಸಿಕವಾಡಿ ಕಟಮಾಳೋ ಶಿವಮೊ...
28/07/2025

ಗೋರ ಸಿಕವಾಡಿ ಸಾಮಾಜಿಕ ಚಳುವಳ್ ಭಾರತ, ಗೋರ ಸಿಕವಾಡಿ ಕರ್ನಾಟಕ ಕಟಮಾಳೋ ಚಾರಿಟೇಬಲ್ ಟ್ರಸ್ಟ್, ರಾಯಸಿನ ಫೌಂಡೇಶನ್, ಗೋರ ಸಿಕವಾಡಿ ಕಟಮಾಳೋ ಶಿವಮೊಗ್ಗ ದಾವಣಗೆರೆ ಇವರ ಸಹಯೋಗದಲ್ಲಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಭಾಯಗಡ್ ನಲ್ಲಿ ನಡೆದ ಗೋರ ಗುಣವಂತ ವಿದ್ಯಾರ್ಥಿ ಸತ್ಕಾರ ಮಾಳಾವ್-2025 ರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ, ಈ ವಿಶೇಷ ಕಾರ್ಯಕ್ರಮಕ್ಕೆ ಶಿವಮೊಗ್ಗ ಮತ್ತು ದಾವಣಗೆರೆ ಎರಡು ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಅಭೂತಪೂರ್ವ ಬೆಂಬಲ ನೀಡಿದ್ದೀರಿ, ಸಂಪನ್ಮೂಲ ವ್ಯಕ್ತಿಗಳಿಂದ ನಡೆದ ಉಪನ್ಯಾಸವನ್ನು ಕೇಳಿ ಜ್ಞಾನದ ಭಂಡಾರದ ಜೊತೆಗೆ ನಮ್ಮ ಕಿರು ಸನ್ಮಾನವನ್ನು ಸ್ವೀಕರಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಲ್ಲ ಸಂಘಟನೆಯ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

ಈ ವೇಳೆ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ನಿವೃತ್ತ ಉಪನಿರ್ದೇಶಕರು ಹಾಗೂ ಸಮಾಜದ ಹಿರಿಯರು ಆದ ಡಾ.ಎಸ್ ಇಂದ್ರಾನಾಯ್ಕ್ , ಬೇಲೂರು ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಜಯಲಕ್ಷ್ಮಿ ನಾಯಕ್, ಗೋರ ಸೇನಾ ರಾಷ್ಟ್ರೀಯ ಸಂಘಟನೆಯ ಕರ್ನಾಟಕ ರಾಜ್ಯಾಧ್ಯಕ್ಷರಾದ ಮಾಟಿ ಬಾಳಾ ಸಾಹೇಬ ದೇಗಾವತ್, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 615 ಅಂಕಗಳನ್ನು ಪಡೆದು ಆಯ್ಕೆಯಾದ ಡಾ.ದಯಾನಂದ್ ಸಾಗರ್.ಎಲ್, ಹೊನ್ನಾಳಿ ಉಪವಿಭಾಗದ ಉಪವಿಭಾಗಾಧಿಕಾರಿಗಳಾದ ಅಭಿಷೇಕ್ ವಿ ಸೇರಿದಂತೆ ಗೋರ ಸಿಕವಾಡಿ ಸಾಮಾಜಿಕ ಚಳುವಳ್ ಭಾರತ, ಗೋರ ಸಿಕವಾಡಿ ಕರ್ನಾಟಕ ಕಟಮಾಳೋ ಚಾರಿಟೇಬಲ್ ಟ್ರಸ್ಟ್, ರಾಯಸಿನ ಫೌಂಡೇಶನ್, ಗೋರ ಸೇನಾ ಪದಾಧಿಕಾರಿಗಳು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಗೋರ ಗುಣವಂತ ವಿದ್ಯಾರ್ಥಿ ಸತ್ಕಾರ ಮಳಾವ್-2025ಅಪಣ ಗೋರೂರ ಬೇಟಿ-ಬೇಟಾನ್ ಗೋರೂರ ಇತಿಹಾಸ ಗೋರ ವೇರಾಳೂ, ಗೋರೂರ ಸಂಸ್ಕೃತಿ, ರೂಢಿ ಸಂಪ್ರದಾಯ ಅನ್ ...
24/07/2025

ಗೋರ ಗುಣವಂತ ವಿದ್ಯಾರ್ಥಿ ಸತ್ಕಾರ ಮಳಾವ್-2025

ಅಪಣ ಗೋರೂರ ಬೇಟಿ-ಬೇಟಾನ್ ಗೋರೂರ ಇತಿಹಾಸ ಗೋರ ವೇರಾಳೂ, ಗೋರೂರ ಸಂಸ್ಕೃತಿ, ರೂಢಿ ಸಂಪ್ರದಾಯ ಅನ್ ವಿರೋ ಸಾತೋ ಸಾಥ್ ವಂದೂರ ಶಿಕ್ಷಣೇರ ಮಹತ್ವ ಕಳಾಯೇರೋ ಕಾಮ್ ಬಡ್ಕೊ ಛ. ಅಂಬೇಡ್ಕರ್ ಏಕ್ ವಾತ್ ಕೇಗೋ.. ಶಿಕ್ಷಿತ ಬಡೋ ಸಂಘಟಿತ ರೋ ಅನ್ ಸಂಘರ್ಷ ಕರೋ ಕನ್, ಶಿಕ್ಷಣ ಏಕ್ ಅಸೋ ಮೋಟೋ ತಾಕತ್ ಛ. ದನೀಯಾ ಬದಲ್ ಸಕಚ್, ತೋ ಆಪಣ ಗೋರ ಸಮಾಜೇಮ ಶಿಕ್ಷಣ ಲೇನ ಸಾಧನೆ ಕರ್ಮೇಲೇಜಕೋಣ ಬೇಟಿ ಬೇಟಾನ್ ಆನ್ ವಂದೂರ ಯಾಡಿ ಬಾಪೇನ ಗೋರಸೀಕವಾಡಿ ಸಾಮಾಜಿಕ ಚಳವಳ ವಡೀತಿ ಸನ್ಮಾನ, ಸತ್ಕಾರ ಕಾರ್ಯಕ್ರಮ ಘಢಾಯೇಮ ಅವರೋಚ, ತೋ ಸೇ ಗೋರ ನೌಕರದಾರ ಭಾಯೀ ಬಂದ್ ಸಗಾಸಣ್ ಗಣಗೋತ ವಿ ಕಾರ್ಯಕ್ರಮೇನ ತನ್-ಮನ-ಧನೇತಿ ಹಾತಬಾರ್ ಲಗಾಡನ್ ವಿ ಕಾರ್ಯಾ ಘಡಾಯೇಸಾರು ಆಂಗ್ ಆಣುಕೇನ ಗೋರಸೀಕವಾಡಿ-ಗೋರಸೇನಾ ಶಿವಮೊಗ್ಗ ಆನ್ ದಾವಣಗೆರೆ ಜಿಲ್ಲಾರ್ ಕಟಮಾಕೇರ್ ವಡಿತಿ ನವಣ್ ಕರನ್ ಹಾತ್ ಜೋಡಿ ವಿನಂತಿ.

ಜೈ ಗೋರ - ಜೈ ಸೇವಾಲಾಲ್

ಭಾನುವಾರ ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಗೋರ್ ಸೇನಾ ರಾಷ್ಟ್ರೀಯ ಸಂಘಟನೆಯ ಶಿವಮೊಗ್ಗ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸ...
21/07/2025

ಭಾನುವಾರ ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಗೋರ್ ಸೇನಾ ರಾಷ್ಟ್ರೀಯ ಸಂಘಟನೆಯ ಶಿವಮೊಗ್ಗ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸಂಧರ್ಭದಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ರಿಕಾ ವರದಿಗಳು

ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯ ರಾಜ್ಯ ಘಟಕದ ವತಿಯಿಂದ ಭಾನುವಾರ ನಗರದ ಬಂಜಾರ ಭವನದಲ್ಲಿ ವಿಶೇಷ ಸಭೆಯನ್ನ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶಿವಮ...
21/07/2025

ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯ ರಾಜ್ಯ ಘಟಕದ ವತಿಯಿಂದ ಭಾನುವಾರ ನಗರದ ಬಂಜಾರ ಭವನದಲ್ಲಿ ವಿಶೇಷ ಸಭೆಯನ್ನ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶಿವಮೊಗ್ಗ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯ ಶಿವಮೊಗ್ಗ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶ್ರೀ ಚಂದ್ರ ನಾಯ್ಕ ಜಿ, ಉಪಾಧ್ಯಕ್ಷರಾಗಿ ಶ್ರೀ ಸಂತೋಷ್ ನಾಯ್ಕ್ ಬಿ.ಪಿ, ಉಪಾಧ್ಯಕ್ಷರಾಗಿ ಶ್ರೀ ಲಕ್ಷ್ಮಣ್ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗ ಶ್ರೀ ರಾಜೇಶ್ ನಾಯ್ಕ್, ಸಂಘಟನಾ ಕಾರ್ಯದರ್ಶಿಯಾಗಿ ರಘು ನಾಯ್ಕ, ಸಹ ಕಾರ್ಯದರ್ಶಿಯಾಗಿ ಶ್ರೀ ಹೇಮಂತ್ ನಾಯ್ಕ್, ಶ್ರೀ ನವೀನ್ ನಾಯ್ಕ, ಮತ್ತು ರಘು ನಾಯ್ಕ ಹುಣಸೋಡು,
ಖಜಾಂಚಿಯಾಗಿ ಶ್ರೀ ಓಂಕಾರ್ ನಾಯ್ಕ್, ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಲಿಂಗರಾಜ್ ಗಾಡಿಕೊಪ್ಪ, ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ಶ್ರೀ ಯೋಗೇಂದ್ರ, ಶ್ರೀ ಚೇತನ್ ಬಿಟಿ ಮತ್ತು ಚಂದು ನಾಯ್ಕ್ ಮೈಸವಳ್ಳಿ ಸದಸ್ಯರುಗಳಾಗಿ ನೇಮಕವಾಗಿರುತ್ತಾರೆ.

ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಗೋರ್ ಸಿಕವಾಡಿ ಸಾಮಾಜಿಕ ಚಳವಳಿಯು ಅವರ ಸಾಮಾಜಿಕ ಬದ್ಧತೆಗೆ ಶುಭ ಹಾರೈಸಿದೆ.

Address

Shimoga
Shimoga
577201

Website

Alerts

Be the first to know and let us send you an email when Gorsena shivamogga taluk posts news and promotions. Your email address will not be used for any other purpose, and you can unsubscribe at any time.

Share

Category