Ashok Managuli

Ashok Managuli ಶಾಸಕರು, ಸಿಂದಗಿ ವಿಧಾನಸಭಾ ಕ್ಷೇತ್ರ. Member of the Karnataka Legislative Assembly, Sindagi. Member of Indian National Congress,

Ashok Mallappa Managuli , Elected MLA from Sindgi constituency from Karnataka Assembly.

05/09/2026

ಸಿಂದಗಿ ಮತಕ್ಷೇತ್ರದ ಯಂಕಂಚಿ ವಲಯದ ಬನ್ನೇಟ್ಟಿ ಪಿ.ಎ 01ನೇ ಅಂಗನವಾಡಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಕಟ್ಟಡ ಉದ್ಘಾಟಿಸಿ, ಅಂಗನವಾಡಿಗಳು ಕೇವಲ ಮಕ್ಕಳಿಗೆ ಆಹಾರ ನೀಡುವ ಕೇಂದ್ರಗಳಾಗಬಾರದು. ಅವು ಜ್ಞಾನದ ಮೊದಲ ಪಾಠಶಾಲೆಗಳಾಗಬೇಕು. ನಮ್ಮ ಮಕ್ಕಳಿಗೆ ಕೇವಲ ಆರಂಭಿಕ ಅಕ್ಷರ ಜ್ಞಾನ ನೀಡಿದರೆ ಸಾಲದು, ಅದರ ಜೊತೆಗೆ ನಮ್ಮ ಸಂಸ್ಕೃತಿ, ನೈತಿಕ ಮೌಲ್ಯಗಳು ಹಾಗೂ ಉತ್ತಮ ಸಂಸ್ಕಾರವನ್ನು ಬಾಲ್ಯದಲ್ಲೇ ಬಿತ್ತಬೇಕಾದ ಅಗತ್ಯತೆಯ ಕುರಿತು ಮಾತನಾಡಿದ ಕ್ಷಣದ ಕಿರುನೋಟ...

ಸಿಂದಗಿ ತಾಲೂಕಿನ ಯರಗಲ್ ಬಿ.ಕೆ. ಗ್ರಾಮದಲ್ಲಿ ನೂತನವಾಗಿ ಅತ್ಯಂತ ಭವ್ಯವಾಗಿ ನಿರ್ಮಾಣಗೊಂಡಿರುವ ಶ್ರೀ ರುಕ್ಮಿಣಿ ಪಾಂಡುರಂಗ ವಿಠ್ಠಲ ಮಂದಿರದ ಮೂರ...
05/09/2026

ಸಿಂದಗಿ ತಾಲೂಕಿನ ಯರಗಲ್ ಬಿ.ಕೆ. ಗ್ರಾಮದಲ್ಲಿ ನೂತನವಾಗಿ ಅತ್ಯಂತ ಭವ್ಯವಾಗಿ ನಿರ್ಮಾಣಗೊಂಡಿರುವ ಶ್ರೀ ರುಕ್ಮಿಣಿ ಪಾಂಡುರಂಗ ವಿಠ್ಠಲ ಮಂದಿರದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಹೋತ್ಸವದ ಪವಿತ್ರ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದೆ.
ದೇವಾಲಯಗಳು ಸಮಾಜಕ್ಕೆ ಸನ್ಮಾರ್ಗ ಮತ್ತು ಭಕ್ತಿಯ ಬೆಳಕು ನೀಡುವ ಪವಿತ್ರ ಕೇಂದ್ರಗಳು. ಯರಗಲ್ ಬಿ.ಕೆ. ಗ್ರಾಮದ ಭಕ್ತಾದಿಗಳೆಲ್ಲರ ಶ್ರಮ ಮತ್ತು ಒಗ್ಗಟ್ಟಿನಿಂದ ತಲೆಯೆತ್ತಿರುವ ಈ ನೂತನ ಮಂದಿರವು ಇಡೀ ಗ್ರಾಮಕ್ಕೆ ಸನ್ಮಂಗಳವನ್ನು ತರಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದೆ.
ಈ ಸಂದರ್ಭದಲ್ಲಿ ಪೂಜ್ಯಗುರುಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.

ಪ್ರೀತಿ ಹಾಗೂ ಮಾನವೀಯತೆಯ ಮೂಲಕ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾನ್​ ಚೇತನ, ಬಡವರ, ನಿರ್ಗತಿಕರಿಗಾಗಿ ತನ್ನ ಜೀವವನ್ನೇ ಮು...
05/09/2026

ಪ್ರೀತಿ ಹಾಗೂ ಮಾನವೀಯತೆಯ ಮೂಲಕ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾನ್​ ಚೇತನ, ಬಡವರ, ನಿರ್ಗತಿಕರಿಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಶ್ರೇಷ್ಠ ವ್ಯಕ್ತಿತ್ವ, ಅಸಹಾಯಕರ ಸೇವೆ ಮಾಡುತ್ತಾ ವಿಶ್ವಕ್ಕೆ ಮಾದರಿ ಎನಿಸಿದ ಮಾತೃಹೃದಯದ ಮದರ್​ ತೆರೇಸಾರ ಪುಣ್ಯಸ್ಮರಣೆಯ ದಿನವಿದು.
ಹೊಟ್ಟೆಯ ಹಸಿವಿಗಿಂತಲೂ ಪ್ರೀತಿಯ ಹಸಿವು ದೊಡ್ಡದು ಎಂಬ ಮಾತಿನಂತೆ ಬದುಕಿದ ಮಹಾನ್​ ತಾಯಿ ಇವರು. ಮದರ್ ತೆರೇಸಾರ ಜೀವನ ಸಂದೇಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಲಿ. ಮಾನವೀಯತೆ ಎಲ್ಲರ ಮೂಲ ಮಂತ್ರವಾಗಲಿ. .

ಭಾರತದ ದ್ವಿತೀಯ  ರಾಷ್ಟ್ರಪತಿಗಳಾದ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಸವಿನೆನಪಿನಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯ...
05/09/2026

ಭಾರತದ ದ್ವಿತೀಯ ರಾಷ್ಟ್ರಪತಿಗಳಾದ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಸವಿನೆನಪಿನಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಪ್ರತಿ ಮಗುವಿನಲ್ಲೂ ಜ್ಞಾನದ ದೀವಿಗೆ ಬೆಳಗಿಸಿ, ಕೈಹಿಡಿದು ಬರೆಸಿ, ಉತ್ತಮ ಭವಿಷ್ಯವನ್ನು ಹಾರೈಸುವ ಪ್ರತಿ ಶಿಕ್ಷಕರಿಗೂ ಮನದುಂಬಿದ ನಮನಗಳು.

04/09/2026

ಜನರ ಆಶೋತ್ತರಗಳಿಗೆ ಹಾಗೂ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವುದೇ ನಮ್ಮ ಮೊದಲ ಕರ್ತವ್ಯ. ಈ ನಿಟ್ಟಿನಲ್ಲಿ, ನಮ್ಮ ಸಿಂದಗಿ ಮತಕ್ಷೇತ್ರದ ತಾಂಬಾ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಸಮೀಪ ನೂತನ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ನಮ್ಮ ಬಳಿ ಬೇಡಿಕೆ ಇಟ್ಟಿದ್ದರು.
ಭಕ್ತರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಶ್ರಮವಹಿಸಿ, ಸರ್ಕಾರದಿಂದ 15 ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ, ಇದೀಗ ಎಲ್ಲಾ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸುಂದರ ಸಮುದಾಯ ಭವನವನ್ನು ನಿರ್ಮಿಸಿ ಮುಗಿಸಿದ್ದೇವೆ.
ನಮ್ಮ ತಾಂಬಾ ಗ್ರಾಮದ ಪ್ರಗತಿಯ ಮತ್ತೊಂದು ಹೆಜ್ಜೆಯಾಗಿ, ಈ ನೂತನ ಸಮುದಾಯ ಭವನದ ಭವ್ಯ ಉದ್ಘಾಟನಾ ಕಾರ್ಯಕ್ರಮವು ನಾಳೆಯೇ ನೆರವೇರಲಿದ್ದು, ಅಧಿಕೃತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಲಿದೆ.

ಸಿಂದಗಿ ನಗರದ ಸೂರಜ್ ಕಾಲೋನಿಯಲ್ಲಿ ನೂತನವಾಗಿ ಸಂಪೂರ್ಣ ಅಭಿವೃದ್ಧಿಗೊಂಡಿರುವ ಸುಸಜ್ಜಿತ N.A ಪ್ಲಾಟ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಇಂದು ಭಾಗವಹಿ...
04/09/2026

ಸಿಂದಗಿ ನಗರದ ಸೂರಜ್ ಕಾಲೋನಿಯಲ್ಲಿ ನೂತನವಾಗಿ ಸಂಪೂರ್ಣ ಅಭಿವೃದ್ಧಿಗೊಂಡಿರುವ ಸುಸಜ್ಜಿತ N.A ಪ್ಲಾಟ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಇಂದು ಭಾಗವಹಿಸಿದೆ.
ಸಿಂದಗಿ ನಗರದ ವೇಗದ ಬೆಳವಣಿಗೆಗೆ ಪೂರಕವಾಗಿ, ಸಾರ್ವಜನಿಕರ ಸುಂದರ ಮನೆ ನಿರ್ಮಾಣದ ಕನಸನ್ನು ನನಸು ಮಾಡಲು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಈ ಲೇಔಟ್​ ನಿರ್ಮಾಣ ಮಾಡಲಾಗಿದ್ದು, ಸಿಂದಗಿ ನಗರದ ಸುಂದರ ಮತ್ತು ವ್ಯವಸ್ಥಿತ ಬೆಳವಣಿಗೆಗೆ ಇಂತಹ ಉತ್ತಮ ಗುಣಮಟ್ಟದ ವಸತಿ ಯೋಜನೆಯ ಅವಶ್ಯಕತೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದೆ.

ಸಿಂದಗಿ ನಗರದ ಅಬುಹಾಲ್​​ನಲ್ಲಿ ಇಂದು ಆಯೋಜಿಸಲಾಗಿದ್ದ ಶಹಪುರ ಪರಿವಾರದ ವಲಿಮಾ ಸಮಾರಂಭದಲ್ಲಿ ಭಾಗವಹಿಸಿ, ನೂತನ ವಧು - ವರರ ಹೊಸ ಜೀವನಕ್ಕೆ ಶುಭ ...
04/09/2026

ಸಿಂದಗಿ ನಗರದ ಅಬುಹಾಲ್​​ನಲ್ಲಿ ಇಂದು ಆಯೋಜಿಸಲಾಗಿದ್ದ ಶಹಪುರ ಪರಿವಾರದ ವಲಿಮಾ ಸಮಾರಂಭದಲ್ಲಿ ಭಾಗವಹಿಸಿ, ನೂತನ ವಧು - ವರರ ಹೊಸ ಜೀವನಕ್ಕೆ ಶುಭ ಹಾರೈಕೆಗಳನ್ನು ಸಲ್ಲಿಸಿದೆ.

ಸಿಂದಗಿ ನಗರದಲ್ಲಿ ನಡೆದ ಗೊರವಗುಂಡಗಿ ಗ್ರಾಮದ ಹಂಡ್ರಗಲ್​ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಹೊಸ ಬಾಳಿಗೆ ಕಾಲಿಟ್ಟ ನೂತನ ವಧು ವರರಿಗೆ ...
04/09/2026

ಸಿಂದಗಿ ನಗರದಲ್ಲಿ ನಡೆದ ಗೊರವಗುಂಡಗಿ ಗ್ರಾಮದ ಹಂಡ್ರಗಲ್​ ಪರಿವಾರದ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಹೊಸ ಬಾಳಿಗೆ ಕಾಲಿಟ್ಟ ನೂತನ ವಧು ವರರಿಗೆ ಶುಭಾಶಯ ಕೋರಿದೆ.

2023-24ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ, ಸಿಂದಗಿ ಮತಕ್ಷೇತ್ರದ ತಾಂಬಾ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಹತ್ತಿರ ...
04/09/2026

2023-24ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ, ಸಿಂದಗಿ ಮತಕ್ಷೇತ್ರದ ತಾಂಬಾ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ಹತ್ತಿರ ನೂತನವಾಗಿ ಸುಸಜ್ಜಿತ ಸಮುದಾಯ ಭವನವನ್ನು ನಿರ್ಮಿಸಲಾಗಿದೆ.
ಒಟ್ಟು 15 ಲಕ್ಷ ರೂಪಾಯಿಗಳ ಮೊತ್ತದ ವಿಶೇಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಸಮುದಾಯ ಭವನದ ಭವ್ಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ತಾಂಬಾ ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಯ ಮಹಾಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿಸಿಕೊಡಬೇಕಾಗಿ ವಿನಂತಿಸುವೆ.

ಸಿಂದಗಿ ನಗರದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ವರ್ಷಾ ಪ್ರಕಾಶ ಕನ್...
04/09/2026

ಸಿಂದಗಿ ನಗರದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ವರ್ಷಾ ಪ್ರಕಾಶ ಕನ್ನೊಳ್ಳಿ ಇವರ ಜಂಟಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಈ ಸಂದರ್ಭದಲ್ಲಿ ಉದಯೋನ್ಮುಖ ಕವಿ ಕುಮಾರ ಆಕಾಶ ದೊಡ್ಡಪ್ಪ ರಾಗಿ ಅವರ ‘ಅಂತರಂಗದ ಕರೆಯೋಲೆ’ ಕವನ ಸಂಕಲನವನ್ನು ಬಿಡುಗಡೆ ಮಾಡಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಅವರ ಮುಂದಿನ ಸಾಹಿತ್ಯ ಕೃಷಿಗೆ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸಿದೆ.

Address

Sindagi
Sindagi

Telephone

+919449653471

Website

Alerts

Be the first to know and let us send you an email when Ashok Managuli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ashok Managuli:

Shortcuts

Share