10/04/2020
ರೈತರು ಮತ್ತು ಜನರ ನಡುವಿನ ಸೇತುವೆಯಾಗಿ ನಮ್ಮ ತಾಲ್ಲೂಕು ಆಡಳಿತ
ಈ ವಿನೂತನ ಯೋಜನೆಯ ಯೋಚನೆಗಳಿಂತಿವೆ
# ತಾಲ್ಲೂಕಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಸಹಾಯವಾಣಿಗೆ ಕರೆ ಮಾಡಿ ತಮ್ಮಲ್ಲಿ ಇಂತಿಷ್ಟು ಹಣ್ಣು ಅಥವಾ ತರಕಾರಿ ಬೆಳೆಯಲಾಗಿದೆಯೆಂದು ತಿಳಿಸಬೇಕು
# ಸದರಿ ದಾಸ್ತಾನು ಮಾಹಿತಿ ಪಡೆದ ತೋಟಗಾರಿಕೆ ಇಲಾಖೆಯವರು ನಿಗಧಿತ ಒಂದು ದರವನ್ನು ನಿಗಧಿಪಡಿಸಿ ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತೆ.ಹಣವನ್ನು ಅಲ್ಲಿಯೇ ರೈತರಿಗೆ ಪಾವತಿ ಮಾಡಲಾಗುತ್ತಿದೆ.
#ಇದರಿಂದಾಗಿ ರೈತರು ಮಾರುಕಟ್ಟೆಗಾಗಿ ಬೇರೆಲ್ಲಿಯೂ ಅಲೆದಾಡುವ ಸಮಸ್ಯೆ ಉದ್ಭವಿಸುವುದಿಲ್ಲ..ರೈತನು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ.
# ಖರೀದಿ ಮಾಡಲಾದ ಹಣ್ಣು, ತರಕಾರಿಗಳನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಫನ ತ್ಯಾಜ್ಯವಿಲೇವಾರಿ ಗೆ ನೀಡಲಾದ ಐದು ಸಣ್ಣ ವಾಹನಗಳನ್ನು ಸುಸಜ್ಜಿತವಾಗಿ ಸಿದ್ದ ಮಾಡಿಕೊಂಡು ಮೊದಲಿಗೆ ಸಿರಾ ನಗರಾದ್ಯಂತ ಖರೀದಿ ಮಾಡಲಾದ ಎಲ್ಲಾ ಸರಕುಗಳ ಮಾರಾಟ ಮಾಡಲು ತೆರಳಲು ಅನುಮತಿ ನೀಡಲಾಗಿದೆ..
# ಸಿರಾ ನಗರದ ಸಾರ್ವಜನಿಕರು ಇಂತಹಾ ನೇರ ಮಾರಾಟ ವಾಹನಗಳನ್ನು ಮಾತ್ರ ಅವಲಂಬಿಸಿ ಹೊರಗಡೆ ಹೋಗದೇ ಮನೆ ಮುಂಭಾಗದಲ್ಲಿಯೇ ಖರೀದಿಸಲು ಸಾಮಾಜಿಕ ಜಾಲ ತಾಣಗಳ ಮುಂಖಾಂತರ ಪ್ರಚಾರ ಮಾಡಲು ತಿಳಿಸಲಾಯಿತು..
# ಸಾರ್ವಜನಿಕರ ಅಗತ್ಯ, ಅವಶ್ಯಕತೆ ಮತ್ತು ಉತ್ತಮ ಸ್ಪಂದನೆಯನ್ನಾಧರಿಸಿ ಮುಂದಿನ ದಿನಗಳಲ್ಲಿ ಇಂತಹಾ ಇನ್ನೂ ಹೆಚ್ಚಿನ ವಾಹನಗಳ ಮುಖಾಂತರ ಹಣ್ಣು ತರಕಾರಿ ಮಾರಾಟ ಮಾಡಲಾಗುವುದು.. ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು , ಇದರಿಂದಾಗಿ ತರಕಾರಿ ಹಣ್ಣುಗಳಿಗಾಗಿ ನಗರ ಪ್ರದೇಶಗಳಿಗೆ ತೆರಳದಂತೆ ಹಾಗೂ ಗ್ರಾಮೀಣ ಜನರನ್ನೂ ಎಲ್ಲಿಯೂ ಗುಂಪುಗೂಡದಂತೆ ತಮ್ಮತಮ್ಮ ಮನೆಯಲ್ಲಿಯೇ ಇರಿಸುವ ಮುಖ್ಯ ಉದ್ದೇಶವನ್ನು ತಾಲ್ಲೂಕು ಆಡಳಿತದಿಂದ ಮಾಡಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.