team yuva sankalpa

team yuva sankalpa ಜೀವನ, ಶಿಕ್ಷಣ, ಆರೋಗ್ಯ, ಪರಿಸರ

ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ...

18/07/2024

ಹೀಗೆ ಮಳೆ ಬರ್ತಾ ಇದ್ರೆ ಒಂದಾ ನಾವಿದ್ದಲ್ಲಿಗೆ ಮೀನು ಬರೊತ್ತೆ ! ಇಲ್ಲ ಅಂದ್ರೆ ಮೀನು ಇದ್ದಲ್ಲಿಗೆ ನಾವು ಹೋಗ್ತೇವೆ!!

*ಅಡಿಕೆಯಲ್ಲಿ ಸುಳಿಕೊಳೆ ರೋಗ* 1.ಸುಳಿಕೊಳೆ ಅಡಿಕೆ ಬೆಳೆಯ ಒಂದು ಮಾರಕ ರೋಗ. ಈ ರೋಗವೂ ಕೂಡ ಪೈಟಾಪ್ತೋರ ಮೀಡಿ (Phytophthora medii) ಎಂಬ ಶಿಲೀ...
13/07/2024

*ಅಡಿಕೆಯಲ್ಲಿ ಸುಳಿಕೊಳೆ ರೋಗ*

1.ಸುಳಿಕೊಳೆ ಅಡಿಕೆ ಬೆಳೆಯ ಒಂದು ಮಾರಕ ರೋಗ. ಈ ರೋಗವೂ ಕೂಡ ಪೈಟಾಪ್ತೋರ ಮೀಡಿ (Phytophthora medii) ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ.

2.ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿರುವ ತೋಟಗಳಲ್ಲಿ ಈ ರೋಗವು ಮುಂಗಾರು (ಜೂನ್ - ಸೆಪ್ಟೆಂಬರ್) ಮತ್ತು ಚಳಿಗಾಲದ (ಅಕ್ಟೋಬರ್ - ಫೆಬ್ರವರಿ) ತಿಂಗಳುಗಳಲ್ಲಿ ಕಂಡುಬರುತ್ತದೆ.

*ಲಕ್ಷಣಗಳು*

1.ಸುಳಿಯ ಭಾಗದ ಎಳೆಗರಿ ಹಳದಿ ಬಣ್ಣಕ್ಕೆ ತಿರುಗುವುದು ರೋಗದ ಪ್ರಾರಂಭಿಕ ಲಕ್ಷಣ. ನಂತರ ಗರಿಯು ಕಂದು ಬಣ್ಣಕ್ಕೆ ತಿರುಗಿ ಸಂಪೂರ್ಣ ಸಾಯುವುದು.

2.ಈ ಹಂತದಲ್ಲಿ ರೋಗ ಪೀಡಿತ ಗರಿಯನ್ನು ಕೈಯಿಂದ ಎಳೆದಾಗ ಸುಲಭವಾಗಿ ಹೊರಕ್ಕೆ ಬರುತ್ತದೆ.

3.ಕಾಲಕ್ರಮೇಣ ಸೋಂಕಿನಿಂದಾಗಿ ಮರದ ಸುಳಿ ಸಂಪೂರ್ಣವಾಗಿ ಕೊಳೆತು ಸಾಯುತ್ತದೆ. ಸುಳಿಕೊಳೆ ಪೀಡಿತ ಮರಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಕೊಳೆತ ಭಾಗದಿಂದ ಹೊರಹೊಮ್ಮುವ ದುರ್ವಾಸನೆಯಿಂದಲೂ ಈ ರೋಗವನ್ನು ಗುರುತಿಸಬಹುದು.

4.ರೋಗವನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಗಿಡಕ್ಕೆ ಸೂಕ್ತ ಚಿಕಿತ್ಸೆ ಮಾಡುವುದರಿಂದ ಹೊಸ ಸುಳಿ ಬರುವುದಲ್ಲದೆ ಪೀಡಿತ ಮರವನ್ನು ಉಳಿಸಿಕೊಳ್ಳಬಹುದು.

5.ಈ ರೋಗ ಗಾಳಿ ಹಾಗೂ ಕೀಟಗಳ ಮೂಲಕ ಸಹ ಹರಡುತ್ತದೆ. ರೋಗಪೀಡಿತ ಮರದ ತುದಿಯನ್ನು ಉದ್ದಕ್ಕೆ ಸೀಳಿ ಅದರಲ್ಲಿರುವ ದುರ್ವಾಸನೆಯಿಂದ ಕೂಡಿದ ರಸವನ್ನು ಹೊರ ತೆಗೆಯಬೇಕು.

*ನಿರ್ವಹಣಾ ಕ್ರಮಗಳು*

1.ರೋಗಪೀಡಿತ ಮರದ ಸುಳಿಯ ಕೊಳೆತ ಅಂಗಾಂಶವನ್ನು ಒಂದು ಹರಿತವಾದ ಚಾಕುವಿನಿಂದ ತೆಗೆದು ಬೋರ್ಡೋ ಮಿಶ್ರಣದ ಪೇಸ್ಟ್ ಅಥವಾ ತಾಮ್ರದ ಆಕ್ಸಿಕ್ಲೋರೈಡ್ (ಬ್ಲೈಟಾಕ್ಸ್) ಪೇಸ್ಟ್ ಲೇಪಿಸುವುದು.

2.ಶಿಲೀಂಧ್ರನಾಶಕ ಲೇಪನ ಮಾಡಿದ ಭಾಗವನ್ನು ಪ್ಲಾಸ್ಟಿಕ್ ಹಾಳೆ ಅಥವಾ ಅಡಿಕೆ ಸೋಗೆಯಿಂದ ಮುಚ್ಚುವುದರಿಂದ ಕೀಟಗಳಿಂದ ರೋಗ ಹರಡುವುದನ್ನು ತಡೆಯಬಹುದಲ್ಲದೆ ಮಳೆಯಿಂದ ಶಿಲೀಂಧ್ರನಾಶಕ ಸೋರಿ ಹೋಗುವುದನ್ನು ತಡೆಯಬಹುದು.

3.ಕ್ರಮವರಿತು ಪ್ರತಿ ವರ್ಷ ಶೇಕಡ ೧ ರ ಬೋರ್ಡೋ ದ್ರಾವಣ ಅಥವಾ ಶೇಕಡ ೦.೩ ರ ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ಸುಳಿ ಸಂಪೂರ್ಣವಾಗಿ ನೆನೆಯುವ ಹಾಗೆ ಸಿಂಪರಣೆ ಮಾಡುವುದರಿಂದ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.

4.ಪರ್ಯಾಯವಾಗಿ ಅಂತರ್‌ವ್ಯಾಪಿ ಶಿಲೀಂಧ್ರನಾಶಕ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ ಶೇಕಡ ೦.೩ ರಂತೆ ಬಳಸಿ ರೋಗ ಹತೋಟಿ ಮಾಡಬಹುದು.


ತೆಂಗು ಅಡಿಕೆ ಬೆಳೆಗಾರರಿಗೆ ಖಂಡಿತವಾಗಿ ಉತ್ತಮ ಮಾಹಿತಿ

12/07/2024

ಚಂದ್ರ ಲೋಕಕ್ಕೆ ಹೋಗಿಬಂದ ವಿಜ್ಞಾನ ನಮ್ಮಲ್ಲಿ ಇದ್ದರೂ ಸಹ

ಕ್ಯಾನ್ಸರ್ ಗೆ ಔಷಧಿ ಕಂಡು ಹಿಡಿಯುವುದು ದೂರದ ಮಾತು
ನಿಖರವಾಗಿ ಕ್ಯಾನ್ಸರ್ ಗೆ ಕಾರಣ ಏನು ಅಂತಲೇ ಕಂಡು ಹಿಡಿಯೋಕೆ ಆಗಲಿಲ್ಲ ..

ಇದರ ಅರ್ಥ ನಿಸರ್ಗದ ಮುಂದೆ ನಾವು ಏನು ಅಲ್ಲ ಅಂತ ಅಷ್ಟೇ .

ಎದೆ ಹಾಲಿನಿಂದ ಕ್ಯಾನ್ಸರ್ ಬರತ್ತೆ ಅನ್ನೋ ಒಂದು ಆರೋಪ ಬಾಕಿ ಉಳಿದಿರಬಹುದು ಮತ್ತೆಲ್ಲವನ್ನು ಕ್ಯಾನ್ಸರ್ ಕಾರಕ ಅಂತ ಹೇಳಿ ಆಗಿದೆ
team yuva sankalpa

13/05/2023

ಜೀವನ, ಶಿಕ್ಷಣ, ಆರೋಗ್ಯ, ಪರಿಸರ

ಸ್ವಾರ್ಥವಿಲ್ಲದ ಬದುಕು ಸರ್ವಕಾಲಕ್ಕೂ ಶ್ರೇಷ್ಠ...

13/05/2023

ಇಲ್ನೋಡಿ
ಅದ್ಯಾಕೆ ಚಿಂತೆ, ಬೇಸರ, ಕೋಪ.

ರಾಜ್ಯದ ಜನರು ಸರಿಯಾದ ತೀರ್ಮಾನ ಮಾಡಿದ್ದಾರೆ ಹೌದು ಕಾಂಗ್ರೆಸ್ ಗೆದ್ದದ್ದು ಚಲೋ ಆಯಿತು ಅನ್ಕೊಳ್ಳಿ.

ಅದು ಬಿಟ್ಟು ಹಿಂದೂಗಳಿಗೆ ಕಷ್ಟ ಆಗುತ್ತದೆ, ಕೊಲೆ ಮಾಡ್ತಾರೆ, ಬದುಕೋಕೆ ಬಿಡಲ್ಲ ಕೇಸ್ ಆಗ್ತಾರೆ, ಅದು ಇದು ಅಂತ ಮಾತಾನಾಡೋದು ಏಕೆ. ಯಾವನು ಏನು ಮಾಡೋಕೆ ಆಗುವುದಿಲ್ಲ.

ಎಷ್ಟೋ ವರ್ಷ ಹಿಂದೂಸ್ಥಾನವನ್ನು ಆಳಿದ ಮೊಘಲರೆ ಏನು ಮಾಡುವುದಕ್ಕೆ ಆಗಲಿಲ್ಲ, ಯಾವುದೋ ಒಂದು ಪಕ್ಷ ಹಿಂದೂಗಳನ್ನು ಏನೋ ಮಾಡಿ ಬಿಡುತ್ತದೆ ಎನ್ನುವ ಭಯ ಏಕೆ.?

ಅಧಿಕಾರ ಕೊಟ್ಟರು ಸರಿಯಾಗಿ ಬಳಸಿಕೊಳ್ಳದಂತೆ ಇರುವ ಬಿಜೆಪಿ ಭಯ ಪಡಲಿ ಅವರು ರೋಡ್ ಗೆ ಬರಲಿ.

ಈ ಬಿಜೆಪಿ ಅವರ ದುರಂಕಾರ ಸ್ಪಲ್ಪ ಕಡಿಮೆ ಆಗಬೇಕು, ಅಧಿಕಾರದಲ್ಲಿದಾಗ ಏನು ಮಾಡಿದ್ದಾರೆ.? ಅಷ್ಟು ಮಾಡಿದ್ದಾರೆ.?
ಕೆಜಿ ಹಳ್ಳಿ ಡಿಜೆ ಹಳ್ಳಿಯ ವಿಷಯದಲ್ಲಿ ಅಪರಾಧಗಳಿಗೆ ಆದ ಶಿಕ್ಷೆ ಏನು‌? ಕಠಿಣಕ್ರಮ ನಾ..?

ಪಾದರಾಯನ ಪುರದಲ್ಲಿ ಆದ ಗಲಿಭೆಗೆ ಶಿಕ್ಷೆ ಏನು ಕಠಿಣ ಕ್ರಮ ನಾ.?

ಗೋ ರಕ್ಷಕರನ್ನು ನೋಡಿಕೊಂಡ ರೀತಿ.?

ಹಿಂದೂ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ.? ಶಿವಮೊಗ್ಗದಲ್ಲಿ
ಕೊಲೆ ಮಾಡಿದ ಕೊಲೆಗಾರರನ್ನು ಜೈಲಿನಲ್ಲಿ ಐಶಾರಾಮಿ ಜೀವನ ಮಾಡಲು ಬಿಟ್ಟಿದ್ದರು, ಅದನ್ನು ಪ್ರಶ್ನಿಸಿದ ಹರ್ಷನ ಅಕ್ಕನಿಗೆ ಗೃಹ ಸಚಿವ ಆಡಿದ ಮಾತುಗಳು ಏನು..?

ಮೈಸೂರಿನ ಬೆಟ್ಟದಲ್ಲಿ ಆತ್ಯಾಚಾರ ಆಗಿದ್ದಾಗ ದಾವಣಗೆರೆ MP ಸಿದ್ದೇಶ್ ಅವರು ಕೊಟ್ಟ ಉತ್ತರ ಏನು.?

ಈ R ಅಶೋಕ್ ಪ್ರಮೋದ್ ಮೋತಾಲಿಕ್ ಯಾರು ನನಗೆ ಗೊತ್ತಿಲ್ಲ ಅಂದಿದ್ದು.?

ಕಾರ್ಯಕರ್ತರ ಮೇಲಾದ ಕೇಸ್ ತೆಗೆದು ಹಾಕುತ್ತೇವೆ ಅಂದಿದ್ದು..?

ಇವರ ಅಧಿಕಾರದಲ್ಲಿ ಇದ್ದಾಗಲೇ ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಕಡೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆಗಿದೆ. ಎಷ್ಟೋ ಕಡೆ ಪಾಕಿಸ್ತಾನ ಬಾವುಟ ಹಾರಿಸಿದ್ದಾರೆ ಇದಕ್ಕೆ ಏನು ಶಿಕ್ಷೆ ಕೊಡ್ಟಿದ್ದಾರೆ ಹೇಳಿ..? ಈ ರೀತಿ
ಹೇಳುತ್ತಾ ಹೋದರೆ ಸಾವಿರ ಉದಾಹರಣೆಗೆ ಇದೆ.

ಅಭಿವೃದ್ಧಿ ಜೊತೆಗೆ ಜನರ ಸಂಪರ್ಕ ಮಾಡಿಲ್ಲ ಏಕೆ..? ಯೋಜನೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ ಏಕೆ.?

ಎಲ್ಲಾದಕ್ಕೂ ಮೋದಿ ಮೋದಿ ಅಂದ್ರೆ, ಮೋದಿ ಮೇಲೆ ನಮಗೂ ಗೌರವ ಇದೆ ಗುರು‌, ಆದರೆ ನಿಮ್ಮ ಕೊಡುಗೆ ಏನು..? ಹೇಳಿ

ಇವರಿಗೆ ಸರಿಯಾದ ಪಾಠ ಕಲಿಸಿದ್ದಾರೆ ನಾಡಿನ ಜನ.
ಯಾವಾಗಲೂ ಕಠಿಣ, ಕ್ರಮ ಕಠಿಣ, ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಹೇಳಿಕೆ ಅಷ್ಟೇ ನಿಮ್ಮದು.

ಎಲ್ಲಾದಕ್ಕೂ ಮೋದಿ ಎಲ್ಲಾದಕ್ಕೂ ಯಾಕ್ರೋ ನಿಮಗೆ ತಕ್ಕತ್ತು ಧಮ್ ಇಲ್ವಾ.?
ಭವಿಷ್ಯದ ಕನಸು ಅಭಿವೃದ್ಧಿ ಜನಸೇವೆ ಯಾವುದು ಮಾಡುವುದಕ್ಕೆ ಬರುವುದಿಲ್ಲವೇ..?

ಬಿಜೆಪಿಯಲ್ಲಿ ಅಷ್ಟೇ ಹಿಂದೂಗಳು ಇಲ್ಲ. ಅವರು ನಮ್ಮನ್ನು ಕೆಲಸಕ್ಕೂ ಇಟ್ಟುಕೊಂಡಿಲ್ಲ. ಎಲ್ಲಾ ಪಕ್ಷದಲ್ಲೂ ಹಿಂದೂತ್ವವಾದಿಗಳು ದೇಶಪ್ರೇಮಿಗಳು ಇದ್ದಾರೆ‌. ನಾವೇ ನಮ್ಮಿಂದಲೇ ಎನ್ನುವ ಬಿಜೆಪಿಗೆ ಇನ್ನಾದರು ಬುದ್ದಿ ಬರಲಿ.

ಅಭಿವೃದ್ಧಿ ಮಾಡಿ, ಕೆಲಸ ಮಾಡಿ ಜನರೇ ಗೆಲ್ಲಿಸುತ್ತಾರೆ. ಹಿಂದೂಕಾರ್ಯಕರ್ತರೆ ಯಾವ ಕಾರಣಕ್ಕೂ ಭಯ ಬೇಡ, ಎಚ್ಚರಿಕೆಯಿಂದ ಸೇವೆ ಮಾಡಿ ಅಷ್ಟೇ.
ಜೈ ಶ್ರೀ ರಾಮ್
ಧರ್ಮ ಸೋತಿಲ್ಲ, ಸೋಲುವುದು ಇಲ್ಲ
team yuva sankalpa

29/01/2023
29/01/2023

ಸಾಧಿಸುವ ತನಕ ಕಿವುಡನಾಗು,
ಸಾಧಿಸಿದ ಮೇಲೆ ಮುಖನಾಗು

ಯಾರೊ ಮಹಾನುಭಾವರು ಹೇಳಿದ್ದು

25/01/2023
15/01/2023

ಎಷ್ಟು ಕಾಲ ಬದುಕಿದ್ದೀರಿ ಎಂಬುದು ಮುಖ್ಯ ಅಲ್ಲ; ಎಷ್ಟು ಚೆಂದ ಬದುಕಿದ್ದೀರಿ ಎನ್ನೋದು ಮುಖ್ಯ!!

ಇಳಿಮನೆ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಲಿ-ಕಲಿ ಕೊಠಡಿಗೆ ಬಣ್ಣ ,  ಬೋರ್ಡ್ ಗೆ  ಕಪ್ಪು ಬಣ್ಣ ಹಾಗೂ ಮಕ್ಕಳಿಗೆ ಸಾಮಾನ್ಯ ಜ್...
05/12/2022

ಇಳಿಮನೆ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ
ನಲಿ-ಕಲಿ ಕೊಠಡಿಗೆ ಬಣ್ಣ , ಬೋರ್ಡ್ ಗೆ ಕಪ್ಪು ಬಣ್ಣ ಹಾಗೂ ಮಕ್ಕಳಿಗೆ ಸಾಮಾನ್ಯ ಜ್ಞಾನಕ್ಕಾಗಿ ಪುಸ್ತಕಗಳನ್ನ ಕೊಡಲಾಗಿದೆ.
-team YUVA SANKALPA

Address

Sirsi Karnatak
Sirsi
UTARAKANNADA

Telephone

+919901331171

Website

Alerts

Be the first to know and let us send you an email when team yuva sankalpa posts news and promotions. Your email address will not be used for any other purpose, and you can unsubscribe at any time.

Share

Category