BJP Raita Morcha Uttara Kannada

BJP Raita Morcha Uttara Kannada Contact information, map and directions, contact form, opening hours, services, ratings, photos, videos and announcements from BJP Raita Morcha Uttara Kannada, Political Party, D Corporates #29, uttara kannada, Sirsi.

ತಂತ್ರಜ್ಞಾನ ಎಷ್ಟೇ ಬೆಳೆದರೂ ಜನರು ಬದುಕಲು ರೈತರು ಬೆಳೆದ ಬೆಳೆಯೇ ಬೇಕು: ಸಂಸದ ಕಾಗೇರಿನೈಸರ್ಗಿಕ ಕೃಷಿ ಕಾರ್ಯಾಗಾರ: ವಿವಿಧ ಕೃಷಿ ಕ್ಷೇತ್ರಗಳ ಸ...
21/06/2026

ತಂತ್ರಜ್ಞಾನ ಎಷ್ಟೇ ಬೆಳೆದರೂ ಜನರು ಬದುಕಲು ರೈತರು ಬೆಳೆದ ಬೆಳೆಯೇ ಬೇಕು: ಸಂಸದ ಕಾಗೇರಿ

ನೈಸರ್ಗಿಕ ಕೃಷಿ ಕಾರ್ಯಾಗಾರ: ವಿವಿಧ ಕೃಷಿ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಕುಮಟಾ: ಬಿಜೆಪಿ ರೈತಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಕುಮಟಾದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಅವರ ಕಡಸಾಲಗದ್ದೆಯ ತೋಟದಲ್ಲಿ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾಳುಮೆಣಸಿನ ಗಿಡಕ್ಕೆ ರಸಸಾರ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಸಂಸದರು, "ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತಂತ್ರಜ್ಞಾನ ಹಾಗೂ ಐಟಿ-ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಬೆಳೆದರೂ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಾವೆಲ್ಲರೂ ಊಟ ಮಾಡಲು ರೈತರು ಬೆಳೆದ ಬೆಳೆಯೇ ಬೇಕು" ಎಂದರು. "ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರು ಸಾವಯವ ಕೃಷಿಯನ್ನು ಅವಲಂಬಿಸಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರವು 'ಕಿಸಾನ್ ಸಮ್ಮಾನ್ ನಿಧಿ'ಯ ಮೂಲಕ ವರ್ಷಕ್ಕೆ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿದೆ. ಮೋದಿಯವರು ಪ್ರಧಾನಿಯಾಗಿ ದೇಶ ಮುನ್ನಡೆಸುತ್ತಿರುವ ಅವಧಿಯಲ್ಲಿ ರೈತರ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ಮಣ್ಣಿನ ಪರೀಕ್ಷೆ ನಡೆಸಿ ರೈತರಿಗೆ 'ಸಾಯಿಲ್ ಹೆಲ್ತ್ ಕಾರ್ಡ್' (ಮಣ್ಣಿನ ಆರೋಗ್ಯ ಕಾರ್ಡ್) ವಿತರಿಸಲಾಗಿದೆ. ಪ್ರತಿಯೊಬ್ಬ ರೈತರೂ ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ 'ಪಿ.ಎಂ ಪ್ರಣಾಮ್' ಯೋಜನೆ ಹಾಗೂ 'ಖೇತ್ ಬಚಾವೋ' (ಹೊಲ ಉಳಿಸಿ) ಅಭಿಯಾನದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಹಣ ಗಳಿಸುವುದೇ ಜೀವನದ ಗುರಿಯಾಗಬಾರದು. ಸಮಾಜದ ಹಿತ ಕಾಯಲು ನಾವೆಲ್ಲರೂ ನೈಸರ್ಗಿಕ ಕೃಷಿಯತ್ತ ಸಾಗಬೇಕು" ಎಂದು ಅವರು ತಿಳಿಸಿದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, "ಅಂತ್ರವಳ್ಳಿಯಲ್ಲಿ ಎನ್.ಡಿ. ಹೆಗಡೆಯವರು 18 ರಿಂದ 20 ಎಕರೆ ಜಾಗದಲ್ಲಿ ಅತ್ಯುತ್ತಮವಾಗಿ ಕಾಳುಮೆಣಸು ಮತ್ತು ಅಡಿಕೆಯನ್ನು ಬೆಳೆದು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಈಗ ಎಲ್ಲೆಡೆ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾಸಾಯನಿಕ ಮುಕ್ತ ಸಾವಯವ ಕೃಷಿಯ ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ" ಎಂದರು.

ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಮಾತನಾಡಿ, "ನಾವು 40 ರಿಂದ 50 ಎಕರೆಯಲ್ಲಿ ನೈಸರ್ಗಿಕ ವಿಧಾನದಿಂದ ಸುಮಾರು 500 ಕ್ವಿಂಟಾಲ್ ಕಾಳುಮೆಣಸು ಬೆಳೆದಿದ್ದೇವೆ. ಹಿಂದೆ ಹೇಗೆ ವಿದೇಶಿಗರು ಕಾಳುಮೆಣಸನ್ನು ಹುಡುಕಿಕೊಂಡು ಭಾರತಕ್ಕೆ ಬರುತ್ತಿದ್ದರೋ, ಅಂತಹ ವಾತಾವರಣ ಮತ್ತೆ ನಿರ್ಮಾಣವಾಗಬೇಕಿದೆ. ಕೆಲ ತಿಂಗಳ ಹಿಂದೆ ವಿದೇಶಿ ಪ್ರತಿನಿಧಿಗಳು ನಮ್ಮ ತೋಟಕ್ಕೆ ಭೇಟಿ ನೀಡಿದ್ದರು. ರಾಸಾಯನಿಕ ಮುಕ್ತವಾದ, ಬೆಟ್ಟದ ಸಾಲಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಳುಮೆಣಸನ್ನು ಒದಗಿಸಲು ಸಾಧ್ಯವೇ ಎಂದು ಕೇಳಿದ್ದರು. ನಮ್ಮ ಕೃಷಿ ತೋಟಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಗಣ್ಯರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ತಮ್ಮ ಅನುಭವ ಹಂಚಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, "ಸಾವಯವ ಕೃಷಿ ಪದ್ಧತಿಯನ್ನು ಬಳಸಿ ಯಾವ ರೀತಿ ಉತ್ತಮ ಬೆಳೆ ತೆಗೆಯಬಹುದು ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೋದಿಯವರ ನೇತೃತ್ವದ ಆಡಳಿತವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲು ಇಂತಹ ಚಟುವಟಿಕೆಗಳ ಮೂಲಕ ಜಿಲ್ಲೆಯ ರೈತರನ್ನು ಪ್ರೇರೇಪಿಸುತ್ತಿದ್ದೇವೆ" ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, "ಹಿಂದೆ ನಮ್ಮ ಹಿರಿಯರ ಕಾಲದಲ್ಲಿ 'ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ಉದ್ಯೋಗ ಕನಿಷ್ಠ' ಎನ್ನುವ ಮನೋಭಾವ ಇತ್ತು. ಆದರೆ ಈಗ ಕಾಲ ಬದಲಾಗಿ 'ಉದ್ಯೋಗ ಉತ್ತಮ, ವ್ಯಾಪಾರ ಮಧ್ಯಮ, ಕೃಷಿ ಕನಿಷ್ಠ' ಎನ್ನುವಂತಾಗಿದೆ. ಕೃಷಿಕರಿಗೆ ಹೆಣ್ಣು ಸಿಗುತ್ತಿಲ್ಲ, ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆಗಳಿಗೆ ನಾವು ಅನುಸರಿಸಿಸುತ್ತಿರುವ ಕೃಷಿ ಪದ್ಧತಿಯೇ ಮುಖ್ಯ ಕಾರಣ. ನಾವು ಸಾಂಪ್ರದಾಯಿಕ ಸಾವಯವ ಕೃಷಿಯನ್ನು ಬಿಟ್ಟು ರಾಸಾಯನಿಕ ಕೃಷಿಗೆ ಮೊರೆ ಹೋದಾಗಿನಿಂದ ಹಿನ್ನಡೆ ಆರಂಭವಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾದಂತೆ ನಾವು ತಿನ್ನುವ ತರಕಾರಿ, ಹಣ್ಣುಗಳೆಲ್ಲವೂ ವಿಷಮುಕ್ತವಾಗಿರದೆ ರೋಗಕಾರಕವಾಗುತ್ತಿವೆ" ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಕೃಷಿಕರಾದ ನಾಗು ಗೌಡ ಕಡ್ನೀರು, ಜೇನು ಕೃಷಿಕ ಸಂತೋಷ ಹೆಗಡೆ ಶಿರಸಿ, ವಿಷ್ಣು ಜಟ್ಟು ಗೌಡ ಮೂರುರೂ, ಲಕ್ಷ್ಮೀನಾರಾಯಣ ಹೆಗಡೆ ಕಲ್ಲಬ್ಬೆ, ಮಂಜುನಾಥ ಬೀರಾ ಗೌಡ ಕಂದೊಳ್ಳಿ, ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ, ಭತ್ತದ ವೈವಿಧ್ಯಮಯ ತಳಿ ಬೆಳೆದ ಸಾಧಕ ನಾಗರಾಜ ನಾಯ್ಕ ಕಾಗಲ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕುಮಟಾ ಬಿಜೆಪಿ ಮಂಡಲಾಧ್ಯಕ್ಷರಾದ ಗಣಪತಿ ಹೆಗಡೆ, ಕುಮಾರ ಭಟ್, ಮಾಜಿ ಜಿ.ಪಂ. ಸದಸ್ಯ ಗಜಾನನ ಪೈ, ಡಾ. ಜಿ.ಜಿ. ಹೆಗಡೆ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಎಲ್ಲಾ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಇದ್ದರು. ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣ್ಣುಮೂರ್ತಿ ಹೆಗಡೆ ವಂದಿಸಿದರು.


ಬಾಕ್ಸ್.....

ರೈತಮೋರ್ಚಾ ಕಾರ್ಯಕ್ರಮಕ್ಕೆ ಸಂಸದ ಕಾಗೇರಿ ಶ್ಲಾಘನೆ

ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಘಟಕವು ಇಂತಹ ಉತ್ತಮ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ. ಸಾವಯವ ಕೃಷಿಯಲ್ಲಿ ಅದ್ಭುತ ಇಳುವರಿ ಪಡೆದು ಸಾಧನೆ ಮಾಡಿದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆಯವರನ್ನು ಹಾಗೂ ಜಿಲ್ಲೆಯ ವಿವಿಧ ಕೃಷಿ ಸಾಧಕರನ್ನು ಸನ್ಮಾನಿಸಿ ಗೌರವಿಸಿರುವುದು ಇತರ ರೈತರಿಗೆ ದೊಡ್ಡ ಮಾದರಿಯಾಗಿದೆ.

– ವಿಶ್ವೇಶ್ವರ ಹೆಗಡೆ ಕಾಗೇರಿ,
ಸಂಸದರು

ಊಟದಿಂದ ಬಂತು ರೋಗ, ಮಾತಿನಿಂದ ಬಂತು ಜಗಳ

ನಾವು ಸೇವಿಸುವ ಇಂದಿನ ಆಹಾರ ಪದ್ಧತಿಯಿಂದಲೇ ಬಹುತೇಕ ಆರೋಗ್ಯ ಸಮಸ್ಯೆಗಳು ನಮಗೆ ಬರುತ್ತಿವೆ. ರಾಸಾಯನಿಕಯುಕ್ತ ಆಹಾರದಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿದ್ದು, ಕ್ಯಾನ್ಸರ್‌ನಂತಹ ಹೆಮ್ಮಾರಿ ರೋಗಗಳು ಹೆಚ್ಚಾಗಲು ಕಾರಣವಾಗಿದೆ. ದೇಶದ ಪ್ರಧಾನಮಂತ್ರಿಯವರ ಕರೆಯಂತೆ ರೈತರು ನೈಸರ್ಗಿಕ ಹಾಗೂ ಸಾವಯವ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳಲಿ ಎಂಬ ಆಶಯದಿಂದ ಈ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

– ಅನಂತಮೂರ್ತಿ ಹೆಗಡೆ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು

#ನೈಸರ್ಗಿಕಕೃಷಿ #ರೈತ #ಕೃಷಿಕಾರ್ಯಾಗಾರ #ವಿಶ್ವೇಶ್ವರಹೆಗಡೆಕಾಗೇರಿ #ಸಿದ್ದಾಪುರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಹ...
23/05/2026

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಹಾರ್ದಿಕ ಸ್ವಾಗತಗಳು.

ನಿಮ್ಮ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಇನ್ನಷ್ಟು ಬಲಿಷ್ಠವಾಗಿ ದೇಶಸೇವೆಯ ದಾರಿಯಲ್ಲಿ ಮುನ್ನಡೆಯಲಿ ಎಂಬ ಹಾರೈಕೆ.

ಶ್ರೀ ಅನಂತಮೂರ್ತಿ ಹೆಗಡೆ
ಅಧ್ಯಕ್ಷರು, ಜಿಲ್ಲಾ ರೈತ ಮೋರ್ಚಾ
ಬಿಜೆಪಿ ಉತ್ತರ ಕನ್ನಡ





ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮೊಟ್ಟಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ನಿತಿನ್‌ ನಬಿನ್‌ ಅವರಿಗೆ ಹೃತ್ಪೂರ್ವಕ ಸುಸ್ವಾಗತ💐ರಾಷ್...
23/05/2026

ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮೊಟ್ಟಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ನಿತಿನ್‌ ನಬಿನ್‌ ಅವರಿಗೆ ಹೃತ್ಪೂರ್ವಕ ಸುಸ್ವಾಗತ💐

ರಾಷ್ಟ್ರ ಹಾಗೂ ರಾಜ್ಯದಲ್ಲೂ ಯುವ ನಾಯಕತ್ವ
ಬಿಜೆಪಿ ಅಧಿಕಾರಕ್ಕೆ ತರುವುದೇ ಕಾರ್ಯಕರ್ತರ ಸಂಕಲ್ಪ

ಹೆಮ್ಮೆಯ ನಾಯಕರಾದ ಶ್ರೀ Vijayendra Yediyurappa   ರವರಿಗೆ ಹಾಗೂ ಶ್ರೀ BS Yediyurappa ನವರಿಗೆ ಉತ್ತರ ಕನ್ನಡ ಜಿಲ್ಲೆಯ ಸಾಂಬಾರ ಪದಾರ್ಥಗಳ...
10/05/2026

ಹೆಮ್ಮೆಯ ನಾಯಕರಾದ ಶ್ರೀ Vijayendra Yediyurappa ರವರಿಗೆ ಹಾಗೂ ಶ್ರೀ BS Yediyurappa ನವರಿಗೆ ಉತ್ತರ ಕನ್ನಡ ಜಿಲ್ಲೆಯ ಸಾಂಬಾರ ಪದಾರ್ಥಗಳನ್ನು ನೀಡಿ ಹಾಗೂ ಅಡಿಕೆ ಹಾರ ಹಾಕಿ ಚಿತ್ರದುರ್ಗದಲ್ಲಿ ಪುರ ಪ್ರವೇಶಕ್ಕೆ ಉತ್ತರ ಕನ್ನಡ ಜಿಲ್ಲೆಯ ರೈತರ ಪರವಾಗಿ ಸ್ವಾಗತಿಸಿದೆವು

ವಿಶ್ವಗುರು, ಕಾಯಕ ಯೋಗಿ, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು. #ಬಸವಜಯಂತಿ  #ಜಗಜ್ಯೋತಿಬಸವೇಶ್ವರ
19/04/2026

ವಿಶ್ವಗುರು, ಕಾಯಕ ಯೋಗಿ, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು.
#ಬಸವಜಯಂತಿ #ಜಗಜ್ಯೋತಿಬಸವೇಶ್ವರ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂ...
14/04/2026

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ.

ಸಮಾಜದ ಅಸಮಾನತೆಯ ಬೇರುಗಳನ್ನು ಕಿತ್ತೆಸೆದು, ಪ್ರೀತಿ ಮತ್ತು ಸಮಾನತೆಯ ಹೊಸ ಸಮಾಜದ ಕನಸು ಕಂಡ ಕೋಟ್ಯಂತರ ಜನರ ಆಶಾಕಿರಣ, ಭಾರತ ರತ್ನ, ಸಂವಿಧಾನ ಶ...
14/04/2026

ಸಮಾಜದ ಅಸಮಾನತೆಯ ಬೇರುಗಳನ್ನು ಕಿತ್ತೆಸೆದು, ಪ್ರೀತಿ ಮತ್ತು ಸಮಾನತೆಯ ಹೊಸ ಸಮಾಜದ ಕನಸು ಕಂಡ ಕೋಟ್ಯಂತರ ಜನರ ಆಶಾಕಿರಣ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವರ 135 ನೇ ಜಯಂತೋತ್ಸವದಂದು ಕೋಟಿ ಕೋಟಿ
ನಮನಗಳು.🙏🙏




BJP Karnataka

ರೈತ ಮೋರ್ಚಾ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ  ಹಾಗೂ ಕೇಂದ್ರ ಸರ್ಕಾರದ ರೈತಪರ ಯೋಜನೆಗಳನ್ನು ಮನೆಮ...
09/04/2026

ರೈತ ಮೋರ್ಚಾ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ರೈತಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಬುಧವಾರ ಕುಮಟಾ ತಾಲ್ಲೂಕಿನ ದಿವಗಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ,
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅಶೋಕ್, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಹೆಗಡೆ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಜಿಲ್ಲಾ ಮತ್ತು ಮಂಡಲ ಮಟ್ಟದ ರೈತ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. BJP Karnataka
BJP Raita Morcha Uttara Kannada

24/03/2026

ಬೆಳೆ ವಿಮೆಗೆ ಕಂಟಕವಾದ ರೋಗಿಷ್ಠ ಮಳೆಮಾಪಕಗಳು: ಕಂತು ಕಟ್ಟಿದರೂ ಪರಿಹಾರ ಸಿಗದೇ ರೈತರ ಗೋಳು!

ಅನ್ನದಾತನಿಗೆ 'ಡಿಜಿಟಲ್ ಶಾಪ': 1,530 ಮಳೆಮಾಪಕಗಳು ಸ್ತಬ್ಧ! | ಯಂತ್ರದ ಸುಳ್ಳಿಗೆ ಮಳ್ಳಾದ ರೈತರು! | ವಿಮೆ ಹೆಸರಲ್ಲಿ ರೈತರ ಬದುಕಿಗೆ ಕೊಳ್ಳಿ ಇಟ್ಟ ಸರ್ಕಾರದ 'ಟೆಂಡರ್' ದಂಧೆ.

ಹವಾಮಾನ ವೈಪರೀತ್ಯದ ಈ ಭೀಕರ ಕಾಲದಲ್ಲಿ ರೈತನಿಗೆ ಆಸರೆಯಾಗಬೇಕಿದ್ದ ತಂತ್ರಜ್ಞಾನವೇ ಇಂದು ಆತನ ಪಾಲಿಗೆ 'ಮೃತ್ಯುಪಾಶ'ವಾಗಿ ಪರಿಣಮಿಸಿದೆ. ಕರ್ನಾಟಕ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುವ 'ಟೆಲಿಮೆಟ್ರಿಕ್ ಮಳೆಮಾಪಕಗಳು' ಕೇವಲ ಪ್ರದರ್ಶನದ ವಸ್ತುಗಳಾಗಿ ಮಾರ್ಪಟ್ಟಿದ್ದು, ರಾಜ್ಯಾದ್ಯಂತ 1,530ಕ್ಕೂ ಹೆಚ್ಚು ಯಂತ್ರಗಳು ಸಂಪೂರ್ಣ ನಿಷ್ಕ್ರಿಯವಾಗಿವೆ. ಇದರ ನೇರ ಪರಿಣಾಮ ಬೆಳೆ ವಿಮೆ ಹಣದ ಮೇಲೆ ಬೀರುತ್ತಿದ್ದು, ಅರ್ಹ ರೈತರಿಗೆ ಸಿಗಬೇಕಾದ ಸಾವಿರಾರು ಕೋಟಿ ರೂಪಾಯಿ ವಿಮಾ ಕಂಪನಿಗಳ ಪಾಲಾಗುತ್ತಿದೆ. ಇದು ಕೇವಲ ತಾಂತ್ರಿಕ ವೈಫಲ್ಯವಲ್ಲ, ಬದಲಾಗಿ ಅನ್ನದಾತನಿಗೆ ವ್ಯವಸ್ಥಿತವಾಗಿ ಮಾಡುತ್ತಿರುವ ಅಕ್ಷಮ್ಯ ದ್ರೋಹ!

ರಾಜ್ಯದ ಹಲವೆಡೆ ಬೆಳೆ ವಿಮೆ ವಿತರಣೆ ಆರಂಭವಾಗಿದೆ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದರೆ ರೈತರು ಮಾತ್ರ ತನಗೆ ಬರಬೇಕಾದಷ್ಟು ಪರಿಹಾರ ಬಂದಿಲ್ಲ ಎಂದು ನೊವು ತೋಡಿಕೊಳ್ಳುತ್ತಿದ್ದಾರೆ. 3-5 ಲಕ್ಷ ರೂ ಪರಿಹಾರ ಬರಬೇಕಾದಲ್ಲಿ 50 ಸಾವಿರವನ್ನೂ ಕಾಣದ ಎಷ್ಟೋಜನ ರೈತರಿದ್ದಾರೆ. ಇದಕ್ಕೆಲ್ಲ ಕಾರಣ ಹುಡುಕುತ್ತ ಹೋದರೆ, ಮಳೆಮಾಪಕಗಳು ಕೆಟ್ಟಿರುವುದರಿಂದ ಲಕ್ಷಾಂತರ ರೈತರ ದತ್ತಾಂಶವೇ ದಾಖಲಾಗಿಲ್ಲ. ಮಳೆ ಬಿದ್ದಿದ್ದರೂ 'ಬಿದ್ದಿಲ್ಲ' ಎಂದು, ಅತಿವೃಷ್ಟಿಯಾಗಿದ್ದರೂ 'ಸಾಧಾರಣ' ಎಂದು ಈ ಯಂತ್ರಗಳು ಸುಳ್ಳು ಹೇಳುತ್ತಿವೆ. ಈ ಸುಳ್ಳು ಅಂಕಿ-ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ವಿಮಾ ಕಂಪನಿಗಳು ರೈತರ ಅರ್ಜಿಯನ್ನು ತಿರಸ್ಕರಿಸುತ್ತಿವೆ. ಕಷ್ಟಪಟ್ಟು ಪ್ರೀಮಿಯಂ ಕಟ್ಟಿದ ರೈತ ಇಂದು ಕೈಯಲ್ಲಿ ಮೊಬೈಲ್ ಹಿಡಿದು 'ಪರಿಹಾರ ಶೂನ್ಯ' ಎಂಬ ಸಂದೇಶ ನೋಡಿ ಕಣ್ಣೀರು ಹಾಕುತ್ತಿದ್ದಾನೆ. ಸರ್ಕಾರದ ಈ ಡಿಜಿಟಲ್ ಬೇಜವಾಬ್ದಾರಿತನ ರೈತರನ್ನು ಸಾಲದ ಸುಳಿಗೆ ತಳ್ಳುತ್ತಿದೆ.

ಸಹಕಾರಿ ಸಂಘಗಳ ಅಸಹಾಯಕತೆ ಮತ್ತು ವ್ಯವಸ್ಥೆಯ ಕಂದಕ: ಕೊಂಡಿಯಾಗಬೇಕಾದವರೇ ಇಂದು ಬಲಿಪಶು!

ಸಾಮಾನ್ಯವಾಗಿ ರೈತರು ಬೆಳೆವಿಮೆಯ ಕಂತನ್ನು ತಮಗೆ ಹತ್ತಿರವಿರುವ ಸ್ಥಳೀಯ ಸಹಕಾರಿ ಸಂಘಗಳ ಮೂಲಕ ತುಂಬುತ್ತಾರೆ. ಹೊಟ್ಟೆ ಬಟ್ಟೆ ಕಟ್ಟಿ ತಂದ ಹಣವನ್ನು ಅಲ್ಲಿ ಪಾವತಿಸಿದ ತಕ್ಷಣ ತಮ್ಮ ಜವಾಬ್ದಾರಿ ಮುಗಿಯಿತು ಎಂದು ರೈತರು ನಂಬುತ್ತಾರೆ. ಆದರೆ ಇಲ್ಲಿಂದ ಮುಂದೆ ಆ ಹಣ ಎಲ್ಲಿಗೆ ಹೋಗುತ್ತದೆ ಮತ್ತು ವಿಮೆ ಕ್ಲೇಮ್ ಮಾಡುವ ಪ್ರಕ್ರಿಯೆ ಎಲ್ಲಿದೆ ಎಂಬ ಮಾಹಿತಿಯೇ ಸ್ಥಳೀಯ ಸಹಕಾರಿ ಸಂಘಗಳಿಗೆ ಸಿಗುತ್ತಿಲ್ಲ. ವಿಮೆ ಹಣ ಬರದಿದ್ದಾಗ ರೈತರು ಸಹಜವಾಗಿಯೇ ತಾವು ಹಣ ಕಟ್ಟಿದ ಸಹಕಾರಿ ಸಂಘಗಳಿಗೆ ಎಡತಾಕುತ್ತಾರೆ. ಆದರೆ ಅಲ್ಲಿನ ಸಿಬ್ಬಂದಿಗೂ ಸರ್ಕಾರದ ಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯಿರುವುದಿಲ್ಲ. ರೈತರು ಮತ್ತು ಸರ್ಕಾರದ ನಡುವೆ ಸಿಲುಕಿರುವ ಈ ಸಂಘಗಳು ಇಂದು ಉತ್ತರ ನೀಡಲಾಗದೆ ಒದ್ದಾಡುತ್ತಿವೆ.

ಇತ್ತ ದತ್ತಾಂಶದ ಮೂಲ ಕೇಂದ್ರವಾದ KSNDMC (ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ) ಪರಿಸ್ಥಿತಿಯಂತೂ ಕೇಳುವುದೇ ಬೇಡ. ಅಲ್ಲಿನ ಕೆಲವು ಅಧಿಕಾರಿಗಳು ಸಾಮಾನ್ಯ ಜನರು ಬಿಡಿ, ಸ್ಥಳೀಯ ಸಹಕಾರಿ ಸಂಘದ ಪ್ರತಿನಿಧಿಗಳು ಅಥವಾ ಸಿಇಓಗಳು ಕರೆ ಮಾಡಿದರೂ ಸ್ವೀಕರಿಸುವ ಸೌಜನ್ಯ ತೋರುವುದಿಲ್ಲ. ದತ್ತಾಂಶದ ಗೊಂದಲಗಳ ಬಗ್ಗೆ ತಾಂತ್ರಿಕ ಮಾಹಿತಿ ಪಡೆಯಲು ಈ ಅಧಿಕಾರಿಗಳನ್ನು ಸಂಪರ್ಕಿಸುವುದು ದುಸ್ತರವಾಗಿದೆ. ಅನಿವಾರ್ಯವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ (PDO) ಕರೆ ಮಾಡಿಸಿದರೆ, ಕಳೆದ 2 ವರ್ಷಗಳಿಂದ "ಟೆಂಡರ್ ಕರೆದಿದ್ದೇವೆ, ಸರಿ ಮಾಡುತ್ತೇವೆ" ಎಂಬ ಸವಕಲು ಉತ್ತರ ಸಿಗುತ್ತಿದೆ. ಇದು ವ್ಯವಸ್ಥಿತವಾಗಿ ಮಾಹಿತಿಯನ್ನು ಮುಚ್ಚಿಡುವ ತಂತ್ರವೇ ಎಂಬ ಅನುಮಾನ ಮೂಡುತ್ತಿದೆ.

ಈ ಮಳೆಮಾಪನ ಕೇಂದ್ರಗಳ ನಿರ್ವಹಣೆಯನ್ನು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳೇ (VAO) ಮಾಡಬೇಕೆಂದು ಸ್ಪಷ್ಟ ಸರ್ಕಾರಿ ಆದೇಶವಿದೆ. ಆದರೆ ಗ್ರಾಮ ಆಡಳಿತಾಧಿಕಾರಿಗಳು ಈ ಜವಾಬ್ದಾರಿಯಿಂದ ಸಂಪೂರ್ಣವಾಗಿ ನುಣುಚಿಕೊಳ್ಳುತ್ತಿದ್ದಾರೆ. ಯಂತ್ರಗಳು ಧೂಳು ಹಿಡಿದು ಹಾಳಾಗುತ್ತಿದ್ದರೂ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಸರ್ಕಾರದ ಈ ಆದೇಶ ಕೇವಲ ಕಾಗದದ ಮೇಲೆ ಉಳಿದಿದ್ದು, ನೆಲದ ಮೇಲೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯವೇ ಇಂದು ವಿಮಾ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಡುತ್ತಿದೆ.

ಮಳೆ ಬಂದರೂ ದಾಖಲಾಗದ 'ಸತ್ಯ': ಟೆಂಡರ್ ಹೆಸರಲ್ಲಿ ಸಾಗುತ್ತಿದೆ ಕ್ರೂರ ಕಾಲಹರಣ!

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಡಿಯಲ್ಲಿ ಅಳವಡಿಸಲಾದ ಮಳೆಮಾಪಕಗಳ ಪೈಕಿ 1,500ಕ್ಕೂ ಹೆಚ್ಚು ಯಂತ್ರಗಳು ವರ್ಷಗಳಿಂದ ದುರಸ್ತಿಗೆ ಕಾಯುತ್ತಿವೆ. 2025ರ ಜುಲೈನಲ್ಲಿಯೇ ಈ ಕೆಟ್ಟ ಯಂತ್ರಗಳನ್ನು ಬದಲಿಸಲು ₹19.8 ಕೋಟಿ ಅನುಮೋದನೆ ನೀಡಲಾಗಿತ್ತು. ಆದರೆ, ಇಂದಿಗೂ ಆ ಪ್ರಕ್ರಿಯೆ ಟೆಂಡರ್ ಹಂತ ದಾಟಿಲ್ಲ ಎಂದರೆ ಏನರ್ಥ? ಮುಂಗಾರು ಮಳೆಯ ಆರಂಭಕ್ಕೂ ಮುನ್ನ ಸರಿಪಡಿಸಬೇಕಿದ್ದ ಯಂತ್ರಗಳು ಇಂದಿಗೂ ಹಾಗೆಯೇ ಇವೆ ಎಂದರೆ, ಸರ್ಕಾರದ ಆದ್ಯತೆ ರೈತರಲ್ಲ, ಬದಲಾಗಿ ಟೆಂಡರ್ ಕಮಿಷನ್ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ ಈ 'ಅಪವಿತ್ರ ಮೈತ್ರಿ'ಯಿಂದಾಗಿ ರೈತರು ಬೀದಿಗೆ ಬೀಳುವಂತಾಗಿದೆ.

ಈ ಮಳೆಮಾಪಕಗಳು ಪ್ರತಿ ಗ್ರಾಮ ಪಂಚಾಯತ್ ಮಟ್ಟದ ಹೈಪರ್-ಲೋಕಲ್ ದತ್ತಾಂಶ ಸಂಗ್ರಹಿಸಬೇಕಿತ್ತು. ಆದರೆ ತಾಂತ್ರಿಕ ತಜ್ಞರ ಪ್ರಕಾರ, ರಾಜ್ಯದ ಶೇ. 60 ರಷ್ಟು ಯಂತ್ರಗಳು ಸರಿಯಾದ ದತ್ತಾಂಶ ನೀಡುತ್ತಿಲ್ಲ. ಸೆನ್ಸರ್‌ಗಳ ಕಳ್ಳತನ, ಸರಿಯಾದ ನಿರ್ವಹಣೆಯ ಕೊರತೆ ಮತ್ತು ಬ್ಯಾಟರಿ ದೋಷಗಳಿಂದಾಗಿ ರೈತರಿಗೆ ನ್ಯಾಯ ಸಿಗುತ್ತಿಲ್ಲ. ಕೃಷಿ ಸಚಿವರೇ ಈ ಅಸಮಾನತೆಯನ್ನು ಒಪ್ಪಿಕೊಂಡಿದ್ದರೂ, ವಾಸ್ತವದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ರೈತ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ತಾಂತ್ರಿಕ ತಪ್ಪಲ್ಲ, ಇದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ ಮತ್ತು ವ್ಯವಸ್ಥಿತ ಭ್ರಷ್ಟಾಚಾರದ ಫಲ!

ಉತ್ತರ ಕನ್ನಡದ ಅಡಿಕೆ ಬೆಳೆಗಾರರಿಗೆ ಮರೀಚಿಕೆಯಾದ ವಿಮೆ: ಜಿಲ್ಲಾವಾರು ಅನ್ಯಾಯದ ಕಥೆ ಹೀಗಿದೆ!

ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರು ಇಂದು ತೀವ್ರ ಆತಂಕದಲ್ಲಿದ್ದಾರೆ. 'ಎಲೆ ಚುಕ್ಕಿ ರೋಗ' ಮತ್ತು ಇಳುವರಿ ಕುಂಠಿತದಿಂದ ತತ್ತರಿಸಿರುವ ಈ ಭಾಗದ ಕೃಷಿಕರಿಗೆ ಬೆಳೆ ವಿಮೆಯೇ ದೊಡ್ಡ ಭರವಸೆಯಾಗಿತ್ತು. ಕೇಂದ್ರ ಸರ್ಕಾರವು ವಿಮೆಯ ಎರಡನೇ ಕಂತಿನ ಹಣ ಬಿಡುಗಡೆ ಮಾಡಲು ಸಿದ್ಧವಿದ್ದರೂ, ರಾಜ್ಯದ ಮಳೆಮಾಪನ ವ್ಯವಸ್ಥೆಯ ಲೋಪದಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಜಿಲ್ಲೆಯಾದ್ಯಂತ ಸುಮಾರು 60 ಕೋಟಿ ರೂಪಾಯಿ ಹಂತ ಹಂತವಾಗಿ ಜಮೆಯಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ, ತಾಂತ್ರಿಕ ಕಾರಣಗಳಿಂದ ಅನೇಕ ಅರ್ಹ ಫಲಾನುಭವಿಗಳು ಪಟ್ಟಿಯಿಂದ ಹೊರಗುಳಿದಿದ್ದಾರೆ. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಇಡೀ ಮಲೆನಾಡು ಇಂದು ಇಂತಹದ್ದೇ ಸ್ಥಿತಿಯಲ್ಲಿದೆ.

ಕಲಬುರಗಿ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ರೈತರು ವರ್ಷಗಳಿಂದ ಮಳೆಮಾಪಕಗಳ ದುರಸ್ತಿಗೆ ಆಗ್ರಹಿಸುತ್ತಿದ್ದರೂ ಕೃಷಿ ಇಲಾಖೆ ಕುಂಭಕರ್ಣ ನಿದ್ದೆಯಲ್ಲಿದೆ. ಇಲ್ಲಿನ ರೈತರು ಪ್ರತಿ ವರ್ಷ ನೂರಾರು ಕೋಟಿ ವಿಮೆ ಹಣಕ್ಕೆ ಕಾಯುತ್ತಾರೆ. ಆದರೆ ಮಳೆಮಾಪಕಗಳು ಕೆಟ್ಟಿದ್ದರಿಂದ ಸರಿಯಾದ ಹಾನಿ ವರದಿ ಸಿದ್ಧವಾಗುತ್ತಿಲ್ಲ. ಬೆಳೆ ನಾಶವಾದ ತಕ್ಷಣ ಸ್ಥಳಕ್ಕೆ ಬಂದು ತಪಾಸಣೆ ಮಾಡಬೇಕಾದ ಅಧಿಕಾರಿಗಳು ತಿಂಗಳುಗಟ್ಟಲೆ ನಾಪತ್ತೆಯಾಗುತ್ತಾರೆ. ಅಧಿಕಾರಿಗಳು ಬರುವಷ್ಟರಲ್ಲಿ ಹೊಲದಲ್ಲಿ ಬೆಳೆಯೇ ಇರುವುದಿಲ್ಲ. ಇತ್ತ ಮಳೆಮಾಪಕದಲ್ಲೂ ಸರಿಯಾದ ಅಂಕಿ-ಅಂಶ ಇರುವುದಿಲ್ಲ. ಹೀಗಾದಾಗ ರೈತರಿಗೆ ಪರಿಹಾರ ಸಿಗುವುದಾದರೂ ಹೇಗೆ? ಇದು ನೇರವಾಗಿ ರೈತನ ಹೊಟ್ಟೆ ಮೇಲೆ ಹೊಡೆಯುವ ಕೆಲಸವಲ್ಲವೇ? ಎಂದು ರೈತರು ಆಕ್ರೋಷದಿಂದ ಪ್ರಶ್ನಿಸುತ್ತಿದ್ದಾರೆ.

ವಿಮಾ ಕಂಪನಿಗಳ ಲಾಭಕ್ಕೆ ರೈತರ ಬಲಿ: ವ್ಯವಸ್ಥಿತವಾಗಿ ನಡೆಯುತ್ತಿದೆಯೇ 'ದತ್ತಾಂಶದ ದಂಧೆ'?

ವಿಮಾ ಕಂಪನಿಗಳು ಲಾಭ ಮಾಡಿಕೊಳ್ಳಲು ಸರ್ಕಾರವೇ ದಾರಿ ಮಾಡಿಕೊಡುತ್ತಿದೆ ಎಂಬ ಸಂಶಯ ರೈತ ವಲಯದಲ್ಲಿ ಈಗ ಬಲವಾಗುತ್ತಿದೆ. ಒಂದು ವೇಳೆ ಮಳೆಮಾಪಕಗಳು ಸರಿಯಾಗಿ ಕೆಲಸ ಮಾಡಿದರೆ ರೈತರಿಗೆ ಸರಿಯಾದ ಪರಿಹಾರ ಸಿಗುತ್ತದೆ, ಇದರಿಂದ ವಿಮಾ ಕಂಪನಿಗಳಿಗೆ ನಷ್ಟವಾಗುತ್ತದೆ. ಹಾಗಾಗಿಯೇ ಈ ಯಂತ್ರಗಳನ್ನು ದುರಸ್ತಿ ಮಾಡದೆ ವಿಳಂಬ ಮಾಡಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಪ್ರೀಮಿಯಂ ಹೆಸರಲ್ಲಿ ರೈತರಿಂದ ಸಾವಿರಾರು ಕೋಟಿ ವಸೂಲಿ ಮಾಡುವ ಕಂಪನಿಗಳು, ತಾಂತ್ರಿಕ ನೆಪವೊಡ್ಡಿ ಪರಿಹಾರ ನಿರಾಕರಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ₹7,079 ಕೋಟಿ ಪರಿಹಾರ ವಿತರಿಸಿದ್ದರೂ, ಡೇಟಾ ತಪ್ಪಾಗಿದ್ದರಿಂದ ಸಾವಿರಾರು ಕೋಟಿ ರೂಪಾಯಿ ರೈತರಿಗೆ ತಲುಪದೆ ಕಂಪನಿಗಳ ಖಜಾನೆ ಸೇರಿದೆ.

ಕೊಡಗು, ಹಾಸನದ ಕಾಫಿ ಮತ್ತು ರಬ್ಬರ್ ಬೆಳೆಗಾರರನ್ನು PMFBY ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಮತ್ತೊಂದು ದೊಡ್ಡ ಮೋಸ. ಹವಾಮಾನ ಬದಲಾವಣೆಯಿಂದಾಗಿ ತೋಟಗಾರಿಕೆ ಬೆಳೆಗಳು ತೀವ್ರ ನಷ್ಟ ಅನುಭವಿಸುತ್ತಿವೆ. WINDS ಯೋಜನೆಯಡಿ ಪೂರ್ಣ ಕವರೇಜ್ ನೀಡುವುದಾಗಿ ಹೇಳಿದ ಸರ್ಕಾರ ಈಗ ಮೌನವಾಗಿದೆ. ಕೇವಲ ಬಜೆಟ್‌ನಲ್ಲಿ ಘೋಷಣೆಗಳನ್ನು ಮಾಡುವುದು ಮತ್ತು ವೇದಿಕೆಗಳ ಮೇಲೆ ಭಾಷಣ ಮಾಡುವುದರಿಂದ ರೈತರ ಹೊಟ್ಟೆ ತುಂಬುವುದಿಲ್ಲ. ನೆಲದ ಮೇಲೆ ಕೆಲಸ ಮಾಡದ ತಂತ್ರಜ್ಞಾನವಿದ್ದರೇನು, ಹೋದರೇನು? ಇದು ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿ.

CAG ಆಡಿಟ್‌ನಲ್ಲೂ ಬಯಲಾದ ಬಂಡವಾಳ: ನಿರ್ವಹಣೆ ಹೆಸರಲ್ಲಿ ಲೂಟಿಯಾಗುತ್ತಿದೆ ಕೋಟಿ ಕೋಟಿ!

ಕಳೆದ ವರ್ಷಗಳ CAG ವರದಿಯು ಮಳೆಮಾಪಕಗಳ ನಿರ್ವಹಣೆಯಲ್ಲಿನ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಯಲು ಮಾಡಿದೆ. ಸೆನ್ಸರ್‌ಗಳ ಕಳ್ಳತನ, ಬ್ಯಾಟರಿಗಳ ಬದಲಾವಣೆ ಮತ್ತು ನಿರ್ವಹಣಾ ವೆಚ್ಚದ ಹೆಸರಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಲೂಟಿಯಾಗುತ್ತಿದೆ. ಆದರೆ ವಾಸ್ತವದಲ್ಲಿ ಮಳೆಮಾಪಕಗಳು ಮಾತ್ರ ಕೆಟ್ಟೇ ಇವೆ. ಈ ಹಣ ಎಲ್ಲಿಗೆ ಹೋಯಿತು? ಯಾರ ಜೇಬು ತುಂಬಿತು? ಅನ್ನದಾತನ ಹೆಸರಲ್ಲಿ ನಡೆಯುತ್ತಿರುವ ಈ ದಂಧೆಗೆ ಕೊನೆ ಯಾವಾಗ? ರಾಜ್ಯದ 5,953 ಗ್ರಾಮ ಪಂಚಾಯತ್‌ಗಳಲ್ಲಿ ಪೂರ್ಣ ಕವರೇಜ್ ನೀಡಲು ವಿಫಲವಾಗಿರುವ ಸರ್ಕಾರ, ಕೇವಲ ಅಂಕಿ-ಅಂಶಗಳ ಆಟ ಆಡುತ್ತಿದೆ.

ಇನ್ನು ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಬಂದಾಗ ಈ ಮಳೆಮಾಪಕಗಳು ನೀರಿನಲ್ಲಿ ಮುಳುಗಿ ಹೋಗುತ್ತವೆ ಅಥವಾ ಕೆಲಸ ಮಾಡುವುದನ್ನೇ ನಿಲ್ಲಿಸುತ್ತವೆ. ನಂತರ ಡೇಟಾ ಸಿಗದೆ ರೈತರು ಪರಿಹಾರದಿಂದ ವಂಚಿತರಾಗುತ್ತಾರೆ. ಹವಾಮಾನ ಮುನ್ಸೂಚನೆ ನೀಡಲು ತಂದ WINDS ಯೋಜನೆ ಈಗ ಕೇವಲ ಕಾಗದದ ಮೇಲೆ ಉಳಿದಿದೆ. ಮಳೆಮಾಪಕಗಳ ದೋಷದಿಂದಾಗಿ ತಪ್ಪು ಸಂದೇಶಗಳನ್ನು ಕಳುಹಿಸಲಾಗುತ್ತಿದೆ, ಇದರಿಂದ ರೈತರು ತಪ್ಪು ಸಮಯದಲ್ಲಿ ಬಿತ್ತನೆ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಎನ್ನುವುದು ರೈತನಿಗೆ ದಾರಿದೀಪವಾಗುವ ಬದಲು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.

ಕೇಂದ್ರದ ಸೂಚನೆಗೂ ಬೆಲೆ ಇಲ್ಲವೇ? ರಾಜ್ಯ ಸರ್ಕಾರದ ಹಠಮಾರಿ ಧೋರಣೆಗೆ ಬೆಲೆ ತೆರುತ್ತಿರುವ ರೈತ!

ಲಭ್ಯವಿರುವ ಮಾಹಿತಿಯಂತೆ, ಕೇಂದ್ರ ಸರ್ಕಾರವು ರಾಜ್ಯದ ಮಳೆಮಾಪಕಗಳನ್ನು ಕೂಡಲೇ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡುವಂತೆ ಹಲವು ಬಾರಿ ಸ್ಪಷ್ಟ ನಿರ್ದೇಶನ ನೀಡಿದೆ. ಕೇಂದ್ರದಿಂದ ಹಣದ ಹರಿವು ಬಂದರೂ, ಸ್ಥಳೀಯ ಮಟ್ಟದಲ್ಲಿ ದತ್ತಾಂಶ ನಿರ್ವಹಣೆ ಮಾಡದ ರಾಜ್ಯ ಸರ್ಕಾರದ ಹಠಮಾರಿ ಸ್ವಭಾವ ರೈತರನ್ನು ಬಲಿಪಶು ಮಾಡುತ್ತಿದೆ. ರಾಜ್ಯದ ರೈತ ವಿರೋಧಿ ಧೋರಣೆಯಿಂದಾಗಿ ಕೇಂದ್ರದ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಕೇಂದ್ರ ಮತ್ತು ರಾಜ್ಯದ ನಡುವಿನ ಈ ರಾಜಕೀಯ ಕಿತ್ತಾಟದಲ್ಲಿ ಕೊನೆಯಲ್ಲಿ ಸಾಯುತ್ತಿರುವುದು ಮಾತ್ರ ಬಡ ರೈತ.

ಬೆಳೆ ಹಾನಿಯಾದ 72 ಗಂಟೆಯೊಳಗೆ ತಪಾಸಣೆ ನಡೆಯಬೇಕು ಎಂಬ ನಿಯಮವಿದ್ದರೂ, ಅಧಿಕಾರಿಗಳು ಬರುವುದು ಒಂದು ತಿಂಗಳ ನಂತರ! ಅಷ್ಟರಲ್ಲಿ ಹೊಲದಲ್ಲಿನ ಸಾಕ್ಷ್ಯಗಳೆಲ್ಲ ನಾಶವಾಗಿರುತ್ತವೆ. ಆಗ ಅಧಿಕಾರಿಗಳು "ದಾಖಲೆಗಳಿಲ್ಲ" ಎಂಬ ನೆಪವೊಡ್ಡಿ ಪರಿಹಾರ ನಿರಾಕರಿಸುತ್ತಾರೆ. ಮಳೆಮಾಪಕಗಳೇ ಕೆಟ್ಟಿರುವಾಗ ಅಧಿಕಾರಿಗಳೇ ದೇವರು ಎಂಬಂತಾಗಿದೆ. ಇದು ರೈತರ ಬದುಕಿನ ಜೊತೆ ಸರ್ಕಾರ ಆಡುತ್ತಿರುವ ಕ್ರೂರ ಚೆಲ್ಲಾಟವಲ್ಲದೆ ಮತ್ತೇನು? ಹವಾಮಾನದ ಈ ಅನಿಶ್ಚಿತತೆಯ ನಡುವೆ ಸರ್ಕಾರವೇ ರೈತರಿಗೆ ಶತ್ರುವಾಗಿ ಮಾರ್ಪಟ್ಟಿದೆ.

ಅನ್ನದಾತನ ಆಕ್ರೋಶಕ್ಕೆ ತತ್ತರಿಸಲಿದೆ ಸರ್ಕಾರ: ಈಗಲಾದರೂ ಎಚ್ಚೆತ್ತುಕೊಳ್ಳುವುದೇ ಆಡಳಿತ?

ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಟೆಂಡರ್ ಪ್ರಕ್ರಿಯೆಯನ್ನು ಬದಿಗಿಟ್ಟು, ಕೂಡಲೇ 1,530 ಮಳೆಮಾಪಕಗಳನ್ನು ಬದಲಿಸಬೇಕು. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ದತ್ತಾಂಶ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಬೆಳೆ ಹಾನಿಯಾದ ತಕ್ಷಣ ತಪಾಸಣೆ ನಡೆಸುವ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಬೇಕು. ಇಲ್ಲವಾದಲ್ಲಿ, ಹವಾಮಾನ ವೈಪರೀತ್ಯದ ನಡುವೆ ಸರ್ಕಾರವೇ ರೈತರನ್ನು ಆತ್ಮಹತ್ಯೆಯ ದಾರಿಗೆ ತಳ್ಳಿದಂತಾಗುತ್ತದೆ. ವಂಚಿತರಾದ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ವಿಮೆ ಹಣ ತಲುಪಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಇದು ಕೇವಲ ತಾಂತ್ರಿಕ ಸಮಸ್ಯೆಯಲ್ಲ, ರೈತರ ಬದುಕು-ಬಾಳಿನ ಪ್ರಶ್ನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅನ್ನದಾತನ ದನಿಯನ್ನು ಹತ್ತಿಕ್ಕುವ ಕೆಲಸ ನಿಲ್ಲಬೇಕು. ಮಳೆಮಾಪಕಗಳ ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಬೇಕು. ರೈತ ಸಂಘಟನೆಗಳು ಈ ಬಗ್ಗೆ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧವಾಗುತ್ತಿದ್ದು, ಸರ್ಕಾರ ತನ್ನ ಮೊಂಡುತನ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ! ಅನ್ನದಾತನ ಕಣ್ಣೀರು ಸರ್ಕಾರದ ಬುಡಕ್ಕೆ ಬರುವುದು ಖಚಿತ!

ನಾಲ್ಕು ಪರ್ಸೆಂಟ್ ಕಮಿಷನ್ ಪಡೆಯುವ ಕೆಡಿಸಿಸಿ ಬ್ಯಾಂಕಿನ ನಿರ್ಲಕ್ಷ್ಯ ಧೋರಣೆಯೂ ಒಂದು ಪ್ರತಿಯೊಂದು ಕೆಲಸವನ್ನು ಸಹಕಾರಿ ಸಂಘಗಳು ಮಾಡುತ್ತಿವೆ ಕಮಿಷನ್ ಮಾತ್ರ ಕೆಡಿಸಿಸಿ ಬ್ಯಾಂಕಿಗೆ. ಇನ್ನೊಂದು ವಿಚಾರ ಮಳೆ ಮಾಪನ ಒಂದೇ ಅಲ್ಲ ಹ್ಯುಮಿಡಿಟಿ ಮಾಪನ ಮುಂತಾದ ಮಾಪನಗಳು ಪಂಚಾಯತ್ ಮಟ್ಟದಲ್ಲಿ ಹೋಬಳಿ ಮಟ್ಟದಲ್ಲಿ ಇಲ್ಲ ಅವಮಾನ ಆಧಾರಿತ ಬೆಳೆವಿಮೆ ಮಳೆಗೆಒಂದೇ ಅಲ್ಲ ಹವಾಮಾನದಲ್ಲಿ ವೈಪರಿತಕ್ಕೂ ವಿಮೆ ಲಭ್ಯ ಈ ಯೋಜನೆ ಅತ್ಯುತ್ತಮ ಕೇಂದ್ರದ ಯೋಜನೆ ಇದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡದೇ ಇರುವುದು ರಾಜಕೀಯ ಅದಕ್ಕೆ ರೈತರು ಕೂಗುತ್ತಿಲ್ಲ ರೈತರ ಕೂಗು ಅದರಲ್ಲೂ ಉತ್ತರ ಕನ್ನಡ ರೈತರು ಬಂದಿದ್ದು ಸಾಕು ಇಷ್ಟಾರು ಬಂತು ಹೇಳುವ ಮನೋಭಾವದಿಂದ ಇದ್ದಾರೆ ಬಹುಶಃ ಹಿಂದಿನ ವರ್ಷ ಬೆಳೆವಿಮೆ ನನಗೆ ಬಂದ ಮಾಹಿತಿ ಪ್ರಕಾರ ಎರಡುಪಟ್ಟು ಬರಬೇಕಿತ್ತು ಬರಿ ಅರ್ಧ ಹಾಕಿ ಇನ್ಸೂರೆನ್ಸ್ ಕಂಪನಿ ಕೈ ತೊಳೆದುಕೊಂಡಿದೆ ಕೈ ಜೊತೆ ಸೇರಿ ಅಲ್ಲವೇ
........ ನಾಗರಾಜ್ ವೈದ್ಯ.
ಟೆಕ್ ವೈದ್ಯ

ಶಿರಸಿಯಲ್ಲಿ  ಜಿಲ್ಲಾ ಬಿಜೆಪಿ  ರೈತ ಮೋರ್ಚಾದಿಂದ ನಡೆದ ಸುದ್ದಿಗೋಷ್ಠಿಯ ಮಾಧ್ಯಮ ವರದಿಗಳು.      Bjp Uttarakannada Bjp YuvaMorcha Kumta...
24/03/2026

ಶಿರಸಿಯಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ನಡೆದ ಸುದ್ದಿಗೋಷ್ಠಿಯ ಮಾಧ್ಯಮ ವರದಿಗಳು.

Bjp Uttarakannada Bjp YuvaMorcha Kumta BJP Karnataka

Address

D Corporates #29, Uttara Kannada
Sirsi
581401

Website

Alerts

Be the first to know and let us send you an email when BJP Raita Morcha Uttara Kannada posts news and promotions. Your email address will not be used for any other purpose, and you can unsubscribe at any time.

Shortcuts

Share