BJP Sringeri Constituency

BJP Sringeri Constituency BJP Sringeri Official

04/09/2026

ಪಾದಯಾತ್ರೆಯಲ್ಲಿ Punyapal J

04/09/2026

ಶಾಸಕರೇ, ನಿಮಗೆ ಮಾನವೀಯತೆಯೇ ಇಲ್ಲವಾ?

ಕೊಪ್ಪ ತಾಲೂಕು ಮರಿತೊಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊದಲಮನೆಯ ಗ್ರಾಮಸ್ಥರ ಪರಿಸ್ಥಿತಿ ಒಮ್ಮೆ ನೋಡಿ. ವಿದ್ಯಾರ್ಥಿಗಳು ಪ್ರತಿದಿನ ಅನುಭವಿಸುತ್ತಿರುವ ತೊಂದರೆಯನ್ನೂ ನೋಡಿ.

ಈ ಕೆಸರು ತುಂಬಿದ ರಸ್ತೆಯಲ್ಲೇ ಪ್ರತಿದಿನ ಓಡಾಡಬೇಕಾದ ಪರಿಸ್ಥಿತಿ ಇದೆ. ಯಾರಿಗಾದರೂ ತುರ್ತು ಪರಿಸ್ಥಿತಿ ಎದುರಾದರೆ, ವಾಹನಗಳು ಬರಲು ಕೂಡ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಎಷ್ಟು ಬಾರಿ ಗಮನಕ್ಕೆ ತಂದರು ಏನು ಪ್ರಯೋಜನವಾಗಿಲ್ಲ, ಚುನಾವಣೆ ಸಂದರ್ಭದಲ್ಲಿ 6 ತಿಂಗಳ ಒಳಗೆ ರಸ್ತೆ ನಿರ್ಮಾಣ ಎಂಬ ಸುಳ್ಳು ಭರವಸೆ.

ಜನರ ಮತದಿಂದ ದೊರೆತ ಅಧಿಕಾರ ಜನರ ಸೇವೆಗಾಗಿ ಹೊರತು ಅವರು ಬಿಡ್ಲಿಲ್ಲ, ಇವರು ಬಿಡ್ಲಿಲ್ಲ ಎಂದು ನೆಪ ಹೇಳುವುದನ್ನು ಇನ್ನಾದರೂ ನಿಲ್ಲಿಸಿ.

ಸ್ವಲ್ಪ ಮಾನವೀಯತೆಯಿಂದ ಯೋಚಿಸಿ, ಜನರಿಗೆ ಬೇಕಾದ ಮೂಲಭೂತ ರಸ್ತೆ ಸೌಲಭ್ಯ ಕಲ್ಪಿಸಲು ಕೆಲಸ ಮಾಡಿ.

04/09/2026

ರಾಜ್ಯಾಧ್ಯಕ್ಷರಾದ Vijayendra Yediyurappa ಅವರ ನೇತೃತ್ವದಲ್ಲಿ ನಡೆಯುತ್ತಿರುವ 'ಬಳ್ಳಾರಿ ಚಲೋ' ಪಾದಯಾತ್ರೆ ಬಗ್ಗೆ..

03/09/2026

10-03-2014ರಂದು ಕೇಂದ್ರ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ESZ ಅಧಿಸೂಚನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿ, ಸಹಿ ಹಾಕಿದ್ದ ದಾಖಲೆಗಳನ್ನು ಡಿ.ಎನ್. ಜೀವರಾಜ್ ಅವರು ದಶಕದ ಹಿಂದೆಯೇ ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದರು.

ಹೀಗಿರುವಾಗ, ಈಗ ಅದನ್ನ ಬಿಜೆಪಿಗೆ ತಲೆಗೆ ಕಟ್ಟುವ ವ್ಯರ್ಥ ಪ್ರಯತ್ನ ಬೇಡ.....

03/09/2026

ನರೇಂದ್ರ ಮೋದಿ ಸರ್ಕಾರ ನಿರ್ಮಾಣ ಮಾಡಿದ ದೇಶದ ಮೊದಲ ನಗರ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ

ದೆಹಲಿ–ಗುರುಗ್ರಾಮ್ 29.1 ಕಿ.ಮೀ ದ್ವಾರಕಾ ಎಕ್ಸ್‌ಪ್ರೆಸ್‌ವೇ

ಶಂಕುಸ್ಥಾಪನೆ: 8 ಮಾರ್ಚ್ 2019
ಉದ್ಘಾಟನೆ: 11 ಮಾರ್ಚ್ 2024

03/09/2026

ಆಹಾರ ಸಚಿವರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಸಾವಿರಾರು ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ BPL ಕಾರ್ಡ್ ನಿಯಮಗಳನ್ನು ಸಡಿಲಿಸಿ ಕಾರ್ಡ್‌ಗಳನ್ನು ಒದಗಿಸಿಕೊಟ್ಟಿದ್ದ ಜೀವರಾಜ್ ಅವರು, ಇದೀಗ ಕಾಂಗ್ರೆಸ್ ಆಡಳಿತದಲ್ಲಿ ಏಕಾಏಕಿ ಹಲವರ BPL ಕಾರ್ಡ್‌ಗಳನ್ನು ರದ್ದುಪಡಿಸಿರುವ ವಿಚಾರವಾಗಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೆ, ಜಿಲ್ಲಾ ಪಂಚಾಯತ್ ರಸ್ತೆಯನ್ನು ಬಂದ್ ಮಾಡಿ ರೈತರಿಗೆ ತೊಂದರೆ ನೀಡುತ್ತಿರುವ ವಿಚಾರದಲ್ಲಿಯೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಜನರಿಗೆ ಸಮಸ್ಯೆ ಎದುರಾದಾಗ ಅವರ ಪರವಾಗಿ ನಿಂತು ಪ್ರಶ್ನಿಸುವ ಜೀವರಾಜ್ ಅವರು ಒಂದೆಡೆ…

ಎಷ್ಟೇ ಸಮಸ್ಯೆ ಬಂದರು ಸುಮ್ಮನಿರುವ ನಮ್ಮ ಕ್ಷೇತ್ರದ ಶಾಸಕರು ಮತ್ತೊಂದು ಕಡೆ...

03/09/2026

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ
ಮಾಜಿ ಸಚಿವರಾದ ಡಿ.ಎನ್. ಜೀವರಾಜ್ ಅವರು ಶಾಸಕರಾಗಿದ್ದಾಗಲೂ, ಮಾಜಿ ಶಾಸಕರಾದ ನಂತರವೂ ನಿರಂತರವಾಗಿ ಹೋರಾಟ ಮಾಡಿದ್ದಾರೆ,

1) ಜುಲೈ 2012 — ವಿಶ್ವ ಪಾರಂಪರಿಕ ತಾಣಕ್ಕೆ ವಿರೋಧ

ಸಚಿವರಾಗಿದ್ದ ಡಿ.ಎನ್. ಜೀವರಾಜ್ ಅವರು ಪಶ್ಚಿಮ ಘಟ್ಟವನ್ನು World Heritage Site ಪಟ್ಟಿಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನರ ಹಿತಾಸಕ್ತಿ ಹಾಗೂ ಅಭಿವೃದ್ಧಿಗೆ ತೊಂದರೆಯಾಗಬಹುದು ಎಂಬ ನಿಲುವು ಹೊಂದಿದ್ದರು.

2) 2017 — ವಿಧಾನಸಭೆಯಲ್ಲಿ ಕಸ್ತೂರಿ ರಂಗನ್ ವಿಚಾರ

ಶಾಸಕರಾಗಿದ್ದ ಅವಧಿಯಲ್ಲಿ ಕಸ್ತೂರಿ ರಂಗನ್ ವರದಿ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ಸುಮಾರು 17 ನಿಮಿಷಗಳ ಕಾಲ ಈ ವಿಚಾರದ ಬಗ್ಗೆ ಮಾತನಾಡಿದ್ದರು.

3) 20 ನವೆಂಬರ್ 2018 — ಹೋರಾಟ

ಶಾಸಕರಾಗಿದ್ದ ಅವಧಿ ಮುಗಿದ ನಂತರವೂ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಹೋರಾಟ ಮುಂದುವರಿಸಿ, 20 ನವೆಂಬರ್ 2018ರಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

4) 31 ಡಿಸೆಂಬರ್ 2020 — NGT ಅಧಿಸೂಚನೆ ವಿರುದ್ಧ ಹೋರಾಟ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ವ್ಯಾಪ್ತಿಯಲ್ಲಿ ಬಂದಿದ್ದ ಪಶ್ಚಿಮ ಘಟ್ಟ/ESA ಸಂಬಂಧಿತ ಅಂತಿಮ ಅಧಿಸೂಚನೆ ವಿಚಾರದಲ್ಲಿ ಅದರ ವಿರುದ್ಧ ಹೋರಾಟ ನಡೆಸಿದರು.

5) 2020 — ಕರ್ನಾಟಕ ಬೆಳೆಗಾರರ ಪರ ಹೋರಾಟ

ಕರ್ನಾಟಕ ಬೆಳೆಗಾರ ಒಕ್ಕೂಟದ ಹೋರಾಟದಲ್ಲಿಯೂ ಭಾಗವಹಿಸಿ, ಮಲೆನಾಡು ಹಾಗೂ ಬೆಳೆಗಾರರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿದರು.

6) ಜುಲೈ 2022 — ಕೇಂದ್ರ ಸರ್ಕಾರದ ಮುಂದೆ ಮನವಿ

ಪಶ್ಚಿಮ ಘಟ್ಟದ ESA ಅಧಿಸೂಚನೆ ವಿಚಾರದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಿಯೋಗದೊಂದಿಗೆ ದೆಹಲಿಗೆ ತೆರಳಿ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಧಿಸೂಚನೆಯಿಂದ ಮಲೆನಾಡಿನ ಜನರು ಹಾಗೂ ಬೆಳೆಗಾರರಿಗೆ ಆಗಬಹುದಾದ ತೊಂದರೆಗಳನ್ನು ವಿವರಿಸಿ, ಅದನ್ನು ಕೈಬಿಡುವಂತೆ ಮನವಿ ಮಾಡಿದರು.

ಹೀಗಾಗಿ ಕಸ್ತೂರಿ ರಂಗನ್ ವಿಚಾರದಲ್ಲಿ ಹೋರಾಟ ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಾವಿರಾರು ಭಕ್ತರು ಪ್ರತಿದಿನ ಓಡಾಡುವ ಪ್ರಮುಖ ರಸ್ತೆಯ ದುರಸ್ತಿಯನ್ನು ಕ್ಷೇತ್ರದ ಜನರೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ...
03/09/2026

ಸಾವಿರಾರು ಭಕ್ತರು ಪ್ರತಿದಿನ ಓಡಾಡುವ ಪ್ರಮುಖ ರಸ್ತೆಯ ದುರಸ್ತಿಯನ್ನು ಕ್ಷೇತ್ರದ ಜನರೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಾದರೆ ಶಾಸಕರ ಜವಾಬ್ದಾರಿ ಏನು?

ರಸ್ತೆ ದುರಸ್ತಿಗೆ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆ?
ಜನರ ತೆರಿಗೆ ಹಣ ಬಳಕೆಯಾಗುತ್ತಿರುವುದು ಎಲ್ಲಿ?

Address

Narasimharajpura
Sringeri
577134

Website

Alerts

Be the first to know and let us send you an email when BJP Sringeri Constituency posts news and promotions. Your email address will not be used for any other purpose, and you can unsubscribe at any time.

Shortcuts

Share