20/07/2026
12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:18.07.2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಮುಂದಾಳತ್ವದಲ್ಲಿ “ಆರೋಗ್ಯ ತಪಾಸಣಾ ಶಿಬಿರ” ವನ್ನು Shridevi Institute of Medical Sciences and Research Hospital ತುಮಕೂರು ಮತ್ತು ನಮ್ಮ ಆದ್ಯತೆ ಟ್ರಸ್ಟ್ ಬೆಂಗಳೂರು ರವರ ಸಹಯೋಗದಲ್ಲಿ ಅಧಿಕಾರಿ/ಸಿಬ್ಬಂದಿಗಳಿಗೆ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜಿನಿಕರಿಗೂ ಆಯೋಜಿಸಲಾಯಿತು, ಮುಖ್ಯ ಅತಿಥಿಗಳು ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್, ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ, ಅತಿಥಿಗಳು ಡಾ. ನದಿಮುಲ್ ಹೊಡಾ, (OMFS), Professor & HOD Dept of Oral Oncology, Kidwai Memorial Institute of Oncology, ಬೆಂಗಳೂರು, ಶ್ರೀ ಹೊನ್ನಪ್ಪ, ಹಿರಿಯ ವಕೀಲರು, ಉಚ್ಚ ನ್ಯಾಯಾಲಯ, ಬೆಂಗಳೂರು, ಶ್ರೀ ನಾರಾಯಣಸ್ವಾಮಿ ಕೆ.ಎನ್, ACP(Ŗ), ಡಾ. ಪೂಜಾ ಸಿ, BAMS, MD ಮನೋರೋಗ ತಜ್ಞರು, ಶ್ರೀಮತಿ ಜಾನ್ವಿ ಹೇಮಂತ್, MD, ನಮ್ಮ ಆಧ್ಯತೆ ಟ್ರಸ್ಟ್ ಹಾಗೂ ಶ್ರೀ ರಘುನಂದನ ಎಸ್, ಪರಿಸರ ತಜ್ಞರು ಉಪಸ್ಥಿತರಿದ್ದರು.