ಜ್ಞಾನ ಸಿಂಧೂ ಸ್ವಾಮಿ Gnana Sindhu Swamy

  • Home
  • India
  • Tumkur
  • ಜ್ಞಾನ ಸಿಂಧೂ ಸ್ವಾಮಿ Gnana Sindhu Swamy

ಜ್ಞಾನ ಸಿಂಧೂ ಸ್ವಾಮಿ Gnana Sindhu Swamy Believe In yourself You can Change this World

My You Tube channel:

https://youtube.com/?si=K7mJIRm7RLG878ii

🌎 ಯುವ ಜನರ ಜೊತೆ ಸಂವಾದ – El Niño ಮತ್ತು ನೀರಿನ ಬಿಕ್ಕಟ್ಟು: ನಮ್ಮ ಭವಿಷ್ಯ ಎಲ್ಲಿದೆ?ಹವಾಮಾನ ಬದಲಾವಣೆ, El Niño, ನೀರಿನ ಲಭ್ಯತೆ ಮತ್ತು ಭವ...
26/08/2026

🌎 ಯುವ ಜನರ ಜೊತೆ ಸಂವಾದ – El Niño ಮತ್ತು ನೀರಿನ ಬಿಕ್ಕಟ್ಟು: ನಮ್ಮ ಭವಿಷ್ಯ ಎಲ್ಲಿದೆ?

ಹವಾಮಾನ ಬದಲಾವಣೆ, El Niño, ನೀರಿನ ಲಭ್ಯತೆ ಮತ್ತು ಭವಿಷ್ಯದ ನೀರಿನ ಬಿಕ್ಕಟ್ಟಿನ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಸಂತೋಷವಾಗುತ್ತಿದೆ. 🌱💧

ಈ ಮಹತ್ವದ ವಿಷಯದ ಕುರಿತು ನಾನು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದೇನೆ.

🎙️ ಸಂಪನ್ಮೂಲ ವ್ಯಕ್ತಿ: ಜ್ಞಾನಸಿಂಧು ಸ್ವಾಮಿ
📅 ದಿನಾಂಕ: 31.08.2026
⏰ ಸಮಯ: ಮಧ್ಯಾಹ್ನ 2:00 ಗಂಟೆಗೆ
📍 ಸ್ಥಳ: ತುಮಕೂರು

☀️ El Niño ನಮ್ಮ ಹವಾಮಾನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
🌧️ ಮುಂಗಾರು ಮಳೆಯ ಮೇಲೆ ಇದರ ಪ್ರಭಾವವೇನು?
💧 ನೀರಿನ ಬಿಕ್ಕಟ್ಟನ್ನು ಹೇಗೆ ಎದುರಿಸಬಹುದು?
🌱 ನಮ್ಮ ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವೇನು?

ಈ ಎಲ್ಲಾ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ, ಸಂವಾದ ಮತ್ತು ಅರಿವು ಮೂಡಿಸುವ ಪ್ರಯತ್ನ ನಡೆಯಲಿದೆ.

ಬನ್ನಿ... El Niño, ಹವಾಮಾನ ಬದಲಾವಣೆ, ನೀರಿನ ಬಿಕ್ಕಟ್ಟು ಮತ್ತು ನಮ್ಮ ಭವಿಷ್ಯದ ಕುರಿತು ಚರ್ಚಿಸೋಣ.

💚 ನೀರನ್ನು ಉಳಿಸೋಣ — ಭವಿಷ್ಯವನ್ನು ಉಳಿಸೋಣ!

16/08/2026

ಗ್ರಾಮ ಗಳ ಉಧ್ದಾರ ಮಾಡಿ‌ ಅಂದ್ರೆ ಗ್ರಾಮ ಲೂಟಿ ಹೊಡೆಯುವ ಈ ಪಿಡಿಓ ಗಳಿಗೆ ಎಷ್ಟು ಸಂಬಳ ಕೊಟ್ಟರೆ ಈ‌ ಭ್ರಷ್ಟಚಾರ ನಿಲ್ಲಬಹದು ??

ದೊಡ್ಡಗುಬ್ಬಿ ಗ್ರಾಮ ಪಂಚಾಯತಿ ಪಿ ಡಿ ಓ‌ ಭ್ರಷ್ಟ ರೋಹಿತ್‌ ರವರ ಸಾಹಸ ಕಥೆ

ನಿಮ್ಮ ಊರಿನ ಪಿ‌ಡಿ‌ಓ‌ ಕಥೆ ಏನು ??


ಜ್ಞಾನ ಸಿಂಧೂ ಸ್ವಾಮಿ Gnana Sindhu Swamy
Gnana Sindhu Swamy




15/08/2026

🇮🇳 🇮🇳
ಎಲ್ಲರಿಗೂ 80 ನೇ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು!
ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುತ್ತಾ,
ಏಕತೆ, ಸಮಾನತೆ ಮತ್ತು ಪ್ರಗತಿಯ ಭಾರತವನ್ನು ಕಟ್ಟೋಣ.
ಜೈ ಹಿಂದ್! ಜೈ ಕರ್ನಾಟಕ !!!

🇮🇳 “ಸ್ವಾತಂತ್ರ್ಯವೆಂದರೆ ಕೇವಲ ಬಂಧನಗಳಿಂದ ಮುಕ್ತಿ ಅಲ್ಲ; ನಮ್ಮ ದೇಶದ ಭವಿಷ್ಯವನ್ನು ಉತ್ತಮಗೊಳಿಸುವ ಜವಾಬ್ದಾರಿಯೂ ಹೌದು.” 🇮🇳ಎಲ್ಲರಿಗೂ 80ನೇ ...
15/08/2026

🇮🇳 “ಸ್ವಾತಂತ್ರ್ಯವೆಂದರೆ ಕೇವಲ ಬಂಧನಗಳಿಂದ ಮುಕ್ತಿ ಅಲ್ಲ; ನಮ್ಮ ದೇಶದ ಭವಿಷ್ಯವನ್ನು ಉತ್ತಮಗೊಳಿಸುವ ಜವಾಬ್ದಾರಿಯೂ ಹೌದು.” 🇮🇳
ಎಲ್ಲರಿಗೂ 80ನೇ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು!
ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುತ್ತಾ,
ಏಕತೆ, ಸಮಾನತೆ ಮತ್ತು ಪ್ರಗತಿಯ ಭಾರತವನ್ನು ಕಟ್ಟೋಣ.
ಜೈ ಹಿಂದ್! ಜೈ ಕರ್ನಾಟಕ

07/08/2026

42 ಕ್ರಿಮಿನಲ್ ಕೇಸ್!!! KGF ನ ಅಧೀರಾ !!
ನೋಡಿ ಇವರೇ ನಮ್ಮ ಮಂತ್ರಿ !!!
89 ಕೋಟಿ ವಾಲ್ಮೀಕಿ ಹಗರಣ !!! ರಾಜ್ಯ ಬಿಟ್ಟು ಹೋಗಲು ಕೂಡ ಹೈಕೋರ್ಟ್ ತಡೆ !!!






Gnana Sindhu Swamy
ಜ್ಞಾನ ಸಿಂಧೂ ಸ್ವಾಮಿ Gnana Sindhu Swamy


ನಮಸ್ಕಾರ ರೈತ ಮಿತ್ರರೇ, 🌾ನಿಮ್ಮ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬೇಕೆ?ನಿಮ್ಮ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಬೆಳೆ ಹ...
22/07/2026

ನಮಸ್ಕಾರ ರೈತ ಮಿತ್ರರೇ, 🌾
ನಿಮ್ಮ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬೇಕೆ?
ನಿಮ್ಮ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಬೆಳೆ ಹಾನಿ, ನೀರಿನ ಸಮಸ್ಯೆ ಅಥವಾ ಮೇವು ಕೊರತೆ ಇದ್ದರೆ, ನಿಮ್ಮ ತಾಲ್ಲೂಕಿನ ಹೆಸರನ್ನು ಕಾಮೆಂಟ್ ಮಾಡಿ.
ನಿಮ್ಮ ಅಭಿಪ್ರಾಯವನ್ನು ತಿಳಿಸಿ ಮತ್ತು ಈ ಮಾಹಿತಿಯನ್ನು ಇತರ ರೈತ ಮಿತ್ರರಿಗೂ ತಲುಪುವಂತೆ ಹಂಚಿಕೊಳ್ಳಿ.

21/07/2026

ನಮ್ಮ ದೇಶದ ಶಿಕ್ಷಣ ಮಂತ್ರಿ ಧರ್ಮೇಂದ್ರ ‌ಪ್ರಧಾನ್ ಏಕೆ ಏನ್ನು ರಾಜಿನಾಮೆ ಕೊಟ್ಟಿಲ್ಲ !??
ಅವರಿಗೆ ನಾಚಿಕೆ ಇಲ್ವಾ ? ಈ ಒಕ್ಕೂಟ ‌ವ್ಯವಸ್ಥೆಯ ಸರ್ಕಾರಕ್ಕೆ ಮಾನ‌ ಅಪಮಾನ ಏನಾದರೂ ಇದೆಯೇ !??

ಕಾಮೆಂಟ್ ‌ಮಾಡಿ !!
ಪ್ರತಿಯೊಬ್ಬರು ಶೇರ್ ಮಾಡಿ


Gnana Sindhu Swamy
ಜ್ಞಾನ ಸಿಂಧೂ ಸ್ವಾಮಿ Gnana Sindhu Swamy



19/07/2026

ಆಗಿನ ಬ್ರಿಟಿಷ್ ಸರ್ಕಾರಕ್ಕೆ ಇದ್ದ ಅಲ್ಪ ಸ್ವಲ್ಪ ನಾಚಿಕೆಯೂ ಕೂಡ ಇಂದಿನ ನಮ್ಮದೇ ಸರ್ಕಾರಗಳಿಗೆ ಇಲ್ಲವೇ ??

ಉಪವಾಸ ಸತ್ಯಾಗ್ರಹ , ಪ್ರತಿಭಟನೆಗಳಿಗೆ ಅಂಜುತ್ತಿಲ್ಲದ ಈ‌ ಸರ್ಕಾರಗಳಿಗೆ ನೀವು ಮತ್ತು ನಾವು ಹೇಗೆ ಪಾಠ ಕಲಿಸಬಹುದು ಕಾಮೆಂಟ್ ಮಾಡಿ .

Gnana Sindhu Swamy
ಜ್ಞಾನ ಸಿಂಧೂ ಸ್ವಾಮಿ Gnana Sindhu Swamy






ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್ಸರ್ಕಾರದ ವಿರುದ್ಧ  ಜ್ಞಾನ ಸಿಂಧುಸ್ವಾಮಿ ಆಕ್ರೋಶತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚ...
19/07/2026

ಅನ್ಯಾಯ ಪ್ರಶ್ನಿಸಿದ್ದಕ್ಕೆ ರೌಡಿಶೀಟ್ ಓಪನ್
ಸರ್ಕಾರದ ವಿರುದ್ಧ ಜ್ಞಾನ ಸಿಂಧುಸ್ವಾಮಿ ಆಕ್ರೋಶ

ತುಮಕೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರ ವಿರುದ್ಧ ವಿವಿಧ ಸಂದರ್ಭಗಳಲ್ಲಿ 6 ಪ್ರಕರಣಗಳನ್ನು ದಾಖಲಿಸಿ, ಇದೀಗ ರೌಡಿಶೀಟ್ ತೆರೆಯಲಾಗಿದೆ. ಇದು ಜನರ ಧ್ವನಿಯನ್ನು ಕುಗ್ಗಿಸುವ ಪ್ರಯತ್ನವಾಗಿದ್ದು, ನ್ಯಾಯದ ಪರವಾಗಿ ಕಾರ್ಯನಿರ್ವಹಿಸಬೇಕಾದ ಆಡಳಿತ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಜಿಲ್ಲೆಯಲ್ಲಿ ಎಲ್ಲಿ ಭ್ರಷ್ಟಾಚಾರ, ಅನ್ಯಾಯ ಅಥವಾ ಸಾರ್ವಜನಿಕ ಸಮಸ್ಯೆಗಳು ಎದುರಾದರೂ ಅಲ್ಲಿಗೆ ತೆರಳಿ ಜನರ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ. ಅಧಿಕಾರಿಗಳು ಎಸಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದ್ದೇ ಅವರ ತಪ್ಪೇ? ಕೇವಲ ಪ್ರಶ್ನಿಸಿದ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಿ, ನಂತರ ಅದನ್ನೇ ಆಧಾರವನ್ನಾಗಿ ಮಾಡಿಕೊಂಡು ರೌಡಿಶೀಟ್ ತೆರೆಯುವುದು ನ್ಯಾಯಸಮ್ಮತ ಕ್ರಮವಲ್ಲ ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪದೇಪದೇ ಪ್ರಶ್ನೆಗಳು ಉದ್ಭವಿಸಿದ್ದರೂ, ಅವುಗಳನ್ನು ಸರಿಪಡಿಸುವ ಬದಲು ಪ್ರಶ್ನಿಸುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸೇಡಿನ ರಾಜಕಾರಣ ನಡೆಸುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಇದು ಅಧಿಕಾರ ದುರುಪಯೋಗದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಜ್ಞಾನ ಸಿಂಧುಸ್ವಾಮಿ ಆರೋಪಿಸಿದ್ದಾರೆ.
ಅಧಿಕಾರಿಗಳು ತಪ್ಪು ಮಾಡಿದಾಗ ಅವರನ್ನು ಪ್ರಶ್ನಿಸಬಾರದೇ? ಪ್ರಶ್ನಿಸುವುದನ್ನೇ ಅಪರಾಧವೆಂದು ಪರಿಗಣಿಸಿದರೆ ಜನರಿಗೆ ನ್ಯಾಯ ಹೇಗೆ ದೊರೆಯುತ್ತದೆ? ಇಂತಹ ಕ್ರಮಗಳಿಂದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಬಹುದು ಎಂದು ಸರ್ಕಾರ, ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತ ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ. ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ರೌಡಿತನವಾಗಿದ್ದರೆ, ರಾಜ್ಯದ ಸಾವಿರಾರು ಕೆಆರ್‌ಎಸ್ ಕಾರ್ಯಕರ್ತರು ಅಂತಹ ಹೋರಾಟಕ್ಕೆ ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಎಂ ವಿರುದ್ಧ ಯಾವಾಗ ರೌಡಿಶೀಟ್ ತೆರೆಯಲಾಗುತ್ತದೆ?
2023ರ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ 19 ಕ್ರಿಮಿನಲ್ ಪ್ರಕರಣಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ 13 ಪ್ರಕರಣಗಳು ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರ ವಿರುದ್ಧ 42 ಪ್ರಕರಣಗಳು ದಾಖಲಾಗಿವೆ. ಆದರೆ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರ ವಿರುದ್ಧ ಕೇವಲ 6 ಪ್ರಕರಣಗಳಿರುವುದನ್ನು ಆಧಾರವನ್ನಾಗಿ ಮಾಡಿಕೊಂಡು ರೌಡಿಶೀಟ್ ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಆರು ಪ್ರಕರಣಗಳು ಕೊಲೆ, ದರೋಡೆ ಅಥವಾ ಸಮಾಜದಲ್ಲಿ ಭಯ ಹುಟ್ಟಿಸುವ ರೀತಿಯ ಅಪರಾಧಗಳಿಗೆ ಸಂಬಂಧಪಟ್ಟದ್ದಲ್ಲ. ಜನಪರ ಹೋರಾಟಗಳು ಮತ್ತು ನ್ಯಾಯಕ್ಕಾಗಿ ನಡೆಸಿದ ಪ್ರತಿಭಟನೆಗಳ ಸಂದರ್ಭದಲ್ಲಿ ದಾಖಲಾಗಿರುವ ಪ್ರಕರಣಗಳಾಗಿವೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಇದೇ ರೀತಿಯ ಕ್ರಮವನ್ನು ಪೊಲೀಸ್ ಇಲಾಖೆ ಯಾವಾಗ ಕೈಗೊಳ್ಳುತ್ತದೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಜ್ಞಾನ ಸಿಂಧುಸ್ವಾಮಿ ಒತ್ತಾಯಿಸಿದ್ದಾರೆ.
ಇದೇ ರೀತಿಯ ಕ್ರಮಗಳು ಮುಂದುವರಿದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಧಿಕಾರದಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಅರಿತು ನ್ಯಾಯಯುತವಾಗಿ ಜನಸೇವೆ ಮಾಡಬೇಕು. ಅಧಿಕಾರದ ದುರುಪಯೋಗ ಮಾಡಿ ರಾಜಕೀಯ ನಡೆಸುವ ಬದಲು, ಅಗತ್ಯವಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನೇರ ರಾಜಕೀಯಕ್ಕೆ ಬರಲಿ. ಇಲ್ಲವಾದರೆ ತುಮಕೂರು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಿ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧುಸ್ವಾಮಿ ಸವಾಲು ಹಾಕಿದ್ದಾರೆ.

17/07/2026

22 ಲಕ್ಷ ಯುವಜನರಿಗೆ ಆದ ಅನ್ಯಾಯ ಕೇಳುವವರು ಯಾರು ??
20 ಕ್ಕೂ ಅಧಿಕ ಯುವಜನರನ್ನು ಹತ್ಯೆ ಮಾಡಿದ ವ್ಯವಸ್ಥೆಯ ವಿರುಧ್ದ ಹೋರಾಟ ಮಾಡಬಾರದೇ !??

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸರಿಯೇ ??

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆ ? ಬೇಡ್ವೆ ?

ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ !!!

Gnana Sindhu Swamy
ಜ್ಞಾನ ಸಿಂಧೂ ಸ್ವಾಮಿ Gnana Sindhu Swamy





Address

Tumkur
572101

Alerts

Be the first to know and let us send you an email when ಜ್ಞಾನ ಸಿಂಧೂ ಸ್ವಾಮಿ Gnana Sindhu Swamy posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಜ್ಞಾನ ಸಿಂಧೂ ಸ್ವಾಮಿ Gnana Sindhu Swamy:

Shortcuts

Share