BJP UDUPI.

BJP UDUPI. Official page of BJP Udupi

08/09/2026

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಪ್ರಭಾವವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ, ರಕ್ಷಣಾ ಸಾಮರ್ಥ್ಯ, ರಾಜತಾಂತ್ರಿಕತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸುತ್ತಿದೆ.

ಪ್ರತಿಯೊಂದು ಸಾಧನೆಯೂ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ, ಪ್ರತಿಯೊಂದು ಮೈಲಿಗಲ್ಲೂ ವಿಶ್ವದ ಮುಂದೆ ಭಾರತದ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆ.

ಆದರೆ, ಈ ಸಾಧನೆಗಳನ್ನು ದೇಶದ ಹೆಮ್ಮೆಯಾಗಿ ನೋಡುವ ಬದಲು, ಅವುಗಳಲ್ಲೂ ದೋಷ ಹುಡುಕುವುದು, ಅನುಮಾನ ವ್ಯಕ್ತಪಡಿಸುವುದು ಮತ್ತು ಪ್ರಶ್ನಿಸುವುದೇ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯವರ ರಾಜಕೀಯವಾಗುತ್ತಿರುವುದು ಏಕೆ?

ವಿರೋಧ ಪಕ್ಷವಾಗಿ ಸರ್ಕಾರವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಭಾಗ. ಆದರೆ ಭಾರತದ ಸಾಧನೆಯನ್ನೇ ಪ್ರಶ್ನಿಸುವುದು ಮತ್ತು ದೇಶದ ಯಶಸ್ಸಿನ ಬಗ್ಗೆ ಸಂಶಯ ಮೂಡಿಸುವುದು ಇದು ಯಾವ ರೀತಿಯ ರಾಜಕೀಯ?

ವ್ಯಕ್ತಿಯ ಮೇಲೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ದೇಶದ ಪ್ರಗತಿಯ ವಿಚಾರದಲ್ಲಿ ಭಾರತವೇ ಮೊದಲು ಎಂಬ ಮನೋಭಾವ ಇರಬೇಕಲ್ಲವೇ?

ಮೋದಿ ಅವರ ಸಾಧನೆ ಎಂದರೆ ಕೇವಲ ಒಂದು ಸರ್ಕಾರದ ಸಾಧನೆಯಲ್ಲ; ಅದು 140 ಕೋಟಿಗೂ ಹೆಚ್ಚು ಭಾರತೀಯರ ಸಾಮರ್ಥ್ಯದ ಪ್ರತಿಬಿಂಬ.

ಭಾರತ ಬೆಳೆಯುತ್ತಿದೆ.
ಭಾರತ ಮುನ್ನಡೆಯುತ್ತಿದೆ.
ಭಾರತದ ಧ್ವನಿ ವಿಶ್ವದಲ್ಲಿ ಗಟ್ಟಿಯಾಗುತ್ತಿದೆ.

ಈ ಯಶಸ್ಸನ್ನು ಸಂಭ್ರಮಿಸುವ ಬದಲು ಪ್ರಶ್ನಿಸುವ ರಾಜಕೀಯಕ್ಕೆ ಜನರೇ ಉತ್ತರ ನೀಡಲಿದ್ದಾರೆ.





06/09/2026

ಮಿಝೋರಾಂನ ಅಭಿವೃದ್ಧಿಯ ಕನಸುಗಳಿಗೆ ಇದೀಗ ವೇಗದ ರೈಲು ಸಂಪರ್ಕದ ಬಲ...

ಇದು ಕೇವಲ ರೈಲಲ್ಲ, ಈಶಾನ್ಯ ಭಾರತದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ನೀಡುತ್ತಿರುವ ಆದ್ಯತೆಯ ಸ್ಪಷ್ಟ ಸಂಕೇತ...

06/09/2026

2013ರ ಆರ್ಥಿಕ ಸಂಕಷ್ಟದ ದಿನಗಳಿಂದ ಹಿಡಿದು, ಇಂದಿನ ದೃಢ ನಿರ್ಧಾರ ಹಾಗೂ ಸಶಕ್ತ ಭಾರತದವರೆಗಿನ ಪಯಣ ಅದ್ಭುತ. ಭಯೋತ್ಪಾದನೆಗೆ ತಕ್ಕ ಶಾಸ್ತಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ನೀತಿ ಕ್ರಿಯಾಶೀಲತೆಯ ಹೊಸ ಶಕೆ ಶುರುವಾಗಿದೆ.

06/09/2026

ಇದು ಸಿಎಂ DK Shivakumar ಅವರ ಫೋಟೋಸೇವೆ, ಅಲ್ಲಲ್ಲ… ಸೋ ಕಾಲ್ಡ್‌ ಪ್ರಜಾಸೇವೆ..!!

ಡಿಕೆ ಶಿವಕುಮಾರ್‌ ಅವರು ಫೋಟೋ ತೆಗೆಸಿಕೊಳ್ಳುವಾಗ, ದಲಿತ ಸಮುದಾಯಕ್ಕೆ ಸೇರಿದ ಸಚಿವ ಬಸವಂತಪ್ಪ ಹಾಗೂ ಶಾಸಕ ಎನ್‌.ಟಿ. ಶ್ರೀನಿವಾಸ್‌ ಹತ್ತಿರಕ್ಕೂ ಬರಬಾರದಂತೆ..!!

ದಲಿತರನ್ನು ಫೋಟೋದಿಂದ ದೂರ ತಳ್ಳಿ, ತಾವು ದಲಿತಪರ, ನೊಂದವರ ಪರ ಎಂದು ಬುರುಡೆ ಭಾಷಣ ಮಾಡುವುದಕ್ಕೆ ಯಾವ ನೈತಿಕತೆ ಇದೆ ಎಂಬುದನ್ನು ತಿಳಿಸಬೇಕು.

06/09/2026

ಸೆ.7ರಂದು ಕುಂದಾಪುರದಿಂದ ಸಾಸ್ತಾನದ ವರೆಗೆ ನಡೆಯುವ "ವಂದೇ ಮಾತರಂ ಅಭಿಯಾನ" - 'ಕಾಲ್ನಡಿಗೆ ಜಾಥಾ'ವನ್ನು ಯಶಸ್ವಿಗೊಳಿಸೋಣ: ಕುತ್ಯಾರು ನವೀನ್ ಶೆಟ್ಟಿ

ದೇಶಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 7, ಸೋಮವಾರ ಬೆಳಿಗ್ಗೆ ಗಂಟೆ 8.30ಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಚಾಲನೆಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸಂಜೆ ಗಂಟೆ 5.30ಕ್ಕೆ ಸಾಸ್ತಾನ ಪೇಟೆಯಲ್ಲಿ ಸಮಾಪನಗೊಳ್ಳಲಿರುವ "ವಂದೇ ಮಾತರಂ ಅಭಿಯಾನ"ದ 'ಕಾಲ್ನಡಿಗೆ ಜಾಥಾ'ದಲ್ಲಿ ಜಿಲ್ಲೆಯಾದ್ಯoತ ರಾಷ್ಟ್ರ ಪ್ರೇಮಿಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಜಾಗೃತಗೊಳಿಸಿದ, ದೇಶವಾಸಿಗಳ ಅಸ್ಮಿತೆ, ದೇಶದ ಅಖಂಡತೆ ಮತ್ತು ಆತ್ಮ ಗೌರವದ ಸಂಕೇತವಾಗಿರುವ 'ವಂದೇ ಮಾತರಂ' ಗೀತೆಗೆ 150 ಸಂವತ್ಸರಗಳನ್ನು ಪೂರೈಸಿರುವ ಸುಸಂದರ್ಭದಲ್ಲಿ ಕೇಂದ್ರ ಸರಕಾರ ಸಂಸತ್ ಅಧಿವೇಶನದಲ್ಲಿ ರಾಷ್ಟ್ರ ಗೀತೆಗೆ ಸಮನಾದ ಗೌರವವನ್ನು ಘೋಷಿಸಿರುವ ಕಾಲಘಟ್ಟದಲ್ಲಿ "ವಂದೇ ಮಾತರಂ ಅಭಿಯಾನ" ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಈ ಬೃಹತ್ ಅಭಿಯಾನದಲ್ಲಿ ರಾಷ್ಟ್ರ ಭಕ್ತರ ಘೋಷಣೆಗಳು ಮುಗಿಲು ಮುಟ್ಟುವ ಮೂಲಕ ರಾಷ್ಟ್ರ ಗೌರವದ ಸಂದೇಶ ಪ್ರತಿಧ್ವನಿಸುವಂತಾಗಲಿ.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಮುಂದಾಳತ್ವದಲ್ಲಿ ನಿವೃತ್ತ ಸೈನಿಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವ 'ವಂದೇ ಮಾತರಂ ಕಾಲ್ನಡಿಗೆ ಜಾಥಾ'ದಲ್ಲಿ ರಾಷ್ಟ್ರ ಪ್ರೇಮಿ ಸಾರ್ವಜನಿಕ ಬಂಧುಗಳು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತ ಬಂಧುಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು 'ವಂದೇ ಮಾತರಂ ಅಭಿಯಾನ'ವನ್ನು ಯಶಸ್ವಿಗೊಳಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿಯವರು ವಿನಂತಿಸಿದ್ದಾರೆ.

05/09/2026

ಒಂದು ಕಾಲದಲ್ಲಿ ಭಾರತವನ್ನು ಕೇವಲ ಮಾರುಕಟ್ಟೆ ಎಂದು ನೋಡುತ್ತಿದ್ದ ಜಗತ್ತು… ಇಂದು ಭಾರತವನ್ನು ಕಾರ್ಯತಂತ್ರದ ಪಾಲುದಾರನಾಗಿ ಗೌರವಿಸುತ್ತಿದೆ.

ಇದು ಮೋದಿ ಯುಗದ ಹೊಸ ಭಾರತದ ಶಕ್ತಿ...

ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ರಕ್ಷಣಾ ಸಹಕಾರ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಭಾರತ–ಬೆಲ್ಜಿಯಂ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿರ್ಧಾರಗಳು ಕೈಗೊಳ್ಳಲಾಗಿದೆ.

ರಕ್ಷಣಾ ಸಹಕಾರ
ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನ
ಕೌಂಟರ್-ಡ್ರೋನ್ ಸಾಮರ್ಥ್ಯ
ಸಮುದ್ರ ಭದ್ರತೆ
ಸಂಶೋಧನೆ ಮತ್ತು ಉನ್ನತ ತಂತ್ರಜ್ಞಾನ

ಇವೆಲ್ಲವೂ ಒಂದೇ ಸಂದೇಶವನ್ನು ಸಾರುತ್ತಿವೆ...

ಭಾರತ ಇನ್ನು ಯಾರ ಮೇಲೂ ಅವಲಂಬಿತವಾಗಿರುವ ದೇಶವಲ್ಲ; ಜಗತ್ತಿನೊಂದಿಗೆ ಸಮಾನವಾಗಿ ಕೈಜೋಡಿಸುವ, ತನ್ನ ಸಾಮರ್ಥ್ಯದಿಂದ ಜಾಗತಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಶಕ್ತಿಯಾಗಿದೆ.

ಹಿಂದೆ ಭಾರತವನ್ನು “ಮಾರುಕಟ್ಟೆ” ಎಂದು ನೋಡಿದವರು, ಇಂದು ಭಾರತವನ್ನು ವಿಶ್ವಾಸಾರ್ಹ ಕಾರ್ಯತಂತ್ರದ ಪಾಲುದಾರ ಎಂದು ಪರಿಗಣಿಸುತ್ತಿದ್ದಾರೆ. ಕಾರಣ, ಮೋದಿ ಸರ್ಕಾರದ ಬಲಿಷ್ಠ ವಿದೇಶಾಂಗ ನೀತಿ, ಆತ್ಮನಿರ್ಭರ ಭಾರತದ ಸಂಕಲ್ಪ ಮತ್ತು ರಕ್ಷಣಾ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತದ ಸಾಮರ್ಥ್ಯ!

ಭಾರತದ ಸಾಮರ್ಥ್ಯವನ್ನು ಜಗತ್ತು ಗುರುತಿಸುತ್ತಿದೆ.
ಭಾರತದ ಧ್ವನಿಗೆ ಜಗತ್ತಿನಲ್ಲಿ ತೂಕ ಹೆಚ್ಚುತ್ತಿದೆ.

ಇದೇ ಹೊಸ ಭಾರತ…
ಇದೇ ಆತ್ಮನಿರ್ಭರ ಭಾರತ…
ಇದೇ ವಿಶ್ವಗುರುವಿನತ್ತ ಸಾಗುತ್ತಿರುವ ಭಾರತ!

ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
05/09/2026

ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆಯವರ ಧ್ವನಿ ಕೇಳದ ಕ್ಷೇತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆರ್‌ಎಸ್‌ಎಸ್‌ ನ ವಿರುದ್ಧ ಪ್ರಿಯಾಂಕ್ ಖರ...
04/09/2026

ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆಯವರ ಧ್ವನಿ ಕೇಳದ ಕ್ಷೇತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆರ್‌ಎಸ್‌ಎಸ್‌ ನ ವಿರುದ್ಧ ಪ್ರಿಯಾಂಕ್ ಖರ್ಗೆಯವರು ಟೀಕಿಸುವುದು ನಿರಂತರವಾಗಿದೆ.

ಆದರೆ ಆರ್‌ಎಸ್‌ಎಸ್‌ ಏನು ಮಾಡುತ್ತಿದೆ? ದ್ವೇಷಕ್ಕೆ ದ್ವೇಷದಿಂದ ಉತ್ತರಿಸದೆ, ತಾಳ್ಮೆ, ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರುತ್ತಿದೆ. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ, ಕಾಂಗ್ರೆಸ್‌ನದೇ ಮುಖ್ಯಮಂತ್ರಿಯವರ ಕೈಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಸಂದೇಶ ನೀಡಿದೆ.

ಇದೇ ಆರ್‌ಎಸ್‌ಎಸ್‌ನ ಸಂಸ್ಕಾರ. ಎಷ್ಟೇ ಟೀಕೆ, ಆರೋಪಗಳು ಬಂದರೂ ಸಮಾಜದಲ್ಲಿ ಪ್ರೀತಿ ಮತ್ತು ಬಾಂಧವ್ಯ ಬೆಳೆಸುವುದೇ ಉತ್ತರ. ದ್ವೇಷಕ್ಕೆ ಪ್ರೀತಿಯಿಂದ ಉತ್ತರಿಸುವುದೇ ಸಂಘದ ಮಾರ್ಗ.

04/09/2026

ಮಕ್ಕಳ ತಲೆಯ ಮೇಲಿನ ಛಾವಣಿಯೂ ಸುರಕ್ಷಿತವಲ್ಲ… ಇದು ಕಾಂಗ್ರೆಸ್‌ ಆಡಳಿತದ ಕರಾಳ ಸತ್ಯ!

ಸಿಎಂ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಬಾಗಲಕೋಟೆಯ ಸರ್ಕಾರಿ ಶಾಲೆಯಲ್ಲಿ ಛಾವಣಿ ಕುಸಿದು ಮಕ್ಕಳು ಗಾಯಗೊಂಡಿರುವ ಘಟನೆ ಸಾಕ್ಷಿಯಾಗಿದೆ.

ಮಕ್ಕಳಿಗೆ ಸುರಕ್ಷಿತ ಶಾಲೆ ನೀಡಲು ಸಾಧ್ಯವಾಗದ ಸರ್ಕಾರದಿಂದ ಉಜ್ವಲ ಭವಿಷ್ಯದ ಭರವಸೆ ಹೇಗೆ ಸಾಧ್ಯ?

ಇದು ಕೇವಲ ಕಟ್ಟಡದ ಛಾವಣಿ ಕುಸಿದ ಘಟನೆ ಅಲ್ಲ; ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲಿನ ಜನರ ನಂಬಿಕೆಯೇ ಕುಸಿದಿರುವುದರ ಸಂಕೇತ!

ಮಕ್ಕಳ ಸುರಕ್ಷತೆ, ಗುಣಮಟ್ಟದ ಶಿಕ್ಷಣ ಮತ್ತು ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿ ಬೀದಿಗಿಳಿದಿದೆ. ಕಾಂಗ್ರೆಸ್‌ನ ದುರಾಡಳಿತ ಮತ್ತು ಅಭಿವೃದ್ಧಿ ಶೂನ್ಯ ಆಡಳಿತದ ವಿರುದ್ಧದ ಈ ಹೋರಾಟಕ್ಕೆ ಜನರ ಬೆಂಬಲವೇ ಶಕ್ತಿ.

ಮಕ್ಕಳ ಭವಿಷ್ಯಕ್ಕಾಗಿ ಹೋರಾಟ…
ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಟ…
ಕಾಂಗ್ರೆಸ್ ದುರಾಡಳಿತದ ಅಂತ್ಯಕ್ಕಾಗಿ ಹೋರಾಟ!

ಬಲ್ಲಾರಿ ಚಲೋ — ಬದಲಾವಣೆಯ ಸಂಕಲ್ಪ!


Address

Kadiyali
Udupi

Website

Alerts

Be the first to know and let us send you an email when BJP UDUPI. posts news and promotions. Your email address will not be used for any other purpose, and you can unsubscribe at any time.

Shortcuts

Share