Aam Aadmi Party Vijayapura

Aam Aadmi Party Vijayapura Vijayapura, Karnataka.

05/09/2026

ಛಾವಣಿ ಕುಸಿದು 6 ಮಕ್ಕಳು ಗಾಯಗೊಂಡಿದ್ದಾರೆ.

ಕರ್ನಾಟಕದ ಸರ್ಕಾರಿ ಶಾಲೆಗಳ ಸ್ಥಿತಿ ಇದು. ಮಕ್ಕಳನ್ನು ಅಸುರಕ್ಷಿತ ಛಾವಣಿಗಳ ಕೆಳಗೆ ಕೂರಿಸಲಾಗುತ್ತಿದೆ, ಇದರಿಂದ ಅವರ ಜೀವ ಅಪಾಯದಲ್ಲಿದೆ.

ಸರ್ಕಾರವು ನಮ್ಮ ಶಾಲೆಗಳ ಸ್ಥಿತಿಯನ್ನು ಎಷ್ಟು ದಿನ ನಿರ್ಲಕ್ಷಿಸುತ್ತದೆ?



04/09/2026

ಮೂರನೇ ದಿನವೂ ರೈತರ ಪರ ಹೋರಾಟ ಮುಂದುವರಿಕೆ! ಆಮ್ ಆದ್ಮಿ ಪಾರ್ಟಿ ಸಂಪೂರ್ಣ ಬೆಂಬಲ! ✊

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ಅವರು ಇಂದು ಮೂರನೇ ದಿನವೂ ಕೂಡ ಬೆಂಬಲ ನೀಡಿ, ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ನೀಡಿದರು.

ವಿಜಯಪುರ ಜಿಲ್ಲೆ ಬರದ ಸಂಕಷ್ಟದಲ್ಲಿದ್ದರೂ ಸರ್ಕಾರದ ಕಣ್ಣಿಗೆ ಇದು ಕಾಣುತ್ತಿಲ್ಲವೇ?

ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ಕೇವಲ 3 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಉಳಿದ 10 ತಾಲೂಕುಗಳನ್ನು ಕೈಬಿಟ್ಟಿರುವುದು ರೈತರ ನಡುವೆ ಸರ್ಕಾರ ಮಾಡುತ್ತಿರುವ ತಾರತಮ್ಯವಲ್ಲವೇ?

ಒಂದೇ ಜಿಲ್ಲೆಯ ರೈತರು ಬರದಿಂದ ಸಂಕಷ್ಟ ಅನುಭವಿಸುತ್ತಿರುವಾಗ, ಕೆಲ ತಾಲೂಕುಗಳಿಗೆ ಮಾತ್ರ ಪರಿಹಾರ ನೀಡುವುದು ಮತ್ತು ಉಳಿದ ತಾಲೂಕುಗಳ ರೈತರನ್ನು ನಿರ್ಲಕ್ಷಿಸುವುದು ರೈತರಿಗೆ ಮಾಡುತ್ತಿರುವ ಅನ್ಯಾಯ ಹಾಗೂ ಅವಮಾನ.

ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೂ ಸೂಕ್ತ ಪರಿಹಾರ ನೀಡಬೇಕು.

ರೈತರ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ ಸದಾ ಬೆಂಬಲವಾಗಿ ನಿಲ್ಲಲಿದೆ.

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು 💐💐ಅಧರ್ಮದ ವಿರುದ್ಧ ಧರ್ಮದ ಜಯವನ್ನು ಸಾರಿದ, ಸತ್ಯ–ನ್ಯಾಯದ ಹಾದಿಯಲ್ಲಿ ...
04/09/2026

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು 💐💐

ಅಧರ್ಮದ ವಿರುದ್ಧ ಧರ್ಮದ ಜಯವನ್ನು ಸಾರಿದ, ಸತ್ಯ–ನ್ಯಾಯದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡಿದ ಭಗವಾನ್ ಶ್ರೀಕೃಷ್ಣನ ಜನ್ಮದಿನವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. 🙏

ಶ್ರೀಕೃಷ್ಣನ ಜೀವನ ಮತ್ತು ಭಗವದ್ಗೀತೆಯ ಸಂದೇಶವು ನಮ್ಮಲ್ಲಿ ಧೈರ್ಯ, ಸತ್ಯ, ಕರ್ತವ್ಯನಿಷ್ಠೆ, ಮಾನವೀಯತೆ ಹಾಗೂ ಧರ್ಮದ ಮೇಲಿನ ನಂಬಿಕೆಯನ್ನು ಬೆಳೆಸಲಿ.

ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆ ನೆಲೆಸಲಿ. ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿ ತುಂಬಿರಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾತಿಸುತ್ತೇನೆ!

ಜೈ ಶ್ರೀಕೃಷ್ಣ! 🙏

03/09/2026

ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಘೋಷಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಡೆಯುತ್ತಿರುವ ಮೊದಲನೇ ದಿನದ ಅನಿರ್ದಿಷ್ಟ ಹೋರಾಟ ಸ್ಥಳಕ್ಕೆ ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ಭೇಟಿ ನೀಡಿ ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕ ವತಿಯಿಂದ ಬೆಂಬಲ ಸೂಚಿಸಿ ಮಾತನಾಡಿದರು!

#ವಿಜಯಪುರ

ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ -  Aam Aadmi Party ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧ್...
02/09/2026

ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ - Aam Aadmi Party ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ!

ವಿಜಯಪುರ ಜಿಲ್ಲೆಯ ರೈತರು ಮುಂಗಾರು ಮಳೆಯ ಕೊರತೆ ಹಾಗೂ ಅಸಮರ್ಪಕ ಮಳೆಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆ ನಷ್ಟ, ನೀರಿನ ಕೊರತೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೇರಿದಂತೆ ಗ್ರಾಮೀಣ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಆದರೆ ರಾಜ್ಯ ಸರ್ಕಾರವು ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ಕೇವಲ 3 ತಾಲೂಕುಗಳಾದ ವಿಜಯಪುರ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ.

❓ ಉಳಿದ 10 ತಾಲೂಕುಗಳ ರೈತರೇನು?
❓ ಅವರ ಬೆಳೆ ನಷ್ಟವೇನು?
❓ ಅವರ ಸಂಕಷ್ಟಕ್ಕೆ ಪರಿಹಾರ ಯಾವಾಗ?

ಬರಕ್ಕೆ ತಾಲೂಕು ಗಡಿ ಗೊತ್ತಿಲ್ಲ.
ಮಳೆಯ ಕೊರತೆಗೆ ತಾಲೂಕು ಗಡಿ ಗೊತ್ತಿಲ್ಲ.
ರೈತರ ಸಂಕಷ್ಟಕ್ಕೂ ತಾಲೂಕು ಗಡಿ ಗೊತ್ತಿಲ್ಲ!

ಹೀಗಿರುವಾಗ ಕೇವಲ 3 ತಾಲೂಕುಗಳಿಗೆ ಬರ ಪರಿಹಾರದ ಅವಕಾಶ ನೀಡಿ, ಉಳಿದ 10 ತಾಲೂಕುಗಳ ರೈತರನ್ನು ನಿರ್ಲಕ್ಷಿಸುವುದು ಅನ್ಯಾಯ.

👉 ಆಮ್ ಆದ್ಮಿ ಪಾರ್ಟಿ, ವಿಜಯಪುರ ಜಿಲ್ಲಾ ಘಟಕದ ಸ್ಪಷ್ಟ ಆಗ್ರಹ:

🔹 ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು.
🔹 ಎಲ್ಲಾ ತಾಲೂಕುಗಳಲ್ಲಿ ವೈಜ್ಞಾನಿಕ ಹಾಗೂ ಪಾರದರ್ಶಕ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು.
🔹 ಅರ್ಹ ಪ್ರತಿಯೊಬ್ಬ ರೈತನಿಗೂ ತಕ್ಷಣ ಬೆಳೆ ಪರಿಹಾರ ನೀಡಬೇಕು.
🔹 ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಬೇಕು.
🔹 ರೈತರ ಸಾಲ ವಸೂಲಾತಿ ಹಾಗೂ ಬಡ್ಡಿಗೆ ಸೂಕ್ತ ರಿಯಾಯಿತಿ ನೀಡಬೇಕು.
🔹 ಬರ ಘೋಷಣೆಯ ಮಾನದಂಡಗಳು ಮತ್ತು ತಾಲೂಕುವಾರು ಸಮೀಕ್ಷೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.

ರೈತರ ಪರಿಹಾರ ಸರ್ಕಾರದ ದಯೆಯಲ್ಲ, ಅದು ರೈತರ ಹಕ್ಕು!

ವಿಜಯಪುರ ಜಿಲ್ಲೆಯ 13 ತಾಲೂಕುಗಳ ರೈತರೂ ಸಮಾನರು.
ಅವರಿಗೆ ಸಮಾನ ನ್ಯಾಯ, ಸಮಾನ ಪರಿಹಾರ ಮತ್ತು ಸಮಾನ ಗೌರವ ದೊರೆಯಬೇಕು.

ವಿಜಯಪುರ ಜಿಲ್ಲೆಯ ರೈತರಿಗೆ ಅನ್ಯಾಯವಾದರೆ ಆಮ್ ಆದ್ಮಿ ಪಾರ್ಟಿ ಮೌನವಾಗಿರುವುದಿಲ್ಲ.

ರೈತರ ಹಕ್ಕಿಗಾಗಿ, ವಿಜಯಪುರ ಜಿಲ್ಲೆಗೆ ನ್ಯಾಯಕ್ಕಾಗಿ, ಆಮ್ ಆದ್ಮಿ ಪಾರ್ಟಿಯ ಹೋರಾಟ ನಿರಂತರ! ✊

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುದ್ದೇಬಿಹಾಳ ಅಧ್ಯಕ್ಷರಾದ ಮಹಬೂಬ್ ಹಡಲಗೇರಿ, ಪಕ್ಷದ ಮಹಿಳಾ ಮುಖಂಡರಾದ ಸುಶೀಲಾ ಮಿಣಜಗಿ, ನೀಲಂಬಿಕಾ ಬಿರಾದಾರ, ಜ್ಯೋತಿ ಮಿಣಜಗಿ, ಯುವ ಮುಖಂಡರಾದ ಕಿರಣ್ ಮೇಲಿನಕೇರಿ, ಫರೀದ್ ನದಾಫ್, ಸಾಗರ ನಾಟಿಕರ ಉಪಸ್ಥಿತರಿದ್ದರು.

#ವಿಜಯಪುರ

01/09/2026

ಮೋದಿ ಅವರೇ, ನೀವು ಸ್ನೇಹವನ್ನು ಬಲವಂತವಾಗಿ ಬೆಳೆಸಲು ಏಕೆ ಪ್ರಯತ್ನಿಸುತ್ತಿದ್ದೀರಿ... ಅದು ಕೂಡ ಒಬ್ಬ ಮಗುವಿನೊಂದಿಗೆ?

01/09/2026

📢 ವಿಜಯಪುರ ಜಿಲ್ಲೆಯ ರೈತರ ಹಕ್ಕಿಗಾಗಿ ಧ್ವನಿ ಎತ್ತೋಣ! ✊

ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂಬ ಆಗ್ರಹದೊಂದಿಗೆ ಆಮ್ ಆದ್ಮಿ ಪಾರ್ಟಿ, ವಿಜಯಪುರ ಜಿಲ್ಲೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುತ್ತಿದೆ.

📅 ದಿನಾಂಕ: 02-09-2026, ಬುಧವಾರ
⏰ ಸಮಯ: ಬೆಳಿಗ್ಗೆ 11:00 ಗಂಟೆಗೆ
📍 ಸ್ಥಳ: ಜಿಲ್ಲಾಧಿಕಾರಿ ಕಚೇರಿ ಆವರಣ, ವಿಜಯಪುರ

ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಹಾಗೂ ರೈತಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಪರವಾಗಿ ನಮ್ಮ ಒಗ್ಗಟ್ಟಿನ ಧ್ವನಿಯನ್ನು ಬಲಪಡಿಸೋಣ.

ರೈತ ಉಳಿದರೆ ದೇಶ ಉಳಿಯುತ್ತದೆ!
✊ ರೈತರ ಹಕ್ಕಿಗಾಗಿ – ಎಲ್ಲರೂ ಒಂದಾಗಿ ಧ್ವನಿ ಎತ್ತೋಣ!

ಧನ್ಯವಾದಗಳು

ಭೋಗೇಶ್ ಸೋಲಾಪುರ್
ಜಿಲ್ಲಾಧ್ಯಕ್ಷರು
ಆಮ್ ಆದ್ಮಿ ಪಾರ್ಟಿ, ವಿಜಯಪುರ

30/08/2026

ಮಾನ್ ಅವರ ಪಂಜಾಬ್ ಮಾದರಿ ಈಗ ಪಂಜಾಬ್‌ನ ಆಚೆಗೂ ಸ್ಪೂರ್ತಿದಾಯಕ ಸಂಭಾಷಣೆಯಾಗಿದೆ! 🚀

ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಿಂದ ಉದ್ಯೋಗಗಳು, ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದವರೆಗೆ, ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಡಿಯಲ್ಲಿ ನಡೆಯುತ್ತಿರುವ ಕೆಲಸಗಳು ರಾಜಕೀಯವು ಕೇವಲ ಭರವಸೆಗಳನ್ನು ನೀಡುವುದಲ್ಲ, ಫಲಿತಾಂಶಗಳನ್ನು ನೀಡುವುದರ ಬಗ್ಗೆ ಎಂದು ತೋರಿಸುತ್ತಿದೆ.

ಇತರ ರಾಜ್ಯಗಳಲ್ಲಿ ಒಂದು ಮಾದರಿಯನ್ನು ಹೊಗಳಿದಾಗ, ಜನರು ಬದಲಾವಣೆಯನ್ನು ಗಮನಿಸುತ್ತಿದ್ದಾರೆ ಎಂಬುದರ ಸಂಕೇತವಾಗಿದೆ. ಪಂಜಾಬ್ ಒಂದು ಉದಾಹರಣೆಯನ್ನು ನೀಡುತ್ತಿದೆ - ಮತ್ತು ಸಂದೇಶ ಸರಳವಾಗಿದೆ:

ಉತ್ತಮ ಆಡಳಿತಕ್ಕೆ ಯಾವುದೇ ರಾಜ್ಯ ಗಡಿಗಳು ಇರಬಾರದು. 🇮🇳

ಜನರು ತಮಗಾಗಿ ಕೆಲಸ ಮಾಡುವ, ಅವರಲ್ಲಿ ಹೂಡಿಕೆ ಮಾಡುವ ಮತ್ತು ಅವರಿಗಾಗಿ ತಲುಪಿಸುವ ಸರ್ಕಾರಗಳಿಗೆ ಅರ್ಹರು. 💯

30/08/2026

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ನಲ್ಲಿ ಆಮ್ ಆದ್ಮಿ ಪಾರ್ಟಿ ಸಂಯೋಜಕರಾದ ಅರವಿಂದ್ ಕೇಜ್ರಿವಾಲ್!

30/08/2026

ಜಂತರ್ ಮಂತರ್ ಪ್ರತಿಭಟನೆಯ ಈ ವೈರಲ್ ಆದ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ನೆನಪಿಸಿಕೊಳ್ಳಿ?

ಆಕೆಯನ್ನು ಬೆನ್ನಟ್ಟಿ, ಬೆದರಿಸಿ, ಮೋದಿ ಬಳಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಯಿತು.

ಕ್ಷಮೆ ಯಾಚಿಸಿದ ನಂತರವೂ, ಆಕೆಯ ವಿರುದ್ಧದ ಬೇಟೆ ನಿಲ್ಲಲಿಲ್ಲ ಮತ್ತು ಈಗ ಆಕೆಗೆ ಕೊನೆಗೂ ಸಾಕಾಗಿದೆ.

ಅವಳು ಮೋದಿಯನ್ನು ನೇರವಾಗಿ ಮತ್ತೆ ಕರೆಯುತ್ತಿದ್ದಾಳೆ ಮತ್ತು ಈ ಬಾರಿ ಹಿಂದೆ ಸರಿಯುವುದಿಲ್ಲ ಎಂದು ಭರವಸೆ ನೀಡಿದ್ದಾಳೆ.

Address

Shop No: 7, Dyaberi Complex, Ainapur House Bus Stop, Jalanagar, Vijayapura-
Vijayapura
586109

Alerts

Be the first to know and let us send you an email when Aam Aadmi Party Vijayapura posts news and promotions. Your email address will not be used for any other purpose, and you can unsubscribe at any time.

Contact The Organization

Send a message to Aam Aadmi Party Vijayapura:

Shortcuts

Share