02/09/2026
ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ - Aam Aadmi Party ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧ್ಯಕ್ಷರಾದ ಭೋಗೇಶ್ ಸೋಲಾಪುರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ!
ವಿಜಯಪುರ ಜಿಲ್ಲೆಯ ರೈತರು ಮುಂಗಾರು ಮಳೆಯ ಕೊರತೆ ಹಾಗೂ ಅಸಮರ್ಪಕ ಮಳೆಯಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆ ನಷ್ಟ, ನೀರಿನ ಕೊರತೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೇರಿದಂತೆ ಗ್ರಾಮೀಣ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಆದರೆ ರಾಜ್ಯ ಸರ್ಕಾರವು ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ ಕೇವಲ 3 ತಾಲೂಕುಗಳಾದ ವಿಜಯಪುರ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ.
❓ ಉಳಿದ 10 ತಾಲೂಕುಗಳ ರೈತರೇನು?
❓ ಅವರ ಬೆಳೆ ನಷ್ಟವೇನು?
❓ ಅವರ ಸಂಕಷ್ಟಕ್ಕೆ ಪರಿಹಾರ ಯಾವಾಗ?
ಬರಕ್ಕೆ ತಾಲೂಕು ಗಡಿ ಗೊತ್ತಿಲ್ಲ.
ಮಳೆಯ ಕೊರತೆಗೆ ತಾಲೂಕು ಗಡಿ ಗೊತ್ತಿಲ್ಲ.
ರೈತರ ಸಂಕಷ್ಟಕ್ಕೂ ತಾಲೂಕು ಗಡಿ ಗೊತ್ತಿಲ್ಲ!
ಹೀಗಿರುವಾಗ ಕೇವಲ 3 ತಾಲೂಕುಗಳಿಗೆ ಬರ ಪರಿಹಾರದ ಅವಕಾಶ ನೀಡಿ, ಉಳಿದ 10 ತಾಲೂಕುಗಳ ರೈತರನ್ನು ನಿರ್ಲಕ್ಷಿಸುವುದು ಅನ್ಯಾಯ.
👉 ಆಮ್ ಆದ್ಮಿ ಪಾರ್ಟಿ, ವಿಜಯಪುರ ಜಿಲ್ಲಾ ಘಟಕದ ಸ್ಪಷ್ಟ ಆಗ್ರಹ:
🔹 ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು.
🔹 ಎಲ್ಲಾ ತಾಲೂಕುಗಳಲ್ಲಿ ವೈಜ್ಞಾನಿಕ ಹಾಗೂ ಪಾರದರ್ಶಕ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು.
🔹 ಅರ್ಹ ಪ್ರತಿಯೊಬ್ಬ ರೈತನಿಗೂ ತಕ್ಷಣ ಬೆಳೆ ಪರಿಹಾರ ನೀಡಬೇಕು.
🔹 ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಬೇಕು.
🔹 ರೈತರ ಸಾಲ ವಸೂಲಾತಿ ಹಾಗೂ ಬಡ್ಡಿಗೆ ಸೂಕ್ತ ರಿಯಾಯಿತಿ ನೀಡಬೇಕು.
🔹 ಬರ ಘೋಷಣೆಯ ಮಾನದಂಡಗಳು ಮತ್ತು ತಾಲೂಕುವಾರು ಸಮೀಕ್ಷೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.
ರೈತರ ಪರಿಹಾರ ಸರ್ಕಾರದ ದಯೆಯಲ್ಲ, ಅದು ರೈತರ ಹಕ್ಕು!
ವಿಜಯಪುರ ಜಿಲ್ಲೆಯ 13 ತಾಲೂಕುಗಳ ರೈತರೂ ಸಮಾನರು.
ಅವರಿಗೆ ಸಮಾನ ನ್ಯಾಯ, ಸಮಾನ ಪರಿಹಾರ ಮತ್ತು ಸಮಾನ ಗೌರವ ದೊರೆಯಬೇಕು.
ವಿಜಯಪುರ ಜಿಲ್ಲೆಯ ರೈತರಿಗೆ ಅನ್ಯಾಯವಾದರೆ ಆಮ್ ಆದ್ಮಿ ಪಾರ್ಟಿ ಮೌನವಾಗಿರುವುದಿಲ್ಲ.
ರೈತರ ಹಕ್ಕಿಗಾಗಿ, ವಿಜಯಪುರ ಜಿಲ್ಲೆಗೆ ನ್ಯಾಯಕ್ಕಾಗಿ, ಆಮ್ ಆದ್ಮಿ ಪಾರ್ಟಿಯ ಹೋರಾಟ ನಿರಂತರ! ✊
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುದ್ದೇಬಿಹಾಳ ಅಧ್ಯಕ್ಷರಾದ ಮಹಬೂಬ್ ಹಡಲಗೇರಿ, ಪಕ್ಷದ ಮಹಿಳಾ ಮುಖಂಡರಾದ ಸುಶೀಲಾ ಮಿಣಜಗಿ, ನೀಲಂಬಿಕಾ ಬಿರಾದಾರ, ಜ್ಯೋತಿ ಮಿಣಜಗಿ, ಯುವ ಮುಖಂಡರಾದ ಕಿರಣ್ ಮೇಲಿನಕೇರಿ, ಫರೀದ್ ನದಾಫ್, ಸಾಗರ ನಾಟಿಕರ ಉಪಸ್ಥಿತರಿದ್ದರು.
#ವಿಜಯಪುರ