26/11/2025
ಇಂದು ಶ್ರೀ ಕೆ .ತಿಮ್ಮಪ್ಪ, ಮಾನ್ಯ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ,ವಿಜಯನಗರ ರವರು ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಪಂಚಾಯಿತಿಗೆ ಬೇಟಿನಿಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ಸಿ.ಸಿ. ರಸ್ತೆ, ಸಿ.ಸಿ. ಚರಂಡಿ,ಶಾಲಾ ಶೌಚಾಲಯ,ನೆಡುತೋಪು ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿ,ಕಾಮಗಾರಿಗಳ ಸ್ಥಳಕ್ಕೆ ಭೇಟಿನೀಡಿ ಏರಿಯಾ ಆಫೀಸರ್ ಆಪ್ ದಾಖಲಿಸಿದರು. ನಂತರ ಕೂಸಿನ ಮನೆಗೆ ಭೇಟಿನೀಡಿ ಮಕ್ಕಳ ಹಾಜರಾತಿ,ಆಹಾರ ವಿತರಣೆಯನ್ನು ಪರಿಶೀಲಿಸಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರವನ್ನು ನೀಡಬೇಕೆಂದು ಕೇರ್ ಟೇಕರ್ ಗಳಿಗೆ ಸೂಚಿಸಿ ರಿಜಿಸ್ಟರ್ ಗಳನ್ನು ಪರಿಶೀಲಿಸಿದರು ನಂತರ ನರೇಗಾ ಕೂಲಿ ಕಾರ್ಮಿರಿಗೆ e-Kyc ಯನ್ನು 100% ಮಾಡುವಂತೆ ಪಿಡಿಒ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ,ADPC ರವರು,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು,ತಾಂತ್ರಿಕ ಸಹಾಯಕರು,BFT ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.